ಶ್ರೀ ಕ್ಷೇತ್ರ ಸಾಸಲು ಕ್ರಿ.ಶ 1043 ರ ಇಸವಿ ಹೊಯ್ಸಳರ ತ್ರಿಭುವನ ವತ್ಸಲ ಎಂಬ ಬಿರುದಿನ ರಾಜನ ಕಾಲದಲ್ಲಿ ಸ್ಥಾಪಿತವಾದ ಸುಮಾರು 973 ವರ್ಷಗಳ ಇತಿಹಾಸವಿರುವ ಐತಿಹಾಸಿಕ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿರುತ್ತದೆ. ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ಉದ್ಬವ ಲಿಂಗದ ದೇವಸ್ಥಾನಗಳು. ಬಯಲು ಸೀಮೆಯ ಸುಬ್ರಹ್ಮಣ್ಯ ಚರ್ಮ ವ್ಯಾಧಿಯು ಪರಿಹಾರವಾಗುವ ಕೊಳದ (ಕಲ್ಯಾಣಿ) ನೀರು, ಹಾವು ಕಚ್ಚಿದವರಿಗೆ ರಕ್ಷಿಸುವ ವಿಭೂತಿ ಪ್ರಸಾದ ಶಿವಲಿಂಗದ ಮುಂಭಾಗ ಜೋಡಿ ಬಸವಗಳು ಭೈರವ ರಾಜರು ಶಿವ ಪಾರ್ವತಿಯ ಜೊತೆಯಲ್ಲಿ ಕೈಲಾಸಕ್ಕೆ ಹೋದಾಗ ಮೇಲ್ಮುಖವಾಗಿ ಕೈಲಾಸ ನೋಡುತ್ತಿರುವ ಬಸವನ ಮೂರ್ತಿ ಇರುವ ಕಾರಣದಿಂದ ಶ್ರೀ ಕ್ಷೇತ್ರವು ಪ್ರಸಿದ್ದಿಯಾಯಿತು.