ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯವು ಬಹುಶಃ 18ನೇ ಶತಮಾನಕ್ಕೆ ಸೇರಿರುತ್ತದೆ, ಈ ದೇವಸ್ಥಾನ ನಿರ್ಮಾಣವಾಗಿ ಸುಮಾರು 250 ವರ್ಷಗಳಾಗಿರುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಕುರಿತು ಯಾವುದೇ ಶಾಸನ ಗ್ರಂಥಗಳಲ್ಲಿ ಉಲ್ಲೇಖವಿರುವುದಿಲ್ಲ. ಈ ಸ್ಥಳದಲ್ಲಿ ಅನೇಕ ವರ್ಷಗಳ ಹಿಂದೆ ಒಂದು ದೊಡ್ಡ ಹುತ್ತವಿತ್ತು ಅನೇಕ ಭಕ್ತಾದಿಗಳಿಂದ ಆ ಹುತ್ತಕ್ಕೆ ಪೂಜೆಯು ನಡೆಯುತ್ತಿತ್ತು. ಒಂದಾನೊAದು ದಿನ ರಾಜ ವಂಶಸ್ಥರೊಬ್ಬರು ಮದರಾಸಿಗೆ ಹೋಗುವ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಭಕ್ತಾದಿಗಳನ್ನು ನೋಡಿ ವಿಶೇಷವೇನೆಂದು ಕೇಳಲು ಅಲ್ಲಿಯ ಭಕ್ತಾದಿಗಳು ಹುತ್ತಕ್ಕೆ ಹರಕೆ ಹೊತ್ತು ಪೂಜೆ ಮಾಡುವುದರಿಂದ ನಾಗರಾಜನು ಅವರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ ಮಂಗಳವನ್ನುAಟು ಮಾಡುವನೆಂದು ನಂಬಿ ಪೂಜಿಸುತ್ತಿರುವುದಾಗಿ ತಿಳಿಸಿದರು. ರಾಜ ಪರಿವಾರದವರಲ್ಲಿ ಒಬ್ಬರಿಗೆ ದೃಷ್ಠಿ ದೋಷವಿತ್ತು, ದೃಷ್ಠಿ ದೋಷದ ನಿವಾರಣೆಗಾಗಿ ಹರಕೆ ಹೊತ್ತರು, ಕಾಲನಂತರ ಸುಬ್ರಹ್ಮಣ್ಯನ ಅನುಗ್ರಹದಿಂದ...