ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಾಲಯ, 15ನೇ ಅಡ್ಡ ರಸ್ತೆ ಸಂಪಿಗೆ ರಸ್ತೆ, ಮಲ್ಲೇಶ್ವರಂ - 560003, ಬೆಂಗಳೂರು .
Sri Kadu Malleshwara Swamy Temple, 5th Cross Sampige Road, Malleshwaram - 560003, Bengaluru Urban District [TM000020]
×
Temple History
ಸ್ಥಳ ಪುರಾಣ
ಬೆಂಗಳೂರು ನಗರ ಮಲ್ಲೇಶ್ವರಂನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ (ಕಾಡುಮಲ್ಲಿಕಾರ್ಜುನ ಸ್ವಾಮಿ)ಯು ಅತಿ ಪುರಾತನವಾದ ಉದ್ಭವ ಮೂರ್ತಿಯಾಗಿರುತ್ತದೆ. ಕೆಲವು ಶತಮಾನಗಳ ಹಿಂದ ಬಿಜಾಪುರ ರಾಜ್ಯಕ್ಕೆ ಸೇರಿದ ಈ ಬೆಂಗಳೂರು ಗ್ರಾಮವು ಮರಾಠ ಸಂಸ್ಥಾನ ಸ್ಥಾಪಕರಾದ ಶ್ರೀ ಶಿವಾಜಿ ಮಹಾರಾಜರ ತಂದೆ ಷಾಹಜಿ ಯವರಿಗೆ ಜಹಗೀರಾಗಿ (ಕೊಡುಗೆಯಾಗಿ) ಕೊಡಲ್ಪಟ್ಟಿತು. ಷಾಹಜಿ ಯವರ ಆನಂತರ ಕ್ರಿ.ಶ. 1664ನೇ ವರ್ಷದಲ್ಲಿ ಈ ಗ್ರಾಮವು ಶಿವಾಜಿಯವರ ಸಹೋದರರಾದ ಎಕೋಜಿ(ವೆಂಕೋಜಿ) ರಾಯರ ಪಾಲಿಗೆ ಬಂದಿತು. ಇವರು 1669ನೇ ವರ್ಷದಲ್ಲಿ ಚೌತಾಯವನ್ನು(ತೆರಿಗೆ) ವಿಧಿಸುವುದಕ್ಕೆ ಮಂತ್ರಿಗಳಾದ ಬಾಜೀರಾವ್ ಪೇಷ್ಪೆಯವರೊಂದಿಗೆ ಈ ಪ್ರಾಂತ್ಯಕ್ಕೆ ಬಂದರು. ಮಲ್ಲಾಪುರದ ಮಲ್ಲಿಕಾರ್ಜುನ ಸ್ವಾಮಿಯೆಂಬ ಹೆಸರಿನಿಂದ ಪ್ರಖ್ಯಾತವಾಗಿದ್ದ ಶ್ರೀ ಕಾಡುಮಲ್ಲೇಶ್ವರ ಸ್ವಾಮಿಯವರನ್ನು ಕಂಡು ದೇವರನ್ನು ಪೂಜಿಸಿ ತರುವಾಯ ಗ್ರಾಮಸ್ಥರ ಪ್ರಾರ್ಥನೆ ಮೇರೆಗೆ ಮಲ್ಲೇಶ್ವರದ ಬಳಿ ಇದ್ದ ಮೇದರ ನಿಂಗನಹಳ್ಳಿಯೆಂಬ ಗ್ರಾಮವನ್ನು ಈ...ಬೆಂಗಳೂರು ನಗರ ಮಲ್ಲೇಶ್ವರಂನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ (ಕಾಡುಮಲ್ಲಿಕಾರ್ಜುನ ಸ್ವಾಮಿ)ಯು ಅತಿ ಪುರಾತನವಾದ ಉದ್ಭವ ಮೂರ್ತಿಯಾಗಿರುತ್ತದೆ. ಕೆಲವು ಶತಮಾನಗಳ ಹಿಂದ ಬಿಜಾಪುರ ರಾಜ್ಯಕ್ಕೆ ಸೇರಿದ ಈ ಬೆಂಗಳೂರು ಗ್ರಾಮವು ಮರಾಠ ಸಂಸ್ಥಾನ ಸ್ಥಾಪಕರಾದ ಶ್ರೀ ಶಿವಾಜಿ ಮಹಾರಾಜರ ತಂದೆ ಷಾಹಜಿ ಯವರಿಗೆ ಜಹಗೀರಾಗಿ (ಕೊಡುಗೆಯಾಗಿ) ಕೊಡಲ್ಪಟ್ಟಿತು. ಷಾಹಜಿ ಯವರ ಆನಂತರ ಕ್ರಿ.ಶ. 1664ನೇ ವರ್ಷದಲ್ಲಿ ಈ ಗ್ರಾಮವು ಶಿವಾಜಿಯವರ ಸಹೋದರರಾದ ಎಕೋಜಿ(ವೆಂಕೋಜಿ) ರಾಯರ ಪಾಲಿಗೆ ಬಂದಿತು. ಇವರು 1669ನೇ ವರ್ಷದಲ್ಲಿ ಚೌತಾಯವನ್ನು(ತೆರಿಗೆ) ವಿಧಿಸುವುದಕ್ಕೆ ಮಂತ್ರಿಗಳಾದ ಬಾಜೀರಾವ್ ಪೇಷ್ಪೆಯವರೊಂದಿಗೆ ಈ ಪ್ರಾಂತ್ಯಕ್ಕೆ ಬಂದರು. ಮಲ್ಲಾಪುರದ ಮಲ್ಲಿಕಾರ್ಜುನ ಸ್ವಾಮಿಯೆಂಬ ಹೆಸರಿನಿಂದ ಪ್ರಖ್ಯಾತವಾಗಿದ್ದ ಶ್ರೀ ಕಾಡುಮಲ್ಲೇಶ್ವರ ಸ್ವಾಮಿಯವರನ್ನು ಕಂಡು ದೇವರನ್ನು ಪೂಜಿಸಿ ತರುವಾಯ ಗ್ರಾಮಸ್ಥರ ಪ್ರಾರ್ಥನೆ ಮೇರೆಗೆ ಮಲ್ಲೇಶ್ವರದ ಬಳಿ ಇದ್ದ ಮೇದರ ನಿಂಗನಹಳ್ಳಿಯೆಂಬ ಗ್ರಾಮವನ್ನು ಈ ಸ್ವಾಮಿಗೆ ಮಾನ್ಯವಾಗಿ ಅರ್ಪಿಸಿ ಈ ಧರ್ಮವು ಆಚಂದ್ರಾರ್ಕವು ನಡೆಯಬೇಕೆಂದು ಇದಕ್ಕೆ ಯಾರು ಭಂಗವನ್ನು ಉಂಟು ಮಾಡಕೂಡದೆಂದು ವಿಧಿಸಿ ಈ ಕಳಕಂಡಂತೆ ಶಿಲಾ ಶಾಸನವನ್ನು ಬರೆಯಿಸಿರುತ್ತಾರೆ.
“ಸೌಮ್ಯ ಸಂವತ್ಸರದ ಮಾರ್ಗಶಿರ ಶುದ್ಧ
ಶ್ರೀಮನ್ ಮಲ್ಲಪುರದ ಮಲ್ಲಿಕಾರ್ಜುನ ದೇವರ ದೇವಮಾನ್ಯಕ್ಕೆ
ಎಕೋಜಿರಾಯರ ಬೆಂಗಳೂರು ಮಹಾನಾಡು ಕೇಳಲಿಕ್ಕಾಗಿ
ಮೇದರ ನಿಂಗನಹಳ್ಳಿಯ ಧರ್ಮಕ್ಕೆ ಕೊಟ್ಟಿತು. ಕೋಟಿ ಚಂದ್ರ
ಸೂರ್ಯರು ಉಳ್ಳ ಕಾಲವೂ ಧರ್ಮಕ್ಕೆ ಕೊಟ್ಟಿನು. ಈ ಧರ್ಮಕ್ಕೆ
ವಕ್ರ ಮಾಡಿದವರು ಕತ್ತೆಯಾಗಿ ಕಾಗೆಯಾಗಿ ಚಂಚಾಲರ ಜನ್ಮದಲ್ಲಿ
ಹುಟ್ಟುವರು ದೇವತಾ ಶಾಪಕ್ಕೆ ಒಳಗಾಗುವರು ಎಂಬುದು ಇಲ್ಲಿನ ಐತಿಹ್ಯ”
ಮುಂದೆ ಶ್ರೀ ಮಲ್ಲಪ್ಪ ಶೆಟ್ಟರು ಹಾಗೂ ಅನೇಕ ಭಕ್ತಾಧಿಗಳು ಸೇರಿ ದೇವಾಲಯದ ಅಭಿವೃದ್ಧಿ ಮಾಡಿರುತ್ತಾರೆ.
ಈ ದೇವಾಲಯದಲ್ಲಿ ಪ್ರತಿ ಸೋಮವಾರ ವಿಶೇಷ ಅಭಿಷೇಕ ಪೂಜೆಗಳು ನೆರವೇರುತ್ತದೆ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ ಮತ್ತು ಶಿವದೀಪೋತ್ಸವ ಪೂಜಾ ಕೈಂಕರ್ಯಗಳು ನಡೆಯಲ್ಪಡುತ್ತದೆ. ಕಾರ್ತೀಕ ಮಾಸದ 3ನೇ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ. ಪ್ರತಿ ಹದಿನೈದು ದಿನಗಳಲ್ಲಿ ಬರುವ ಪ್ರದೋಷ ಪೂಜೆಗಳು ವಿಶೇಷವಾಗಿರುತ್ತದೆ. ಮಹಾ ಶಿವರಾತ್ರಿ ದಿನದಂದು ಆಹೋರಾತ್ರಿ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಈ ದಿನದಂದು ಅಸಂಖ್ಯಾತ ಭಕ್ತಾಧಿಗಳು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಈ ದೇವಾಲಯದ ಬ್ರಹ್ಮ ರಥೋತ್ಸವವು ಮಹಾಶಿವರಾತ್ರಿಯ ಮರು ದಿನ ವಿಶೇಷವಾಗಿ ನಡೆಯಲ್ಪಡುತ್ತದೆ.
ರಥೋತ್ಸವದ ಉತ್ಸವಗಳು ಒಂದು ತಿಂಗಳ ಕಾಲ ನಡೆಯುವುದು ವಿಶೇಷವಾಗಿದೆ. ಯುಗಾದಿ, ಗೌರಿ-ಗಣೇಶ, ನವರಾತ್ರಿ, ಧನುರ್ಮಾಸಗಳಲ್ಲಿ ಗುರುಬಲ ಹಾಗೂ ವಿದ್ಯಾಭ್ಯಾಸಕ್ಕಾಗಿ ದಕ್ಷಿಣಾ ಮೂರ್ತಿ ಪೂಜೆ, ಅನಾರೋಗ್ಯ ಪರಿಹಾರಕ್ಕಾಗಿ ಮೃತ್ಯುಂಜಯ ಹೋಮ, ವಿವಾಹಕ್ಕಾಗಿ ಕದಲಿ ಹಾಗೂ ಅರ್ಕ ವಿವಾಹ ನಡೆಸುವುದು ವಿಶೇಷವಾಗಿರುತ್ತದೆ. ಶ್ರೀಯವರಿಗೆ ರಾಜಗೋಪುರ, ವಿಮಾನಗೋಪುರ ನಿರ್ಮಿಸಲಾಗಿದೆ. ಈ ದೇವಾಲಯದ ಆವರಣದಲ್ಲಿ ಶ್ರೀ ವಲ್ಲಿ ಸಮೇತ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಇರುತ್ತದೆ.