ಶ್ರೀ ಅನಂತ ಪದ್ಮನಾಭ ದೇವಾಲಯ, ಕುಡುಪು, ದಕ್ಷಿಣ ಕನ್ನಡ - 575028, ದಕ್ಷಿಣ ಕನ್ನಡ .
Sri Anantha Padmanabha Temple, Kudupu, Dakshina Kannada - 575028, Dakshina Kannada District [TM000048]
×
Temple History
ಸ್ಥಳ ಪುರಾಣ
ಶ್ರೀ ದೇವಾಲಯವು ಕೃತಯುಗದಲ್ಲಿ ಸ್ಥಾಪಿಸಿದ ದೇವಾಲಯ ಎಂದು ಸ್ಥಳ ಪುರಾಣದಲ್ಲಿ ಉಲ್ಲೇಖವಿದೆ. ದೇವಾಲಯಕ್ಕೆ ಸುಮಾರು 800 ವರ್ಷಗಳಾಗಿವೆ. ವೀರಬಾಹು ಎನ್ನುವ ಅರಸ/ರಾಜ ತಾನು ಮಾಡಿದ ಪಾಪ ಕೃತ್ಯದ ನಿವಾರಣೆಗಾಗಿ ಕುಡುಪು ಎನ್ನುವ ಸ್ಥಳದಲ್ಲಿ ಶ್ರೀಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವರಿಗೆ ದೇವಾಲಯವನ್ನು ನಿರ್ಮಿಸಿದನು ಎಂದು ಸ್ಥಳ ಪುರಾಣದಲ್ಲಿ ಉಲ್ಲೇಖವಿದೆ. ದೇವಾಲಯದ ಮೂಲ ರೂಪ ಉದ್ಧವ ಲಿಂಗರೂಪದಲ್ಲಿದೆ. ನಿತ್ಯ ಪೂಜೆಗಳಿಗೆ ಪ್ರತಿಷ್ಠಾಪಿತ ಮೂರ್ತಿಯು ಇದೆ.
ಶ್ರೀ ದೇವಾಲಯದಲ್ಲಿ ಪ್ರಧಾನವಾಗಿ ನಾಗದೇವರ ಆರಾಧನೆ ಇರುವುದರಿಂದ ನಾಗಸಂಬಂಧಿ ದೋಷಗಳು, ಚರ್ಮವ್ಯಾಧಿ ದೋಷಗಳು ಪರಿಹಾರವಾಗುತ್ತದೆ ಮತ್ತು ಸಂತಾನ ಇಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಶ್ರೀ ದೇವಾಲಯದ ಭದ್ರಾ ಸರಸ್ವತೀ ತೀರ್ಥ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿ ಉರುಳುಸೇವೆ ಮಾಡುವುದಕ್ಕೆ ಪ್ರಸಿದ್ದಿಯಾಗಿದೆ. ಶ್ರೀದೇವಾಲಯದಲ್ಲಿ ಆಶ್ಲೇಷಾಬಲಿ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ರಾತ್ರಿ ಹೂವಿನಪೂಜೆ...ಶ್ರೀ ದೇವಾಲಯವು ಕೃತಯುಗದಲ್ಲಿ ಸ್ಥಾಪಿಸಿದ ದೇವಾಲಯ ಎಂದು ಸ್ಥಳ ಪುರಾಣದಲ್ಲಿ ಉಲ್ಲೇಖವಿದೆ. ದೇವಾಲಯಕ್ಕೆ ಸುಮಾರು 800 ವರ್ಷಗಳಾಗಿವೆ. ವೀರಬಾಹು ಎನ್ನುವ ಅರಸ/ರಾಜ ತಾನು ಮಾಡಿದ ಪಾಪ ಕೃತ್ಯದ ನಿವಾರಣೆಗಾಗಿ ಕುಡುಪು ಎನ್ನುವ ಸ್ಥಳದಲ್ಲಿ ಶ್ರೀಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವರಿಗೆ ದೇವಾಲಯವನ್ನು ನಿರ್ಮಿಸಿದನು ಎಂದು ಸ್ಥಳ ಪುರಾಣದಲ್ಲಿ ಉಲ್ಲೇಖವಿದೆ. ದೇವಾಲಯದ ಮೂಲ ರೂಪ ಉದ್ಧವ ಲಿಂಗರೂಪದಲ್ಲಿದೆ. ನಿತ್ಯ ಪೂಜೆಗಳಿಗೆ ಪ್ರತಿಷ್ಠಾಪಿತ ಮೂರ್ತಿಯು ಇದೆ.
ಶ್ರೀ ದೇವಾಲಯದಲ್ಲಿ ಪ್ರಧಾನವಾಗಿ ನಾಗದೇವರ ಆರಾಧನೆ ಇರುವುದರಿಂದ ನಾಗಸಂಬಂಧಿ ದೋಷಗಳು, ಚರ್ಮವ್ಯಾಧಿ ದೋಷಗಳು ಪರಿಹಾರವಾಗುತ್ತದೆ ಮತ್ತು ಸಂತಾನ ಇಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಶ್ರೀ ದೇವಾಲಯದ ಭದ್ರಾ ಸರಸ್ವತೀ ತೀರ್ಥ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿ ಉರುಳುಸೇವೆ ಮಾಡುವುದಕ್ಕೆ ಪ್ರಸಿದ್ದಿಯಾಗಿದೆ. ಶ್ರೀದೇವಾಲಯದಲ್ಲಿ ಆಶ್ಲೇಷಾಬಲಿ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ರಾತ್ರಿ ಹೂವಿನಪೂಜೆ ಮತ್ತು ಪವಮಾನ ಅಭಿಷೇಕ ಸೇವೆಗಳು ವಿಶೇಷ ಪೂಜೆಗಳು ಆಗಿವೆ.
ಶ್ರೀ ದೇವಾಲಯವು ಮಂಗಳೂರು ನಗರದಿಂದ 10 ಕಿಲೋ ಮೀಟರ್ ದೂರದ “ಕುಡುಪು” ಎಂಬ ಗ್ರಾಮದಲ್ಲಿ ಬೆಟ್ಟ ಗುಡ್ಡಗಳಿಂದ ಸುತ್ತುವರಿದ ಪ್ರಕೃತಿ ರಮ್ಯ ಸ್ಥಳದಲ್ಲಿದೆ. ಭದ್ರಾಸರಸ್ವತೀ ತೀರ್ಥಸರೋವರವಿದೆ .ಈ ತೀರ್ಥ ಸರೋವರದ ಶ್ರೀ ದೇವಾಲಯದ ಸಮೀಪ ನೈಸರ್ಗಿಕವಾದ ನೀರಿನಲ್ಲಿ ಔಷಧೀಯ ಗುಣಗಳಿವೆ ಎಂಬ ನಂಬಿಕೆಯಿದೆ.
ಶ್ರೀ ದೇವಾಲಯವನ್ನು ಮೂಲದಲ್ಲಿ ಕೇದಾರ ಭಟ್ಟ ಎನ್ನುವವರು ಸಂತಾನ ಪ್ರಾಪ್ತಿಗಾಗಿ ಭದ್ರಾ ಸರಸ್ವತೀ ತೀರ್ಥ ಸರೋವರದಲ್ಲಿ ಮಿಂದು ಶ್ರೀಸುಬ್ರಹ್ಮಣ್ಯ ದೇವರನ್ನು ಆರಾಧಿಸುತ್ತಾ ಮೂರು ಉರಗಾಂಡ/ಹಾವಿನ ರೂಪದ ಸಂತಾನ ಪಡೆದು, ಅಶರೀರವಾಣಿಯಂತೆ ಅನಂತ ಪದ್ಮನಾಭ ಹಾಗೂ ಸುಬ್ರಹ್ಮಣ್ಯ ದೇವತಾ ಸ್ವರೂಪದ ಮೂರು ಉರಗಾಂಡ/ಹಾವುಗಳನ್ನು ಕಾಡುಬಳ್ಳಿಗಳಿಂದ ಹೆಣೆದ ಬುಟ್ಟಿ “ಕುಡುಪು” ನಲ್ಲಿಟ್ಟು ಗುಪ್ತ ಸ್ಥಳದಲ್ಲಿ ಪ್ರತಿಷ್ಠೆ ಮಾಡಿ ಮೂರು ದೇವರುಗಳನ್ನು ಆರಾಧಿಸುತ್ತಾ ಇದ್ದರು. ಅದೇ ಸಮಯದಲ್ಲಿ ವೀರಬಾಹು ಎನ್ನುವ ಅರಸ ತಾನು ಮಾಡಿದ ಪಾಪ ಕೃತ್ಯದ ನಿವಾರಣೆಗಾಗಿ, ಆಸ್ಥಾನ ಪಂಡಿತರ ಸಲಹೆಯಂತೆ “ಕುಡುಪು” ಎನ್ನುವ ಸ್ಥಳದಲ್ಲಿ ಕೇದಾರ ಭಟ್ಟರು ಆರಾಧಿಸುತ್ತಿದ್ದ ಶ್ರೀ ಅನಂತ ಪದ್ಮನಾಭ ಹಾಗೂ ಸುಬ್ರಹ್ಮಣ್ಯ ದೇವರಿಗೆ ದೇವಾಲಯವನ್ನು ನಿರ್ಮಿಸಿ ತನ್ನ ಪಾಪಕೃತ್ಯ ನಿವಾರಣೆಗೊಂಡು ಮೋಕ್ಷವನ್ನು ಪಡೆದನು ಎಂದು ಸ್ಥಳ ಪುರಾಣದಲ್ಲಿ ಉಲ್ಲೇಖವಿದೆ.
ಶ್ರೀ ದೇವಾಲಯದ ಹೊರ ಪ್ರಾಂಗಣದಲ್ಲಿ ಒಟ್ಟು ನಾಲ್ಕು ಶಿಲಾಶಾಸನಗಳಿದ್ದು, ಸ್ಥಳೀಯ ತಜ್ಞರಿಂದ ಅದನ್ನು ಓದಿಸಿದಾಗ, ಅದರಲ್ಲಿ ಮೂರು ಶಾಸನಗಳ ಅಕ್ಷರಗಳು ಸಂಪೂರ್ಣ ಸವೆದಿದ್ದು, ಉಳಿದ ಒಂದು ಶಾಸನದಲ್ಲಿ ಶ್ರೀ ದೇವಾಲಯಕ್ಕೆ ಭೂಮಿಯನ್ನು ಉಂಬಳ ಕೊಟ್ಟರುವ ಬಗ್ಗೆ ಉಲ್ಲೇಖವಿದೆ.
ಶ್ರೀ ದೇವಾಲಯವು 2018 ರಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡಿರುತ್ತದೆ. ಈ ಸಮಯದಲ್ಲಿ ದೇವಾಲಯದ ಇತಿಹಾಸ ಸಾರುವ ಮರದ ಶಿಲ್ಪಕಲೆಗಳನ್ನು ಗರ್ಭಗೃಹದ ದೀಪಾಗಾರದಲ್ಲಿ ಅಳವಡಿಸಲಾಗಿದೆ ಮತ್ತು ಸಂಪೂರ್ಣ ದೇವಾಲಯವನ್ನು ಇಲ್ಲಿನ ಇತಿಹಾಸ, ಭೌಗೋಳಿಕ ಹಿನ್ನೆಲೆಗಳನ್ನು ಗಮನದಲ್ಲಿರಿಸಿ ಗರ್ಭಗುಡಿ ಮತ್ತು ಸುತ್ತುಪೌಳಿ, ನಾಗವನ ಮತ್ತು ಭದ್ರಾಸರಸ್ವತೀ ತೀರ್ಥಕೆರೆಗಳನ್ನು ತೌಳವ ಶೈಲಿಯಲ್ಲಿ ನವೀಕರಣ ಮಾಡಲಾಗಿದೆ.
ಶ್ರೀ ದೇವಾಲಯವು ನಾಗಾರಾದನೆಗೆ ಬಹಳ ಪ್ರಸಿದ್ದಿಯನ್ನು ಪಡೆದಿದ್ದು, ಇಲ್ಲಿ ಪ್ರತೀ ಅಮವಾಸ್ಯೆ ನಂತರ ಬರುವ ಶುದ್ಧಪಂಚಮಿ/ಶುಕ್ಲಪಕ್ಷದ ಪಂಚಮಿ ಶುದ್ಧಷಷ್ಠಿ/ಶುಕ್ಲಪಕ್ಷದ ಷಷ್ಠೀ ಹಾಗೂ ಪ್ರತೀ ಹುಣ್ಣಿಮೆ ನಂತರ ಬರುವ ಬಹುಳ ಪಂಚಮಿ/ಕೃಷ್ಣಪಕ್ಷದ ಪಂಚಮಿ ಹಾಗೂ ಬಹುಳ ಷಷ್ಠಿ/ಕೃಷ್ಣಪಕ್ಷದ ಷಷ್ಠೀ ಮತ್ತು ಆಶ್ಲೇಷಾ ನಕ್ಷತ್ರದ ದಿನವೂ ಪೂಜೆಗಳನ್ನು/ಸೇವೆಗಳನ್ನು ನಡೆಸಲು ವಿಶೇಷ ದಿನಗಳಾಗಿವೆ. ವಿಶೇಷವಾಗಿ ನಿತ್ಯ ನಡೆಯುವ ಸೇವೆಗಳಾದ ಪಂಚಾಮೃತ ಅಭಿಷೇಕ, ನಾಗತಂಬಿಲ, ಸಹಸ್ರನಾಮ ಅರ್ಚನೆ, ಅಷ್ಟೋತ್ತರ ಅರ್ಚನೆ, ಕಾರ್ತಿಕಪೂಜೆ, ಮತ್ತು ವಿಶೇಷ ಸೇವೆಗಳಾದ ಆಶ್ಲೇಷಾಬಲಿ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ರಾತ್ರಿ ಹೂವಿನಪೂಜೆ ಮತ್ತು ಪವಮಾನ ಅಭಿಷೇಕ ಸೇವೆಗಳು ನಾಗ ಸಂಬಂಧಿ ದೋಷಗಳು, ಚರ್ಮವ್ಯಾಧಿ ದೋಷಗಳು ಪರಿಹಾರವಾಗುತ್ತದೆ ಮತ್ತು ಸಂತಾನ ಇಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಶ್ರೀ ದೇವಾಲಯದಲ್ಲಿ ಕಲಶ ಸ್ನಾನ ಎನ್ನುವ ಆಚರಣೆ ಇದ್ದು, ದೇವಾಲಯದ ಭದ್ರಾ ಸರಸ್ವತೀ ತೀರ್ಥ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿ ದೇವರ ತೀರ್ಥ ಹಾಕಿರುವ ಕಲಶ ನೀರನ್ನು ಸುರಿಸುವುದರಿಂದ ಚರ್ಮ ವ್ಯಾಧಿದೋಷಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.
ಶ್ರೀ ದೇವಾಲಯದ ಆವರಣದೊಳಗಡೆ ಇರುವ ಭದ್ರಾ ಸರಸ್ವತೀ ತೀರ್ಥ ಸರೋವರದಲ್ಲಿ ಪುಣ್ಯ ಸ್ನಾನ ಮಾಡುವುದಕ್ಕೆ ಪ್ರಸಿದ್ಧಿಯಾಗಿದೆ. ಸರೋವರದ ನೀರಿನಲ್ಲಿ ಔಷಧೀಯ ಗುಣಗಳಿರುವುದರಿಂದ ಚರ್ಮ ವ್ಯಾಧಿ ದೋಷಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ಶ್ರೀ ದೇವಾಲಯದಲ್ಲಿ ದೃಷ್ಟಿದಾರ, ತೀರ್ಥಕಾಯಿ, ಅಂತ್ರ ತಾಯಿತಾ, ಮುಂತಾದ ಯಾವುದೇ ಸಂಪ್ರದಾಯ ಆಚರಣೆಗಳು ಇರುವುದಿಲ್ಲ.