ತುಳು ನಾಡನ್ನು ಆಳುಪ ವಂಶದ ಅರಸರಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಕುಂದವರ್ಮನು ಮಂಗಳಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ತುಳುನಾಡನ್ನು ಆಳುತ್ತಿದ್ದನು. ಅದೇ ಸಮಯ ಉತ್ತರ ನೇಪಾಳ ದೇಶದಿಂದ ಮಚ್ಚೇಂದ್ರನಾಥ ಗೋರಕನಾಥರೆಂಬ ಯೋಗಿದ್ವಯರು ತಮ್ಮ ಶಿಷ್ಯ ಗಣದೊಂದಿಗೆ ನೇತ್ರಾವತಿ ನದಿಯನ್ನು ದಾಟಿ, ಮಂಗಳಾಪುರಕ್ಕೆ ಕಾಲಿರಿಸುವರು ಆ ಸ್ಥಳವನ್ನು ಇಂದಿಗೂ ಗೋರಕ ದಂಡು ಎಂದು ಕರೆಯುತ್ತಿರುವ ವಾಡಿಕೆಯಾಗಿದೆ. ಅಲ್ಲಿಂದ ಅವರು ಪರಶುರಾಮನಾರಿದಿದ ಸ್ಥಳಕ್ಕೆ ಬರುವರು, ಆ ಸ್ಥಳದಲ್ಲಿ ಹಿಂದೆ ಮಹಾಯೋಗಿಗಳಾದ ಕಪಿಲ ಮುನಿಗಳು ಆಶ್ರಮವನ್ನು ರಚಿಸಿ, ತಮ್ಮ ಶಿಷ್ಯರಿಗೆ ವೇದಧ್ಯಯನ ಮುಂತಾದ ಧಾರ್ಮಿಕ ಪಾಠಗಳನ್ನು ಹೇಳಿ ಕೊಡುತ್ತಿದ್ದರು. ಆ ಪ್ರಶಾಂತವಾದ ಸ್ಥಳದಲ್ಲಿ ಮಚ್ಚೇಂದ್ರನಾಥ ಗೋರಕನಾಥರು ತಮ್ಮ ಶಿಷ್ಯರೊಂದಿಗೆ ಬೀಡು ಬಿಟ್ಟು ಸಿದ್ಧ ಯೋಗದಲ್ಲಿ ನಿರತರಾಗಿದ್ದರು. ಸಿದ್ಧ ಪುರುಷರಿಬ್ಬರು ಶಿಷ್ಯ ಸಮೇತರಾಗಿ ಬಂದು ತಮ್ಮ ಪಟ್ಟಣದಲ್ಲಿ ನೆಲಸಿರುವ ವಾರ್ತೆಯನ್ನು ಕೇಳಿ ಹರ್ಷಚಿತ್ತನಾದ...