ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಬೋಳಾರ, ಮಂಗಳೂರು - 575001, ದಕ್ಷಿಣ ಕನ್ನಡ .
Mahathobara Sri Mangaladevi Temple, Bolara, Mangaluru - 575001, Dakshina Kannada District [TM000105]
×
Temple History
ಇತಿಹಾಸ
ತುಳು ನಾಡನ್ನು ಆಳುಪ ವಂಶದ ಅರಸರಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಕುಂದವರ್ಮನು ಮಂಗಳಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ತುಳುನಾಡನ್ನು ಆಳುತ್ತಿದ್ದನು. ಅದೇ ಸಮಯ ಉತ್ತರ ನೇಪಾಳ ದೇಶದಿಂದ ಮಚ್ಚೇಂದ್ರನಾಥ ಗೋರಕನಾಥರೆಂಬ ಯೋಗಿದ್ವಯರು ತಮ್ಮ ಶಿಷ್ಯ ಗಣದೊಂದಿಗೆ ನೇತ್ರಾವತಿ ನದಿಯನ್ನು ದಾಟಿ, ಮಂಗಳಾಪುರಕ್ಕೆ ಕಾಲಿರಿಸುವರು ಆ ಸ್ಥಳವನ್ನು ಇಂದಿಗೂ ಗೋರಕ ದಂಡು ಎಂದು ಕರೆಯುತ್ತಿರುವ ವಾಡಿಕೆಯಾಗಿದೆ.
ಅಲ್ಲಿಂದ ಅವರು ಪರಶುರಾಮನಾರಿದಿದ ಸ್ಥಳಕ್ಕೆ ಬರುವರು, ಆ ಸ್ಥಳದಲ್ಲಿ ಹಿಂದೆ ಮಹಾಯೋಗಿಗಳಾದ ಕಪಿಲ ಮುನಿಗಳು ಆಶ್ರಮವನ್ನು ರಚಿಸಿ, ತಮ್ಮ ಶಿಷ್ಯರಿಗೆ ವೇದಧ್ಯಯನ ಮುಂತಾದ ಧಾರ್ಮಿಕ ಪಾಠಗಳನ್ನು ಹೇಳಿ ಕೊಡುತ್ತಿದ್ದರು. ಆ ಪ್ರಶಾಂತವಾದ ಸ್ಥಳದಲ್ಲಿ ಮಚ್ಚೇಂದ್ರನಾಥ ಗೋರಕನಾಥರು ತಮ್ಮ ಶಿಷ್ಯರೊಂದಿಗೆ ಬೀಡು ಬಿಟ್ಟು ಸಿದ್ಧ ಯೋಗದಲ್ಲಿ ನಿರತರಾಗಿದ್ದರು.
ಸಿದ್ಧ ಪುರುಷರಿಬ್ಬರು ಶಿಷ್ಯ ಸಮೇತರಾಗಿ ಬಂದು ತಮ್ಮ ಪಟ್ಟಣದಲ್ಲಿ ನೆಲಸಿರುವ ವಾರ್ತೆಯನ್ನು ಕೇಳಿ ಹರ್ಷಚಿತ್ತನಾದ...ತುಳು ನಾಡನ್ನು ಆಳುಪ ವಂಶದ ಅರಸರಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಕುಂದವರ್ಮನು ಮಂಗಳಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ತುಳುನಾಡನ್ನು ಆಳುತ್ತಿದ್ದನು. ಅದೇ ಸಮಯ ಉತ್ತರ ನೇಪಾಳ ದೇಶದಿಂದ ಮಚ್ಚೇಂದ್ರನಾಥ ಗೋರಕನಾಥರೆಂಬ ಯೋಗಿದ್ವಯರು ತಮ್ಮ ಶಿಷ್ಯ ಗಣದೊಂದಿಗೆ ನೇತ್ರಾವತಿ ನದಿಯನ್ನು ದಾಟಿ, ಮಂಗಳಾಪುರಕ್ಕೆ ಕಾಲಿರಿಸುವರು ಆ ಸ್ಥಳವನ್ನು ಇಂದಿಗೂ ಗೋರಕ ದಂಡು ಎಂದು ಕರೆಯುತ್ತಿರುವ ವಾಡಿಕೆಯಾಗಿದೆ.
ಅಲ್ಲಿಂದ ಅವರು ಪರಶುರಾಮನಾರಿದಿದ ಸ್ಥಳಕ್ಕೆ ಬರುವರು, ಆ ಸ್ಥಳದಲ್ಲಿ ಹಿಂದೆ ಮಹಾಯೋಗಿಗಳಾದ ಕಪಿಲ ಮುನಿಗಳು ಆಶ್ರಮವನ್ನು ರಚಿಸಿ, ತಮ್ಮ ಶಿಷ್ಯರಿಗೆ ವೇದಧ್ಯಯನ ಮುಂತಾದ ಧಾರ್ಮಿಕ ಪಾಠಗಳನ್ನು ಹೇಳಿ ಕೊಡುತ್ತಿದ್ದರು. ಆ ಪ್ರಶಾಂತವಾದ ಸ್ಥಳದಲ್ಲಿ ಮಚ್ಚೇಂದ್ರನಾಥ ಗೋರಕನಾಥರು ತಮ್ಮ ಶಿಷ್ಯರೊಂದಿಗೆ ಬೀಡು ಬಿಟ್ಟು ಸಿದ್ಧ ಯೋಗದಲ್ಲಿ ನಿರತರಾಗಿದ್ದರು.
ಸಿದ್ಧ ಪುರುಷರಿಬ್ಬರು ಶಿಷ್ಯ ಸಮೇತರಾಗಿ ಬಂದು ತಮ್ಮ ಪಟ್ಟಣದಲ್ಲಿ ನೆಲಸಿರುವ ವಾರ್ತೆಯನ್ನು ಕೇಳಿ ಹರ್ಷಚಿತ್ತನಾದ ಕುಂದವರ್ಮನು ತನ್ನ ಪರಿವಾರದೊಂದಿಗೆ, ಆ ಸಿದ್ಧ ಪುರುಷರು ಇದ್ದೆಡೆಗೆ ಬರುತ್ತಾನೆ, ಯೋಗ ಸಿದ್ಧಿಯಿಂದ ತೋಜೋಪುಂಜರಾಗಿ ಧ್ಯಾನಸಕ್ತರಾಗಿ ಕುಳಿತಿದ್ದ ಯೋಗಿಗಳಿಬ್ಬರಿಗೂ ನಮಸ್ಕರಿಸಿ, ಅವರ ಯೋಗ ಕ್ಷೇಮವನ್ನು ವಿಚಾರಿಸುವರು.
ಅರಸರನ್ನು ಕಂಡ ಮಚ್ಛೇಂದ್ರನಾಥರು ನೀನು ಯಾರೆಂದು ವಿಚಾರಿಸಿದಾಗ, ನಾನು ಈ ತುಳುನಾಡನ್ನಾಳುವ ಅರಸ, ಕುಂದವರ್ಮ ಎಂದು ನನ್ನ ಹೆಸರು. ತಾವು ಶಿಷ್ಯ ಸಮೇತರಾಗಿ ಬಂದಿರುವ ವಿಚಾರ ತಿಳಿದು, ತಮ್ಮ ಕ್ಷೇಮ ಸಮಾಚಾರ ವಿಚಾರಿಸಿ ತಮಗೆ ಬೇಕಾಗುವ ಅನುಕೂಲಗಳನ್ನು ಮಾಡಿಕೊಡುವ ಸಲಿವಾಗಿ ಬಂದಿರುವುದಾಗಿ ತಿಳಿಸುವನು, ಮಚ್ಛೇಂದ್ರನಾಥರು ತೃಪ್ತಿಯಿಂದ ನಖ್ಖು ತಲೆಯನ್ನಾಡಿಸಿ, ರಾಜ, ಈ ನಿನ್ನ ರಾಜ್ಯ ಪರಮ ಪಾವನವಾದ ನಾಡು, ಸಿದ್ಧಿ ಕ್ಷೇತ್ರವೂ ಹೌದು ಮಂತ್ರ ಮುಖೇನ ಯೋಗಿಗಳು ಮಂತ್ರ ಸಿದ್ಧಿಯನ್ನು ಪಡೆದಿರುವ ದಿವ್ಯ ಕ್ಷೇತ್ರವಿದು.
ಇದಕ್ಕೆ ಕಾರಣ ಅವತಾರ ರೂಪಿಯಾದ ಪರಶುರಾಮರು ತಪವನ್ನಾಚರಿಸಿ ಲೋಕ ಮಾತೆಯಾದ ಶ್ರೀ ಮಂಗಳಾದೇವಿಯನ್ನು ಪ್ರತ್ಯಕ್ಷೀಕರಿಸಿ ಪಾವನವಾದ ಕ್ಷೇತ್ರ ಮಾತ್ರವಲ್ಲ ಶ್ರೀ ಮಂಗಳಾದೇವಿಯ ಲೀಲೆಯಂತೆ ಆಕೆಗೆ ಭವ್ಯವಾದ ಮಂದಿರವನ್ನು ರಚಿಸಿ, ಪೂಜಿಸುತ್ತಿದ್ದ ಸ್ಥಳ, ಇಲ್ಲಿ ಹಲವಾರು ಯೋಗಿಗಳೂ, ಋಷಿ ಮುನಿಗಳೂ ಆಶ್ರಮವನ್ನು ರಚಿಸಿ, ಆಧ್ಯಾತ್ಮಿಕ ಚಿಂತನೆಯ ಜತೆ ಯೋಗಸಿದ್ಧಿಯನ್ನು ಹೇಳಿಕೊಡುತ್ತಿದ್ದರು. ಈ ಸ್ಥಳ ನಮಗೆ ತುಂಬಾ ತೃಪ್ತಿಯನ್ನಿತ್ತಿದೆ. ಈ ಬೆಟ್ಟವನ್ನು ನಮ್ಮ ವಾಸ್ಥವ್ಯಕ್ಕಾಗಿ ನಮಗೆ ನೀಡಿ ನಾವು ಇಲ್ಲೇ ನಮ್ಮ ಮಠವನ್ನು ಸ್ಥಾಪಿಸುವೆವು. ಸರ್ವ ಪಂಥದ ಪ್ರಚಾರವು ಇಲ್ಲಿಂದಲೇ ಪ್ರಾರಂಭವಾಗುವುದು. ನಮ್ಮ ಪಂಥದ ಪ್ರಚಾರಕ್ಕೆ ಯಾರಿಂದಲೂ ಅಡೆತಡೆಗಳು ಬಾರದಂತೆ ನೀನು ನೋಡಿಕೊಂಡಿರಬೇಕು ನಿನಗೆ ಮಂಗಳವಾಗಲಿ ಎಂದಾಗ, ಕುಂದವರ್ಮನು ಭಯಭಕ್ತಿಯಿಂದ ನಮಿಸಿ,ತಮ್ಮ ಆಜ್ಞೆಯನ್ನು ಶಿರಸಾವಹಿಸಿ ನಡೆಸಿಕೊಂಡು ಬರುವೆನೆಂದು ವಚನವಿತ್ತು. ಆದರೆ ಶ್ರೀ ಮಂಗಳಾದೇವಿಯ ಮಂದಿರವನ್ನು ನಾನು ನನ್ನ ಕರ್ತವ್ಯವೆಂದು ಹೇಳಿ ಹಿಂದೆ ಹಿರಣ್ಯಾಕ್ಷನ ಮಗಳಾದ ವಿಖಾಸಿನಿ ಎಂಬ ರಾಕ್ಷಸಿಯ ಕಥೆಯನ್ನು ಹೇಳಿ ಆಕೆಯ ಮಗನಾದ ಅಂಡಾಸುರನು ಶ್ರೀ ಮಂಗಳಾದೇವಿಯಿಂದ ವಧಿಸಲ್ಪಟ್ಟ ಸ್ಥಳ ಆಗ ಈ ಸ್ಥಳ, ಸಮುದ್ರದಿಂದ ಆವರಿಸಿಕೊಂಡಿತ್ತು. ಪರಶುರಾಮರಿಂದಾಗಿ ಈ ನೆಲ “ಪರಶುರಾಮ ಸೃಷ್ಟಿ” ಎಂದು ಖ್ಯಾತಿ ಪಡೆಯಿತು ಇಲ್ಲೇ ಸನಿಹದಲ್ಲಿ ಪರಶುರಾಮರು ತಪಸ್ಸು ಮಾಡಿ ಶ್ರೀ ಮಂಗಲಾದೇವಿಯನ್ನು ಪ್ರತಕ್ಷೀಕರಿಸಿ, ಆಕೆಯ ಅಪ್ಪಣೆಯಂತೆ ಆಕೆಯ ಲಿಮ್ಗರೂಪದ ಬಿಂಬವನ್ನು ಪ್ರತಿಷ್ಟಾಪಿಸಿ ಸುಂದರವಾದ ಮಂದಿರವನ್ನು ಕಟ್ಟಿಸಿದರು.ಆದರೆ ಆ ದೇವಿ ಮಂದಿರವು ಭಗ್ನವಾಗಿ ದಿಬ್ಬ ಎದ್ದಿದೆ ಅದರ ಅಡಿಯಲ್ಲಿ ಶಿವ-ಶಕ್ತಿ ಪ್ರಭಾವದ ಲಿಂಗ ರೂಪದ ಬಿಂಬವೂ ಧಾರಾ ಪಾತ್ರೆಯೂ ಇದೆ. ಅದರ ರಕ್ಷಣೆಗೆ ಆಕೆಯ ಪರಿಹಾರ ದೈವಗಳೂ ನಾಗರಾಜನು ಇದ್ದಾನೆ. ನೀನು ನನ್ನೊಂದಿಗೆ ಬಾ, ನಿನಗೆ ಆ ಪುಣ್ಯ ಸ್ಥಳವನ್ನು ತೋರಿಸುವೆನು ಎಂದು ಕುಂದ ವರ್ಮನನ್ನು ಜತೆ ಸರಿ ಹೊರಡುವರು ನಂತರ ಶ್ರೀ ಮಂಗಳಾದೇವಿಗೆ ಸುಂದರವಾದ ಮಂದಿರವನ್ನು ನಿರ್ಮಿಸಿ, ಶಿವ-ಶಕ್ತಿಯರು ಕೂಡಿದ ಲಿಮ್ಗ ರೂಪದ ಬಿಂಬವನ್ನು ಪುನರ್ ಪ್ರತಿಷ್ಥಾಪನೆ ಮಾಡಿ ಧಾರಾ ಪಾತ್ರೆಯನ್ನಿಟ್ಟು ಪೂಜಿಸು ನಿನಗೆ ಮಂಗಳವಾಗುವುದು. ಈ ದೇವಿಯ ವಿಶೇಷ ಅನುಗ್ರಹವೆಂದು ಶೋಡಶಿಯಾದ ಯಾವ ಕುವರಿಗೆ ಕಂಕಣ ಭಾಗ್ಯ ಬಂದಿರುವುದಿಲ್ಲವೊ ಆ ಕನ್ಯೆ ಈ ಕ್ಷೇತ್ರಕ್ಕೆ ಬಂದು ದೀಕ್ಷೆಯಿಂದಿದ್ದು ಪಾರ್ವತಿ ಸ್ವಯಂವರ ವೃತವನ್ನು ಕೈಕೊಂಡರೆ ಆಕೆಗೆ ಉತ್ತಮ ಗುಣವಂತನೂ ಐಶ್ವರ್ಯವಂತನಾದ ಪತಿಯು ದೊರಕುವನು, ಅಲ್ಲದೆ ಈ ಸನ್ನಿಧಾನದಲ್ಲಿ ವಧು ವರರಿಗೆ ಧಾರೆ ಎರೆದರೆ (ಮದುವೆ) ಅವರಿಗೆ ಸಕಲಾಷ್ಟ ಸೌಭಾಗ್ಯ ದೊರಕುವುದು ಆದುದರಿಂದ ದಕ್ಷಿಣ ದಿಕ್ಕಿನಿಂದ ಹರಿಯುವ ನೇತ್ರಾವತಿ ಉತ್ತರದಿಂದ ಹರಿದು ಬರುವ ಪಾಲ್ಗುಣಿ ನದಿಗಳು ಸಂಗಮವಾಗಿ ಸಮುದ್ರ ಸೇರುತ್ತದೆ. ಈ ಪುಣ್ಯ ಕ್ಷೇತ್ರದಲ್ಲಿ ಮಮ್ದಿರವನ್ನು ಕಟ್ಟುವ ಕಾರ್ಯವನ್ನು ಮಾಡು ಎಂದು ಹರಸುವನು.
ಕುಂದವರ್ಮನು ಮಚ್ಚೇಂದ್ರನಾಥರ ಅಪ್ಪಣೆಯಂತೆ ಯೋಗ್ಯ ಶಿಲ್ಪಿಗಳನ್ನು ಕರೆಯಿಸಿ ಶ್ರೀ ಮಂಗಳಾದೇವಿಗೆ ಅವರಿಂದ ಮಂದಿರವನ್ನು ನಿರ್ಮಿಸಿ ಲಿಂಗರೂಪದ ಬಿಂಬವನ್ನು ಪುನರ್ ಪ್ರತಿಷ್ಥಾಪಿಸಿ ನಿಷ್ಟಾವಂತರಾದ ಯೋಗ್ಯ ಬ್ರಾಹ್ಮಣರಿಂದ ತ್ರೀಕಾಲ ಪೂಜೆಗೆ ವ್ಯವಸ್ಥೆ ಮಾಡುವನು. ಈ ಕಾರ್ಯಕ್ರಮದಲ್ಲಿ ಮಚ್ಚೇಂದ್ರನಾಥರ ಶಿಷ್ಯರಾದ ಗೋರಕನಾಥರು ಉಪಸ್ಥಿತರಿದ್ದು ಮಾತ್ರವಲ್ಲದೆ ಶ್ರೀ ಮಂಗಳಾದೇವಿಗೆ ಪಟ್ಟೆ ವಸ್ತ್ರವನ್ನು ಅರ್ಪಿಸಿ ಪೂಜಿಸಿದರು ಅದರ ಕುರುಹಾಗಿ ಇಂದಿಗೂ ಕದ್ರಿ ಮಠದ ಯೋಗಿರಾಜರು ಕದ್ರಿ ಉತ್ಸವದ ಮೊದಲ ದಿನ ಶ್ರೀಮಂಗಳಾದೇವಿ ದೇವಸ್ಥಾನಕ್ಕೆ ಬಂದು ಶ್ರೀ ದೇವಿಗೆ ಪೀತಾಂಬರ ಅರ್ಪಿಸಿ ಪುಜೆ ಒಪ್ಪಿಸುವ ಕ್ರಮ ನಡೆದುಕೊಂಡು ಬಂದಿದೆ.
ಪಶ್ಚಿಮ ಸಮುದ್ರ ತೀರದಲ್ಲಿರುವ ತುಳು ರಾಜ್ಯವನ್ನು ಸೂರ್ಯವಂಶದ ವೀರಬಾಹು ಎಂಬ ರಾಜನು ಆಳುತ್ತಿದ್ದನು. ಅವನ ರಾಜಧಾನಿಯ ಸನೀಹದಲ್ಲೇ ಪರಶುರಾಮನ ತಪೋಭೂಮಿ ಇದ್ದು, ಅದರ ಹತ್ತಿರದಲ್ಲೇ ಆಶ್ರಮವನ್ನು ನಿರ್ಮಿಸಿ ತಪೋಧನರಾದ ಭಾರದ್ವಜಮುನಿಯ ಶಿಷ್ಯನಾಗಿದ್ದು ಅವರ ಪೂರ್ಣ ವಿಶ್ವಾಸ ಹಾಗೂ ಅನುಗ್ರಹಕ್ಕೆ ಪಾತ್ರನಾಗಿದ್ದನು. ಕಾಲ ಧರ್ಮ ಪ್ರಕಾರ ರಾಜನು ವೃದ್ಧನಾಗಲು, ತಪೋನಿಧಿಯಾದ ಭಾರಧ್ವಜ ಮುನಿಗಳಿಗೆ ಕೈ ಮುಗಿದು, ಮುನಿವರ್ಯಾ ತಮ್ಮ ಪೂರ್ಣಾನುಗ್ರಹದಿಂದ ನಾನು ಧನ್ಯಥಾ ಭಾವವನ್ನು ಹೊಂದಿರುವೆನು. ತಮ್ಮ ಕರುಣೆಯಿಂದ ಪ್ರಜಾಪರಿವಾರದವರು ಸುಖದಿಂದಿರುವರು. ಸ್ವಾಮಿ, ಕಾಲಧರ್ಮದಂತೆ ನಾನೀಗ ವೃದ್ಧನಾಗಿರುವೆನು. ಆ ಪ್ರಯುಕ್ತ ನಾನು ವಾನಪ್ರಸ್ಥಾಶ್ರಮವನ್ನು ಸೇರಬೇಕೆಂದಿರುವೆನು.ನಾನು ಸಂತಾನ ಹೀನನಾಗಿರುವುದರಿಂದ ಈ ತುಳೂರಾಜ್ಯವನ್ನು ಯೋಗ್ಯನಾದ ಒಬ್ಬ ರಾಜನಿಗೆ ಕೊಡಬೇಕೆಂದಿರುವೆನು. ಮಹಾ ಮುನಿಶ್ರೇಷ್ಠರೆ ನನ್ನ ರಾಜ್ಯವನ್ನು ಬಂಗ ರಾಜನಿಗೆ ಉಚಿತವಾಗಿ ದಾನ ಮಾಡಿಕೊಟ್ಟು, ಮುಂದೆ ಭಗವಂತನ ಆರಾಧನೆಯಲ್ಲಿ ಕಾಲವನ್ನು ಕಳೆಯಬೇಕೆಂದಿರುವೆನು. ಈ ಕಾರ್ಯವು ಸುಗಮವಾಗಿ ನೆರವೇರುವಂತೆ ಅನುಗ್ರಹಿಸಬೇಕಾಗಿ ವಿನೀತ ಭಾವದಿಂದ ಬೇಡಿಕೊಂಡನು.
ಅರಸನಾದ ವೀರಬಾಹುವಿನ ಕೋರಿಕೆಗೆ ಮೆಚ್ಚಿನ ಸೂಚಿಸುತ್ತಾ, ಭಾರದ್ವಜ ಮುನಿಗಳು ಸಂತುಷ್ಟರಾಗಿ ಹಾಗೆಯೇ ಆಗಲೆಂದು ಹರಸಿದರು. ವೀರ ಬಾಹುರಾಜನು ತನ್ನ ರಾಜ್ಯವನ್ನು ಬಂಗರಾಜನಿಗೆ ಒಪ್ಪಿಸಿ ತಾನು ಪತ್ನಿ ಸಮೇತನಾಗಿ ವಾನ ಪ್ರಸ್ಥಕ್ಕೆ ಹೊರಟ್ಟು ಹೋದ ನಂತರ ಬಂಗರಾಜನು ಈ ತುಳು ನಾಡನ್ನು ಅತ್ಯಂತ ವೈಭವದಿಂದ ಆಳತೊಡಗಿದ.
ಒಮ್ಮೆ ಬಂಗರಾಜನು ತನ್ನ ಅರಮನೆಯ ಹಂಸತೂಲಿಕಾತಲ್ಪದಲ್ಲಿ ಮಲಗಿರಲು, ಬೆಳಗಿನ ಜಾವದಲ್ಲಿ ಶ್ರೀ ಮಂಗಳಾದೇವಿಯು ಸ್ವಪ್ನದಲ್ಲಿ ದರ್ಶನವನ್ನಿತ್ತು ರಾಜ ನಿನ್ನನ್ನು ಅನುಗ್ರಹಿಸಲಿಕ್ಕಾಗಿ ಪ್ರಸನ್ನಳಾಗಿರುವೆನು ನಾನು ಮಂಗಳಾದೇವಿ, ನೇತ್ರಾವತಿ ಮತ್ತು ಪಾಲ್ಗುಣಿ ನದಿಗಳು ಸಂಗಮವಾಗಿ ಸಮುದ್ರ ಸೇರುವ ಸನಿಹದಲ್ಲಿ ನನ್ನ ಲಿಂಗ ರೂಪದ ಬಿಂಬದಲ್ಲಿ ಚೈತನ್ಯವನ್ನು ಹೊಂದಿರುವೆನು. ಇದೀಗ ನನ್ನ ಆಲಯವು ಕುಸಿದು ಬಿದ್ದು ಒಂದು ದಿಣ್ಣೆಯಂತೆ ಕಾಣುತ್ತದೆ. ನೀನು ಆ ದಿಣ್ಣೆಯನ್ನು ಸರಿಸಿದಾಗ ನನ್ನ ಬಿಂಬ ನಿನಗೆ ಕಾಣಸಿಗುವುದು, ನೀನು ಅದೇ ಸ್ಥಳದಲ್ಲಿ ನನಗೊಂದು ಆಲಯವನ್ನು ನಿರ್ಮಿಸಿ ಬಿಂಬರೂಪದ ಲಿಂಗವನ್ನು ಪುನರ ಪ್ರತಿಷ್ಥಾಪಿಸು ಮತ್ತು ನನಗೆ ಧಾರಾಪಾತ್ರೆಯನ್ನಿಟ್ಟು ಹಾಗೆಯೇ ನನ್ನನ್ನು ಆರಾಧಿಸುತ್ತಿರು ನಿನಗೆ ಮಂಗಳವಾಗಲಿ. ಈ ಪುಣ್ಯ ಕಾರ್ಯದಿಂದ ನೀನು ಲೋಕೋತ್ತರವಾದ ಕೀರ್ತಿಯನ್ನು ಪಡೆಯುವಿ, ಎಂದು ಹರಸಿ ಮಾಯವಾಗುವಳು.
ನಿದ್ದೆಯಿಂದ ಎಚ್ಚೆತ್ತ ಬಂಗ ರಾಜನು ಕನಸಿನಲ್ಲಿ ಕಂಡ ದೇವಿಯನ್ನೇ ಧ್ಯಾ ನಿಸುತ್ತ ಬೆಳಗಿನ ಜಾವ ಕಳೆದ ನಂತರ ತನ್ನ ಪರಿವಾರದವರನ್ನು ಕರೆದು ಕನಸಿನಲ್ಲಿ ಕಂಡ ವಿಷಯ ತಿಳಿಸಿ ಅವರನ್ನೆಲ್ಲಾ ಕೂಡಿಕೊಂಡು ಭಾರದ್ವಾಜ ಮುನಿಗಳ ಆಶ್ರಮಕ್ಕೆ ಹೋಗಿ, ಮುನಿಗಳಿಗೆ ವಂದಿಸಿ, ತನಗೆ ಕನಸಿನಲ್ಲಿ ಶ್ರೀ ಮಂಗಳಾದೇವಿ ಬಂದು ಆಕೆಯ ಆಜ್ಞೆಯನ್ನು ತಿಳಿಸುವನು. ಸಂತೋಷಗೊಂಡ ಭಾರದ್ವಾಜಮುನಿಗಳು ಆತನೊಂದಿಗೆ ಆ ದಿವ್ಯ ಸಾನಿದ್ಯಕ್ಕೆ ತೆರಳುವರು.
ಬಂಗರಾಜನು ಭಾರದ್ವಾಜ ಮುನಿಗಳಿಗೆ ನಮಿಸುತ್ತಾ ಪೂಜ್ಯ ಮುನಿವರ್ಯ ನಿಮ್ಮ ಅನುಗ್ರಹದಿಂದ ಶ್ರೀ ಮಂಗಳಾದೇವಿಯ ಬಿಂಬದ ಪುನರ್ ಪ್ರತಿಷ್ಟಾಪನೆಯು ನೆರವೇರಿತು. ಸ್ವಾಮಿ ಈ ಬಿಂಬಕ್ಕೆ ಧಾರಾಪಾತ್ರೆಯಾಕಾಗಿ ಬಂತು, ದಯವಿಟ್ಟು ಶ್ರೀ ಮಂಗಳೆಯ ಈ ಕ್ಷೇತ್ರದ ಮಹಿಮೆಯನ್ನು ತಿಳಿಸಬೇಕೆಂದು ಪ್ರಾರ್ಥಿಸಿದನು.
ಭಾರದ್ವಾಜರು ಶ್ರೀ ಹರಿಯು ವರಾಹ ಮತ್ತು ನರಸಿಂಹ ಅವತಾರದ ಕತೆಯನ್ನು ಹೇಳಿ, ವರಹಾ ಅವತಾರವೆತ್ತಿ ವಧಿಸಿದ ಹಿರಣ್ಯಾಕ್ಷನ ಮಗಳಾದ ವಿಖಾಸಿನಿಯು ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ವರಪಡೆದುದನ್ನು ವಿವರಿಸಿ ಆಕೆಗೆ ಶಿವನಿಂದ ಪಡೆದ ಮಗನಿಂದಾಗಿ ದೇವತೆಗಳೆಲ್ಲರೂ ಸ್ವರ್ಗ ಬಿಡಬೇಕಾಗಿ ಬಂದುದನ್ನೂ ಹೇಳಿ ಆ ದುಷ್ಟದಾನವನನ್ನು ವಧಿಸುವರೇ ತ್ರಿಲೋಕ ಪೂಜ್ಯಳಾದ ಮಹಾದೇವಿಯನ್ನು ಬ್ರಹ್ಮವಿಷ್ಣು ಶಿವರೊಂದಿಗೆ ದೇವತೆಗಳು ಒಂದಾಗಿ ಪ್ರಾರ್ಥಿಸಿದಾಗ ಶ್ರೀ ಮಂಗಳಾದೇವಿಯು ಪ್ರತ್ಯಕ್ಷಳಾಗಿ ದೇವತೆಗಳಿಗೆ ಅಭಯ ನೀಡಿ ಆ ದಾನವನ್ನು ವಧಿಸುವ ಕತೆಯನ್ನು ಹೇಳುವರು.
ಭಾರದ್ವಾಜರು ಮುಂದುವರಿದು ರಾಜ ನಮ್ಮ ಆಶ್ರಮದ ಸನೀಹದಲ್ಲೇ ಭಾರ್ಗವ ರಾಮನು ತಪವನ್ನಾಚರಿಸಿ ಶಿವ ಶಕ್ತಿಯನ್ನು ಒಲಿಸಿಕೊಂಡಿದ್ದ. ಆಗ ಶ್ರಿ ಮಂಗಳಾದೇವಿಯು ಪರಶುರಾಮನೊಂದಿಗೆ ನನ್ನ ಲಿಂಗ ರೂಪದ ಬಿಂಬವು ನಿನಗೆ ಕಾಣ ಸಿಗುವುದು ಅದಕ್ಕೊಂದು ಆಲಯವನ್ನು ನಿರ್ಮಿಸಿ ಅದರಲ್ಲಿ ಪ್ರತಿಷ್ಟಾಪಿಸು ಈ ಬಿಂಬದಲ್ಲಿ ಶಿವನ ಶಕ್ತಿಯೂ ನನ್ನೊಂದಿಗಿರುವುದರಿಂದ ಧಾರಾ ಪಾತ್ರೆ ಇದೆ.
ಅನಂತರ ಶಿಥಿಲಗೊಂಡ ಈ ಸ್ಥಳವನ್ನು ಮಹಿಮಾ ಪುರುಷರಾದ ಮಚ್ಚೇಂದ್ರನಾಥರ ಆದೇಶದಂತೆ ತುಳುನಾಡಿನ ದೊರೆಯಾದ ಕುಂದವರ್ಮನು ಮಂದಿರವನ್ನು ನಿರ್ಮಿಸಿ ಶ್ರೀ ಮಂಗಳಾದೇವಿಯನ್ನು ಪುನರ್ ಪ್ರತಿಷ್ಟಾಪಿಸಿದ, ಶ್ರೀ ಮಂಗಳಾದೇವಿ ಇಲ್ಲಿ ನೆಲೆಸಿರುವುದರಿಂದಲೇ ಇಲ್ಲಿಗೆ ಮಂಗಳಾಪುರ ಎಂಬ ಹೆಸರು ಬಂದಿದೆ. ಶ್ರೀ ಮಂಗಳಾದೇವಿಯನ್ನು ಅನುದಿನವೂ ಆರಾಧಿಸಿಕೂಂಡು ಬಂದಲ್ಲಿ ಸಕಲ ಸೌಭಾಗ್ವಯವನ್ನು ಕರುಣಿಸುವಳು ಮೋಕ್ಷವು ಪ್ರಾಪ್ತಿಯಾಗುವುದು.
ಇಲ್ಲಿಂದ ಇನ್ನೊಂದು ವೈಶಿಷ್ಟವೆಂದರೆ ಯಾವ ಕುಮಾರಿಗೆ ಕಂಕಣ ಬಲ ಕೂಡಿ ಬರುವುದಿಲ್ಲವೋ ಆಕೆ ಶುದ್ಧದಲ್ಲಿದ್ದು ದೇವಿಯ ಸನಿಹದಲ್ಲಿ “ಸ್ವಯಂವರ ಪಾರ್ವತಿ” ವ್ರತವನ್ನಾಚರಿಸಿದರೆ ಆಕೆಗೆ ಯೋಗ್ಯ ವರನು ದೊರೆತು ಅವರ ಸಂಸಾರವು ಸುಖಕರವಾಗಿ ಪರಿಣಮಿಸುವುದು, ಯಾರು ಈ ದೇವಿಯ ಸನ್ನಿಧಿಯಲ್ಲಿ ವಿವಾಹ ಆಗುವರೋ ಅವರು ಕೂಡಾ ತಮ್ಮ ಜೀವನುದದ್ದಕ್ಕೂ ಸುಖ ಸಂಪತ್ತನ್ನು ಹೊಂದಿ ಸಂತೃಪ್ತ ಜೀವನ ನಡೆಯಿಸುವರು. ಈ ದೇವಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಿದ್ದರೆ, ಆತನಿಗೆ ಬಂದಿರುವ ಕಷ್ಟ ಕಾರ್ಪಣ್ಯಗಳು ಮಂಜಿನಂತೆ ಕರಗಿ ಹೋಗುವುದು. ಆದುದರಿಂದ ನೀನು ಶ್ರೀ ಮಂಗಳಾದೇವಿಯನ್ನು ತ್ರಿಕರ್ಣ ಪೂರಕ ಆರಾಧಿಸಿದರೆ ನಿನಗೆ ಸಕಲ ಸೌಭಾಗ್ಯ ಲಭಿಸುವುದು ನಿನ್ನ ಕೀರ್ತಿ ಶಾಶ್ವತವಾಗಿ ಉಳಿಯುವುದು ಎಂಬುದಾಗಿ ಹೇಳಿ ಹರಸುವರು.
ಸಾಹಿತ್ಯದ ಹಿನ್ನೆಲೆ
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಇತಿಹಾಸ ಕ್ರಿ.ಶ. 950-980 ಶತಮಾನಕ್ಕೆ ಸೇರಿದ ದೇವಾಲಯವಾಗಿದೆ. ದೇವಾಲಯವನ್ನು ಶಿವಾನುಗ್ರಹ ಪಡೆದ ಭಾರ್ಗವರಾಮನಿಗೆ ಒಲಿದ ಶ್ರೀ ಮಂಗಳಾದೇವಿಯ ಲಿಂಗರೂಪದ ಬಿಂಬವಾಗಿ ಪ್ರತಿಷ್ಠಾಪಿಸಿದೆ. ಈ ದೇವಾಲಯವು ಕ್ರಿ.ಶ. 950-980ರ ವರೆಗೆ ತುಳುನಾಡನ್ನು ಆಳಿದ ಅರಸನಾದ ಕುಂದವರ್ಮನು ಮಚ್ಚೇಂದ್ರನಾಥ ಗೋರಕ್ಷನಾಥರ ಅನುಗ್ರಹದಂತೆ ಶ್ರೀ ಮಂಗಳಾದೇವಿ ದೇವಸ್ಥಾನವನ್ನು ಪುನಃ ನಿರ್ಮಾಣ ಮಾಡಿ ಪೂಜಿಸಲಾಗುತ್ತಾ ಬಂದಿರುತ್ತಾರೆ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮದುವೆಯಾಗದ ಕನ್ಯೆಯರಿಗೆ ಹಾಗೂ ಪುರುಷರಿಗೆ ಸ್ವಯಂವರ ಪಾರ್ವತಿ ಪೂಜೆಯ ವೃತದಿಂದ ಮಾಡುವ ಪೂಜೆಯಿಂದ ಕಂಕಣಭಾಗ್ಯ ಪ್ರಾಪ್ತಿಯಾಗುವ ನಂಬಿಕೆ ಇದೆ. ಅಲ್ಲದೆ ಕ್ಷೇತ್ರದಲ್ಲಿ ವಿವಾಹವಾದರೆ ಅವರ ಜೀವನ ಸುಖಮಯವಾಗುತ್ತದೆನ್ನುವ ಪ್ರತೀತಿಯೂ ಇದೆ. ಶ್ರೀ ದೇವಾಲಯದಲ್ಲಿ ವಿಶೇಷತೆ ನವರಾತ್ರಿ ಒಂಬತ್ತು ದಿನಗಳಿಂದ ಪೂಜೆ ಮಹಾನವಮಿಯಂದು ಆಯಧ ಪೂಜೆ, ವಿಜಯದಶಮಿ ರಥೋತ್ಸವ (ದೇವಾಲಯದಲ್ಲಿ ಪಂಚಾಮೃತ...ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಇತಿಹಾಸ ಕ್ರಿ.ಶ. 950-980 ಶತಮಾನಕ್ಕೆ ಸೇರಿದ ದೇವಾಲಯವಾಗಿದೆ. ದೇವಾಲಯವನ್ನು ಶಿವಾನುಗ್ರಹ ಪಡೆದ ಭಾರ್ಗವರಾಮನಿಗೆ ಒಲಿದ ಶ್ರೀ ಮಂಗಳಾದೇವಿಯ ಲಿಂಗರೂಪದ ಬಿಂಬವಾಗಿ ಪ್ರತಿಷ್ಠಾಪಿಸಿದೆ. ಈ ದೇವಾಲಯವು ಕ್ರಿ.ಶ. 950-980ರ ವರೆಗೆ ತುಳುನಾಡನ್ನು ಆಳಿದ ಅರಸನಾದ ಕುಂದವರ್ಮನು ಮಚ್ಚೇಂದ್ರನಾಥ ಗೋರಕ್ಷನಾಥರ ಅನುಗ್ರಹದಂತೆ ಶ್ರೀ ಮಂಗಳಾದೇವಿ ದೇವಸ್ಥಾನವನ್ನು ಪುನಃ ನಿರ್ಮಾಣ ಮಾಡಿ ಪೂಜಿಸಲಾಗುತ್ತಾ ಬಂದಿರುತ್ತಾರೆ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮದುವೆಯಾಗದ ಕನ್ಯೆಯರಿಗೆ ಹಾಗೂ ಪುರುಷರಿಗೆ ಸ್ವಯಂವರ ಪಾರ್ವತಿ ಪೂಜೆಯ ವೃತದಿಂದ ಮಾಡುವ ಪೂಜೆಯಿಂದ ಕಂಕಣಭಾಗ್ಯ ಪ್ರಾಪ್ತಿಯಾಗುವ ನಂಬಿಕೆ ಇದೆ. ಅಲ್ಲದೆ ಕ್ಷೇತ್ರದಲ್ಲಿ ವಿವಾಹವಾದರೆ ಅವರ ಜೀವನ ಸುಖಮಯವಾಗುತ್ತದೆನ್ನುವ ಪ್ರತೀತಿಯೂ ಇದೆ. ಶ್ರೀ ದೇವಾಲಯದಲ್ಲಿ ವಿಶೇಷತೆ ನವರಾತ್ರಿ ಒಂಬತ್ತು ದಿನಗಳಿಂದ ಪೂಜೆ ಮಹಾನವಮಿಯಂದು ಆಯಧ ಪೂಜೆ, ವಿಜಯದಶಮಿ ರಥೋತ್ಸವ (ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಮತ್ತು ರುದ್ರಾಭಿಷೇಕದಿಂದ) ಶಮ್ಮಿ ಪೂಜೆಯು ಶಮ್ಮಿ ಕಟ್ಟೆಯಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುತ್ತದೆ, ಇಲ್ಲಿನ ಮತ್ತೊಂದು ವಿಶೇಷವೆಂದರೆ ಪುರಾತನ ಕಾಲದ ಬಿಂಬರೂಪದ ಲಿಂಗ ಇದರಲ್ಲಿನ ಆಕೃತಿಯು ಸ್ತ್ರೀರೂಪವನ್ನು ಹೋಲುತ್ತಿದ್ದು ಶಿವಶಕ್ತಿರೂಪದ ಲಿಂಗವೆಂದು ಆರಾಧಿಸಲ್ಪಡುತ್ತಿದೆ ಲಿಂಗದ ಮೇಲ್ದಾಗದಲ್ಲಿ ದಾರಪಾತ್ರ ಇಡುವುದು ಕ್ರಮವಾದರೆ ಇಲ್ಲಿ ದೇವಿಯ ಬಿಂಬದ ಮೇಲೆ ದಾರಾ ಪಾತ್ರ ಇರುವುದು ಪೌರಾಣಿಕ ಹಿನ್ನಲೆಯ ಪುಷ್ಟಿ ನೀಡುತ್ತದೆ. ಕುಂಕುಮಾರ್ಚನೆ, ಹೂವಿನಪೂಜೆ, ದುರ್ಗಾನಮಸ್ಕಾರ, ಅಲಂಕಾರಪೂಜೆ, ಸರ್ವಲಂಕಾರ ಪೂಜೆ, ಸ್ವಯಂವರ ಪಾರ್ವತಿ ಪೂಜೆ, ರಂಗಪೂಜೆ, ಚಂಡಿಕಾಯಾಗ, ದುರ್ಗ ಹೋಮ, ವಿಶೇಷ ಸೇವವಾಗಿರುತ್ತದೆ. ಶ್ರೀ ದೇವಾಲಯವು ಮಂಗಳೂರು ನಗರದ ಮಧ್ಯೆ ಇರುತ್ತದೆ. ಶ್ರೀ ದೇವಾಲಯವು ನಗರ ಪ್ರದೇಶದಲ್ಲಿ ಇದ್ದು ಮಂಗಳಾಪುರ ಕ್ರಮೇಣ ಮಂಗಳೂರು ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ. ದೇವಾಲಯವನ್ನು ತುಳುನಾಡ ಅರಸನಾದ ಕುಂದವರ್ಮನ ಕಾಲದಲ್ಲಿ ಜೀರ್ಣೋದ್ಧಾರಗೊಳಿಸಿ ಪುನರ್ ನಿರ್ಮಿಸಲಾಯಿತು. ಶ್ರೀ ದೇವಾಲಯದಲ್ಲಿ ಮದುವೆಯಾಗದ ಕನ್ಯೆ ಹಾಗೂ ಪುರುಷರು ಸ್ವಯಂವರ ಪಾರ್ವತಿ ಪೂಜೆಯ ವೃತ ಕೈಗೊಂಡು ಪೂಜೆ ನೆರವೇರಿಸಿದ್ದಲ್ಲಿ ಕಂಕಣಭಾಗ್ಯ ಪ್ರಾಪ್ತಿಯಾಗುತ್ತದೆ. ದೇವಾಲಯದ ಸಮೀಪ ದಕ್ಷಿಣದಿಂದ ನೇತ್ರವತಿ ನದಿ ಇರುತ್ತದೆ. ಈ ನದಿಯಲ್ಲಿ ದೇವರ ಅವಭೂತ ಮಂಗಳಸ್ನಾನ ನೆರವೇರುತ್ತದೆ.