ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನ, ಶಿವಳ್ಳಿ, ಉಡುಪಿ, ಉಡುಪಿ .
Sri Anantheshwara and Chandramouleshwara Temple, Shivalli, Udupi, Udupi District [TM000163]
×
Temple History
ಇತಿಹಾಸ
ಶ್ರೀ ಅನಂತೇಶ್ವರ ಉಡುಪಿಯ ಅತ್ಯಂತ ಪುರಾತನ ದೇವಾಲಯ, ಶಿವಳ್ಳಿ ಎಂದು ಈ ಗ್ರಾಮಕ್ಕೆ ಹೆಸರು ಬರಲು ಕಾರಣವಾದ ದೇವಾಲಯ, ಈ ದೇವಾಲಯವನ್ನು ಕೇಂದ್ರವಾಗಿಸಿ ನೆಲೆಗೊಂಡ ಬ್ರಾಹ್ಮಣ ಸಮುದಾಯವೇ “ಶಿವಳ್ಳಿ ಬ್ರಾಹ್ಮಣರು “ ಎಂದು ಪ್ರಸಿದ್ಧರಾದರು.
ಶಿವಳ್ಳಿಯ ಮೂಲರೂಪ “ಶಿವಳ್ಳಿ” ಎಂದು ಕೆಲವರ ಅಭಿಪ್ರಾಯ, ಪ್ರಾಚೀನ ಗ್ರಂಥಗಳಲ್ಲಿ ಇದನ್ನು “ಶಿವಬೆಳ್ಳಿ” ಎಂದು ಕರೆದಿದ್ದಾರೆ, ಈ ಮಾತೇ ಸಂಸ್ಕೃತದಲ್ಲಿ “ ರೂಪ್ಯಪೀಠ” “ರಜತಪೀಠ” ಎಂದೆಲ್ಲ ಪ್ರಸಿದ್ಧವಾಯಿತು. ಹೀಗೆ ಉಡುಪಿಗೆ ರೂಪ್ಯ-ಪೀಠಪುರ ಎಂದು ಹೆಸರು ಬಂದದ್ದು ಈ ದೇವಾಲಯದಿಂದ.
ಇಲ್ಲಿರುವ ಮೂರ್ತಿ ಶೈವರಿಗೆ ಶಿವ ವೈಷ್ಣವರಿಗೆ ಶಿವನೂ ಹೌದು: ವಿಷ್ಣುವೂ ಹೌದು, ಅದಕ್ಕೆಂದೇ ಇಲ್ಲಿರುವುದು ಲಿಂಗ. ಆದರ ಪ್ರಾಚೀನ ಉತ್ಸವಮೂರ್ತಿ ಆನಂತ ಪದ್ಮನಾಭ ಹೀಗೆ ಇದೊಂದು ಹರಿಹರ ಕ್ಷೇತ್ರ . ಹರ ಲಿಂಗದಲ್ಲಿ ಹರಿ ನೆಲೆಸಿದ...ಶ್ರೀ ಅನಂತೇಶ್ವರ ಉಡುಪಿಯ ಅತ್ಯಂತ ಪುರಾತನ ದೇವಾಲಯ, ಶಿವಳ್ಳಿ ಎಂದು ಈ ಗ್ರಾಮಕ್ಕೆ ಹೆಸರು ಬರಲು ಕಾರಣವಾದ ದೇವಾಲಯ, ಈ ದೇವಾಲಯವನ್ನು ಕೇಂದ್ರವಾಗಿಸಿ ನೆಲೆಗೊಂಡ ಬ್ರಾಹ್ಮಣ ಸಮುದಾಯವೇ “ಶಿವಳ್ಳಿ ಬ್ರಾಹ್ಮಣರು “ ಎಂದು ಪ್ರಸಿದ್ಧರಾದರು.
ಶಿವಳ್ಳಿಯ ಮೂಲರೂಪ “ಶಿವಳ್ಳಿ” ಎಂದು ಕೆಲವರ ಅಭಿಪ್ರಾಯ, ಪ್ರಾಚೀನ ಗ್ರಂಥಗಳಲ್ಲಿ ಇದನ್ನು “ಶಿವಬೆಳ್ಳಿ” ಎಂದು ಕರೆದಿದ್ದಾರೆ, ಈ ಮಾತೇ ಸಂಸ್ಕೃತದಲ್ಲಿ “ ರೂಪ್ಯಪೀಠ” “ರಜತಪೀಠ” ಎಂದೆಲ್ಲ ಪ್ರಸಿದ್ಧವಾಯಿತು. ಹೀಗೆ ಉಡುಪಿಗೆ ರೂಪ್ಯ-ಪೀಠಪುರ ಎಂದು ಹೆಸರು ಬಂದದ್ದು ಈ ದೇವಾಲಯದಿಂದ.
ಇಲ್ಲಿರುವ ಮೂರ್ತಿ ಶೈವರಿಗೆ ಶಿವ ವೈಷ್ಣವರಿಗೆ ಶಿವನೂ ಹೌದು: ವಿಷ್ಣುವೂ ಹೌದು, ಅದಕ್ಕೆಂದೇ ಇಲ್ಲಿರುವುದು ಲಿಂಗ. ಆದರ ಪ್ರಾಚೀನ ಉತ್ಸವಮೂರ್ತಿ ಆನಂತ ಪದ್ಮನಾಭ ಹೀಗೆ ಇದೊಂದು ಹರಿಹರ ಕ್ಷೇತ್ರ . ಹರ ಲಿಂಗದಲ್ಲಿ ಹರಿ ನೆಲೆಸಿದ ಕ್ಷೇತ್ರ ಎಂದು ಶ್ರೀ ವಾದಿರಾಜರು ಈ ಸ್ಥಾನವನ್ನು ಕೊಂಡಾಡಿದ್ದಾರೆ.
ಆಚಾರ್ಯ ಮಧ್ವರ ತಂದೆ ಈ ದೇವಸ್ಥಾನದ ಅರ್ಚಕರಾಗಿದ್ದರು ಎಂದು ಐತಿಹ್ಯ. ಅವರು ಇಲ್ಲಿಂದ ಪಾಜಕಕ್ಕೆ ನೆಲೆಸಿದಾಗ ಈ ಅಧಿ ದೈವತದ ನೆನಪಿಗಾಗಿ ಒಂದು ಅನಂತ ಪದ್ಮನಾಭನ ಪ್ರತೀಕವನ್ನು ತಮ್ಮ ಉಪಾಸ್ಯ ಮೂರ್ತಿಯಾಗಿ ಪಾಜಕದಲ್ಲಿ ತಂದಿಟ್ಟುಕೊಂಡರು. ಆ ವಿಗ್ರಹ ಈಗಲೂ ಅಲ್ಲಿ ಪೂಜೆಗೊಳ್ಳುತ್ತಿದೆ. ಆಚಾರ್ಯರ ಪೂರ್ವದಲ್ಲಿ ಅಲ್ಲಿ ವಿಷ್ಣುವಿನ ಆರಾಧನೆ ನಡೆಯುತ್ತಿತ್ತು ಎನ್ನುವುದಕ್ಕೆ ಇದೂ ಒಂದು ಸಾಕ್ಷಿ. ಈ ಅಧಿದೈವತದ ಸೇವೆಯನ್ನು ನಡಿಲ್ಲಾಯ ದಂಪತಿಗಳು ಹರಕೆ ಹೊತ್ತು ನಡೆಸಿದ ಫಲವಾಗಿಯೇ ಆಚಾರ್ಯ ಮದ್ವರ ಅವತಾರವಾಯಿತ್ತು ಎಂದು “ಮಧ್ವವಿಜಯ” ಹೇಳುತ್ತದೆ.
ಈ ದೇವಾಲಯದ ಪ್ರಾಚೀನ ಹೆಸರು ಪಡು ದೇವಾಲಯ. ಪಡು ದೇವಾಲಯದ ಮಹಾದೇವರು ಎಂದು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖ ಉಂಟು, ಆದರ ಪೂರ್ವದಲ್ಲಿರುವ ಚಂದ್ರೇಶ್ವರನ ಮಂದಿರವೇ ಮೂಡು ದೇವಾಲಯ.
ಆಚಾರ್ಯ ಮಧ್ವರು ತನ್ನ ಶಿಷ್ಯರಿಗೆ ಪ್ರವಚನ ನಡೆಸುತ್ತಿದ್ದುದ್ದು ಈ ದೇವಾಲಯದ ಒಳ ಆವರಣದಲ್ಲಿ ಆಚಾರ್ಯರು ಇಲ್ಲಿ ಐತರೇಯ ಪ್ರವಚನ ಮಾಡುತ್ತಿದ್ದಾಗ ಮುಗಿಲಿನಿಂದ ಪುಷ್ಪವೃಷ್ಟಿಯಾದ ಪ್ರಸಂಗವನ್ನು ಮಧ್ವವಿಜಯ ಉಲ್ಲೇಖಿಸುತ್ತದೆ.
ಆಚಾರ್ಯರು ಪ್ರವಚನ ಮಾಡುವಾಗ ಕೂಡುತ್ತಿದ್ದ ಶಿಲಾಫಲಕ ಈಗಲೂ ಅಲ್ಲಿ ಪೂಜೆಗೊಳ್ಳುತ್ತಿದೆ. ಆ ಫಲಕದ ಮೇಲೆ ಬೇರೆ ವಿಗ್ರಹವಿಲ್ಲ. ಶಿಲಾಫಲಕಕ್ಕೆ ಪೂಜೆ, ಅದರಲ್ಲಿ ಆಚಾರ್ಯ ಮಧ್ವರು ಸದಾ ಸನ್ನಿಹಿತರಾಗಿದ್ದಾರೆ ಎಂದು ಶ್ರೀ ವಾದಿರಾಜರು ಬಣ್ಣಿಸಿದ್ದಾರೆ.
ಈ ದೇವಾಲಯದ ವಾಸ್ತುವೂ ಇದರ ಪ್ರಾಚೀನತೆಗೆ ಸಾಕ್ಷಿ. ಗಜಪುಷ್ಪಾಕಾರದ ಗರ್ಭ ಗೃಹ ಇದರ ಪುರಾನತೆಯನ್ನು ಸಾರುತ್ತದೆ.
ಅನಂತೇಶ್ವರ ದೇವರ ಎದುರುಗಡೆಯೇ ಪೂರ್ವದಿಕ್ಕಿನಲ್ಲಿ ಪುಟ್ಟ ದೇವಸ್ಥಾನ. ಪುರಾತನವಾದರೂ ಇದರ ಬಗ್ಗೆ ಹೆಚ್ಚಿನ ಐತಿಹಾಸಿಕ ವಿವರಗಳು ದೊರೆತಿಲ್ಲ.
ಬಳಕೆಯಲ್ಲಿರುವ ಒಂದು ಐತಿಹ್ಯ ಹೀಗಿದೆ. ಉಡುಪಿಯ ಕೇಂದ್ರದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಅಬಾರಣ್ಯ (ಪ್ರಸ್ತುತ ಪೂರ್ಣಪ್ರಜ್ಞಾ ಕಾಲೇಜು) ಎಂಬ ಬನವೊಂದಿದೆ. ಅಲ್ಲಿ ಒಂದು ಪುಷ್ಕರಣೆಯೂ ಇದೆ. ಇಲ್ಲಿ ಚಂದ್ರ ತಪಸ್ಸು ಮಾಡಿದನಂತೆ. ಅದಕ್ಕೆಂದೇ ಈ ಸ್ಥಳಕ್ಕೆ ಅಬಾರಣ್ಯ ಎಂದು ಹೆಸರಿಸಲಾಯಿತಂತೆ. ಚಂದ್ರನ ತಪಸ್ಸಿಗೆ ಮೆಚ್ಚಿ ಒಲಿದ ಶಿವ ತಾಣವೇ ಚಂದ್ರಮೌಳೇಶ್ವರ ದೇವಾಲಯ ಹೀಗೆಂದು ಒಂದು ನಂಬಿಕೆ ಇಲ್ಲಿ ಪ್ರಚಲಿತವಾಗಿದೆ.
ಚಂದ್ರಮೌಳೇಶ್ವರ ದೇವಾಲಯದ ಗಾತ್ರದಲ್ಲಿ ಅನಂತೇಶ್ವರ ದೇವಸ್ಥಾನಕ್ಕಿಂತ ಚಿಕ್ಕದ್ದು, ಹಿಂದಿನ ಕಾಲದಲ್ಲಿ ಈ ದೇವಸ್ಥಾನವನ್ನು “ಮೂಡು ದೇವಾಲಯ” (ಮಹೇಂದ್ರ ದಿಗಾಲಯ) ಎಂದು ಕರೆಯುತ್ತಿದ್ದರು ಎಂದು ಮಧ್ವ ವಿಜಯದಿಂದ ತಿಳಿದುಬಂದಿರುತ್ತದೆ. ಗ್ರಾಮದ ಪ್ರಧಾನ ದೇವಸ್ಥಾನವಾಗಿದ್ದ ಶ್ರೀ ಅನಂತೇಶ್ವರ ಮೂಡು ದಿಕ್ಕಿನಲ್ಲಿರುವುದರಿಂದ ಈ ಹೆಸರು ಬಂತು.
ಇಂದಿಗೂ ಸ್ವಾಮೀಜಿಯವರು ಪರ್ಯಾಯಕ್ಕೆ ಕೊಡುವ ಮುನ್ನ ಚಂದ್ರಮೌಳೇಶ್ವರ ದರ್ಶನ ಮಾಡಿ ಅನಂತರ ಶ್ರೀ ಅನಂತಾಸನ ಸಂದರ್ಶನ ನಂತರ ಶ್ರೀ ಕೃಷ್ಣನ ದರ್ಶನ ಮಾಡುವ ಸಂಪ್ರದಾಯ ಇಂದಿಗೂ ನಡೆದು ಬಂದಿದೆ.