ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಾವಂಜೆ, ದಕ್ಷಿಣ ಕನ್ನಡ - 574146, ದಕ್ಷಿಣ ಕನ್ನಡ .
Sri Mahalingeshwara Temple, Pavanje, Dakshina Kannada - 574146, Dakshina Kannada District [TM000114]
×
Temple History
ಇತಿಹಾಸ
ಮಹಾಲಿಂಗೇಶ್ವರ ದೇವಸ್ಥಾನವು ಪಾವಂಜೆ ಗ್ರಾಮದ ಎತ್ತರದ ದಿಣ್ಣೆಯ ಮೇಲಿದೆ. ಈ ದೇವಾಲಯದ ಮೊದಲಿನ ಹೆಸರು “ಪಾಳೆಉಂಜ” ಮಹಾದೇವ, ಸೀಮೆ ದೇವಸ್ಥಾನವಾಗಿರುವ ಈ ದೇವಾಲಯವು ಎತ್ತರದ ದಿಣ್ಣೆಯ ಮೇಲೆ ನಂದಿನಿ ನದಿಯು ಪೂರ್ವದಿಂದ ದಕ್ಷಿಣಾಭಿಮುಖವಾಗಿ ಹರಿದು ಪಶ್ಚಿಮಕ್ಕೆ ತಿರುಗುವ ಸುತ್ತಿನ ಉತ್ತರದ ದಡದ ಮೇಲಿದೆ. ಸಾಕಷ್ಟು ಎತ್ತರದ ಸ್ಥಾನದಲ್ಲಿರುವ ಈ ದೇವಾಲಯವು ಬಹಳ ದೂರದಿಂದಲೇ ಕಾಣುತ್ತದೆ. ಈ ದೇವಾಲಯದ ಇರುವಿಕೆ ಪಾವಂಜೆ ಗ್ರಾಮಕ್ಕೆ ಗಾಂಭೀರ್ಯವನ್ನು ಕೊಟ್ಟಿದೆ. ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಎತ್ತರದಿಂದ ಬರಲು ದಾರಿಯಿದೆ. ದಿಣ್ಣೆಯ ತುದಿಯಲ್ಲಿ ಮಧ್ಯಮ ಗಾತ್ರದ ಕಟ್ಟಡವಿದೆ. ಇದರಲ್ಲಿರುವ ದೇವಾಲಯ ಚತುರಸ್ತಂಭಗೃಹ ಎದುರು ತೆರದ ಮಂಟಪ, ಸುತ್ತಲೂ ಪ್ರಾಕಾರಇದರ ಹೊರಗೆ ಹೊರಾಂಗಣ ಇದರ ನೈಋತ್ಯ ದಿಕ್ಕಿನಲ್ಲಿ ಗಣಪತಿಯ ಗುಡಿ ವಾಯುವ್ಯದಲ್ಲಿ ವಿಜಯನಗರ ಅರಸ ಇಮ್ಮಡಿ ದೇವರಾಯನು ನೀಡುವ ದಾನ ಶಾಸನವಿದೆ....ಮಹಾಲಿಂಗೇಶ್ವರ ದೇವಸ್ಥಾನವು ಪಾವಂಜೆ ಗ್ರಾಮದ ಎತ್ತರದ ದಿಣ್ಣೆಯ ಮೇಲಿದೆ. ಈ ದೇವಾಲಯದ ಮೊದಲಿನ ಹೆಸರು “ಪಾಳೆಉಂಜ” ಮಹಾದೇವ, ಸೀಮೆ ದೇವಸ್ಥಾನವಾಗಿರುವ ಈ ದೇವಾಲಯವು ಎತ್ತರದ ದಿಣ್ಣೆಯ ಮೇಲೆ ನಂದಿನಿ ನದಿಯು ಪೂರ್ವದಿಂದ ದಕ್ಷಿಣಾಭಿಮುಖವಾಗಿ ಹರಿದು ಪಶ್ಚಿಮಕ್ಕೆ ತಿರುಗುವ ಸುತ್ತಿನ ಉತ್ತರದ ದಡದ ಮೇಲಿದೆ. ಸಾಕಷ್ಟು ಎತ್ತರದ ಸ್ಥಾನದಲ್ಲಿರುವ ಈ ದೇವಾಲಯವು ಬಹಳ ದೂರದಿಂದಲೇ ಕಾಣುತ್ತದೆ. ಈ ದೇವಾಲಯದ ಇರುವಿಕೆ ಪಾವಂಜೆ ಗ್ರಾಮಕ್ಕೆ ಗಾಂಭೀರ್ಯವನ್ನು ಕೊಟ್ಟಿದೆ. ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಎತ್ತರದಿಂದ ಬರಲು ದಾರಿಯಿದೆ. ದಿಣ್ಣೆಯ ತುದಿಯಲ್ಲಿ ಮಧ್ಯಮ ಗಾತ್ರದ ಕಟ್ಟಡವಿದೆ. ಇದರಲ್ಲಿರುವ ದೇವಾಲಯ ಚತುರಸ್ತಂಭಗೃಹ ಎದುರು ತೆರದ ಮಂಟಪ, ಸುತ್ತಲೂ ಪ್ರಾಕಾರಇದರ ಹೊರಗೆ ಹೊರಾಂಗಣ ಇದರ ನೈಋತ್ಯ ದಿಕ್ಕಿನಲ್ಲಿ ಗಣಪತಿಯ ಗುಡಿ ವಾಯುವ್ಯದಲ್ಲಿ ವಿಜಯನಗರ ಅರಸ ಇಮ್ಮಡಿ ದೇವರಾಯನು ನೀಡುವ ದಾನ ಶಾಸನವಿದೆ. ದೇವಸ್ಥಾನದ ಎದುರು ಬಲಿಕಲ್ಲು ಎತ್ತರವಾಗಿದ್ದು, ಇದರ ಶಿಲ್ಪರಚನ ಕ್ರಮ ವಿಜಯನಗರ ಶಿಲ್ಪಕ್ಕೆ ಸರಿಹೊಂದುತ್ತದೆ.
ಈ ದೇವಾಲಯವು ದ್ವಾಪರ ಯುಗದಲ್ಲಿ ವರ ಋಷಿ ಭಾರ್ಗವ ಅಖಂಡವಾಗಿ ತಪಸ್ಸುಗೈದು ನಿಗ್ರಹಾನುಗ್ರಹ ಸಾರಥ್ಯ ಗಳಿಸಿದ ನಿತ್ಯಾರ್ಚನೆಗೆ ಆರಾಧನೆ ನಡೆಸಲು ಇಲ್ಲಿ ಈ ಋಷಿ ಲಿಂಗಸ್ವರೂಪಿ ಶಿವಾರಾಧನೆಯನ್ನು ಸ್ಥಾಪಿಸಿದ. ಈ ಘಟನೆಯಿಂದ ಪಾವಂಜೆಯಲ್ಲಿ ಶಿವಾರಾಧನೆ ಪ್ರಜ್ವಲಗೊಂಡಿತು ಎಂಬುದಾಗಿ ಇಲ್ಲಿನ ಸ್ಥಳ ವೈಶಿಷ್ಟ್ಯತೆ ಬಗ್ಗೆ ವಿವರಗಳು ಪಚಲಿತದಲ್ಲಿದೆ ದೇವಾಲಯದ ದಕ್ಷಿಣ ದಿಕ್ಕಿನಲ್ಲಿರುವ ಗುಹೆಗಳು ಋಷಿಯ ತಪಸ್ಸಿನ ಸ್ಥಳವೆಂಬ ಪ್ರತೀತಿಯಿದೆ. ಆದರೆ ಇದನ್ನು ಪುಷ್ಟೀಕರಿಸುವ ಯಾವುದೇ ದಾಖಲೆಗಳು ಇರುವುದಿಲ್ಲ.
ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗ ಆಕೃತಿಯ ಲಿಂಗವಿದೆ. ಇಲ್ಲಿನ ಬಲಿಮೂರ್ತಿ ಪಂಚಲೋಹದ ಸದಾಶಿವ ವಿಗ್ರಹವಾಗಿದೆ, ಇದು 14ನೇ ಶತಮಾನದ ಆರಂಭ ಕಾಲದ್ದೆಂದು ಅಂದಾಜಿಸಲಾಗಿದೆ.
ಈ ದೇವಾಲಯದ ಒಳಾಂಗಣದ ದಕ್ಷಿಣ ದಿಕ್ಕಿನಲ್ಲಿ ಒಂದು ಸತಿಗಲ್ಲಿನ ಶಾಸನವಿದೆ. ಇದರ ಬರಹ 14ನೇ ಶತಮಾನದ್ದು. ಆದರೆ ಇದರಲ್ಲಿರುವ ಹೆಚ್ಚಿನ ಬರಹಗಳು ನೆಲದ ಅಡಿಯಲ್ಲಿ ಹುದುಗಿಹೋಗಿವೆ. ಇದರಲ್ಲಿರುವ ಶಿಲ್ಪ ಕುತೂಹಲಕಾರಿಯಾಗಿದ್ದು ಆಕರ್ಷಣೀಯವಾಗಿದೆ. ಇದರಲ್ಲಿ ಕೆತ್ತಿಸಿದ ಚಿಹ್ನೆ ಇಲ್ಲಿನ ಧಾರ್ಮಿಕ ಇತಿಹಾಸದ ಅಧ್ಯಯನದಲ್ಲಿ ಗಮನಿಸುವ ಸಂಗತಿ. ದೇವಸ್ಥಾನದ ಒಳಾಂಗಣದಲ್ಲಿ 2 ಶಾಸನಗಳಿವೆ. ಒಂದು ಶಾಸನ ಓದಲಾರದಷ್ಟು ಹಾಳಾಗಿವೆ. ಆದರೆ ಗರ್ಭಗುಡಿಯ ಪಕ್ಕದಲ್ಲಿರುವ ಶಿಲಾಶಾಸನ ಸಾಕಷ್ಟು ದೊಡ್ಡಗಾತ್ರದಲ್ಲಿದ್ದು ಇದು ವಿಜಯನಗರದ ದೇವರಾಯನ ಆಳ್ವಿಕೆಯ ಕಾಲದ್ದು. ಈ ದೇವಾಲಯದ ಸ್ವರೂಪ, ಪಾವಂಜೆಯ ಪರಿಸರ ಮತ್ತು ಇಲ್ಲಿ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವಲ್ಲಿ ಈ ಶಾಸನವು ಉಪಯುಕ್ತವಾಗಿದೆ.
ದೇವಾಲಯದ ಗುಡ್ಡದಿಂದ ಇಳಿದು ಬರುವಲ್ಲಿ ರಕ್ತೇಶ್ವರಿ ಗುಡಿಯಿದೆ. ಗುಡಿಯ ನೈಋತ್ಯ ಕೆಳಭಾಗದಲ್ಲಿ ನಾಗನ ಆರಾಧನೆಯ ಕುರುಹುಗಳು ಇದೆ. ಗುಡ್ಡದಿಂದ ಕೆಳಗೆ ಇಳಿದು ಬಂದಲ್ಲಿ ಎಡಬದಿಯಲ್ಲಿ ದುರ್ಗಾಪರಮೇಶ್ವರಿ ದೇವಾಲಯವಿದೆ. ರಕ್ತೇಶ್ವರಿಯ ದೇವಾಲಯದ ಒಳಾಂಗಣದಲ್ಲಿರುವ ಸತಿಕಲ್ಲು ಮತ್ತು ದುರ್ಗಾಪರಮೇಶ್ವರಿಯ ದೇವಾಲಯ ಇವೆಲ್ಲ ಪಾವಂಜೆಯಲ್ಲಿ ಶಕ್ತಿ ಆರಾಧನಾ ಪ್ರಚಲಿತ ಇದೆಯೆಂದು ತಿಳಿದುಬರುತ್ತದೆ. ಗುಡ್ಡದ ಕೆಳಭಾಗದಲ್ಲಿ ಪಶ್ಚಿಮಕ್ಕೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಾಲಯವಿದೆ.
ಎಲ್ಲ ದೇವಾಲಯದಂತೆ ಈ ದೇವಾಲಯದಲ್ಲಿಯೂ ತೀರ್ಥ ಗಂಧ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ರುದ್ರಾಭಿಷೇಕ, ಈಶ್ವರ ದೇವರ ರಂಗಪೂಜೆ ಕಾಣಿಕೆ, ಶತರುದ್ರಾಭಿಷೇಕ ಕಾಣಿಕೆ, ತುಲಾಭಾರ ಕಾಣಿಕೆ ಸೇವೆಗಳು ಈ ದೇವಾಲಯದಲ್ಲಿ ಮಾಡಲಾಗುತ್ತದೆ. ದೇವಸ್ಥಾನಕ್ಕೆ ಸೇರಿದ ಕಲ್ಯಾಣಿ ಇದ್ದು ಇದು ದೇವರ ಕಾರ್ಯಕ್ಕೆ ಮಾತ್ರ ಉಪಯೋಗಿಸಲಾಗುತ್ತದೆ. ಪ್ರತಿ ವರ್ಷ ಶಿವರಾತ್ರಿಯಿಂದ ಪ್ರಾರಂಭಗೊಂಡು 8 ದಿನಗಳ ಜಾತ್ರೆ ನಡೆಯುತ್ತದೆ.
ಸಾಹಿತ್ಯದ ಹಿನ್ನೆಲೆ
ಸ್ಕಾಂದ ಪುರಾಣದಲ್ಲಿ ಈ ಸ್ಥಳವು ಕುಟಜ ಪವತವೆಂದು ಉಲ್ಲೇಖಗೊಂಡಿದೆ ಎಂದು ತಿಳಿಯಲಾಗಿದೆ. ಪುರಾತನ ಕಾಲದಲ್ಲಿ ಕುಟಜ ಪವತದ ಪಶ್ಚಿಮ ದಿಕ್ಕಿನಲ್ಲಿ ನದಿ ಹರಿಯುತ್ತಿತ್ತೆಂದೂ ಒಂದು ಸಂದಭದಲ್ಲಿ ವಿಪರೀತವಾದ ಮಳೆಯಿಂದ ಅಚಕರಿಗೆ ಪೂಜೆ ಮಾಡಲು ನೆರೆಯ ಆತಂಕ ಮಾಡಿದುದರ ಪರಿಣಾಮವಾಗಿ, ಅಚಕರ ಚಿಂತೆಯನ್ನು ಹೋಗಲಾಡಿಸಲೆಂಬಂತೆ ನದಿಯು ಪೂವಕ್ಕೆ ದಿಕ್ಕನ್ನು ಬದಲಾಯಿಸಿತ್ತೆಂದೂ ಹಿರಿಯರ ನಂಬಿಕೆ. ಚಾರಿತ್ರಿಕವಾಗಿ ಈ ದೇವಾಲಯದ ಸ್ಥಾಪನೆಯ ಕಾಲವನ್ನು ನಿಶ್ಚಿತವಾಗಿ ಹೇಳುವುದು ಕಷ್ಟ. ಹೊಯ್ಸಳ ರಾಜರ ಹಿರಿಯಣ್ಣಗಳಿಂದ ಪ್ರಾರಂಭವಾಗಿ ಕ್ರಿ.ಶ.1417-18 ರಲ್ಲಿ ವಿಜಯನಗರದ ದೇವರಾಯನ ಕಾಲದಲ್ಲಿ “ಪಾಳಉಂಜೆ” ಯ ಮಹಾದೇವರಿಗೆ ದತ್ತಿಬಿಟ್ಟ ಉಲ್ಲೇಖವಿದೆ. ಇಲ್ಲಿರುವ 30 ಸೆಂ.ಮೀ. ಎತ್ತರದ ಪಂಚಲೋಹದ ಸದಾಶಿವ ವಿಗ್ರಹವು ಕ್ರಿ.ಶ. 14ನೇ ಶತಮಾನದ ರಚನೆಯೆನ್ನಬಹುದು. ಈ ದೇವಾಲಯ ಚತುರಸ್ರವಾದ ಮಧ್ಯಮ ಗಾತ್ರದ ಗಭಗ್ರಹವನ್ನು ಹೊಂದಿದೆ. ಉಪಸ್ಥಾನದೇವತೆ ಗಣೇಶನ...ಸ್ಕಾಂದ ಪುರಾಣದಲ್ಲಿ ಈ ಸ್ಥಳವು ಕುಟಜ ಪವತವೆಂದು ಉಲ್ಲೇಖಗೊಂಡಿದೆ ಎಂದು ತಿಳಿಯಲಾಗಿದೆ. ಪುರಾತನ ಕಾಲದಲ್ಲಿ ಕುಟಜ ಪವತದ ಪಶ್ಚಿಮ ದಿಕ್ಕಿನಲ್ಲಿ ನದಿ ಹರಿಯುತ್ತಿತ್ತೆಂದೂ ಒಂದು ಸಂದಭದಲ್ಲಿ ವಿಪರೀತವಾದ ಮಳೆಯಿಂದ ಅಚಕರಿಗೆ ಪೂಜೆ ಮಾಡಲು ನೆರೆಯ ಆತಂಕ ಮಾಡಿದುದರ ಪರಿಣಾಮವಾಗಿ, ಅಚಕರ ಚಿಂತೆಯನ್ನು ಹೋಗಲಾಡಿಸಲೆಂಬಂತೆ ನದಿಯು ಪೂವಕ್ಕೆ ದಿಕ್ಕನ್ನು ಬದಲಾಯಿಸಿತ್ತೆಂದೂ ಹಿರಿಯರ ನಂಬಿಕೆ. ಚಾರಿತ್ರಿಕವಾಗಿ ಈ ದೇವಾಲಯದ ಸ್ಥಾಪನೆಯ ಕಾಲವನ್ನು ನಿಶ್ಚಿತವಾಗಿ ಹೇಳುವುದು ಕಷ್ಟ. ಹೊಯ್ಸಳ ರಾಜರ ಹಿರಿಯಣ್ಣಗಳಿಂದ ಪ್ರಾರಂಭವಾಗಿ ಕ್ರಿ.ಶ.1417-18 ರಲ್ಲಿ ವಿಜಯನಗರದ ದೇವರಾಯನ ಕಾಲದಲ್ಲಿ “ಪಾಳಉಂಜೆ” ಯ ಮಹಾದೇವರಿಗೆ ದತ್ತಿಬಿಟ್ಟ ಉಲ್ಲೇಖವಿದೆ. ಇಲ್ಲಿರುವ 30 ಸೆಂ.ಮೀ. ಎತ್ತರದ ಪಂಚಲೋಹದ ಸದಾಶಿವ ವಿಗ್ರಹವು ಕ್ರಿ.ಶ. 14ನೇ ಶತಮಾನದ ರಚನೆಯೆನ್ನಬಹುದು. ಈ ದೇವಾಲಯ ಚತುರಸ್ರವಾದ ಮಧ್ಯಮ ಗಾತ್ರದ ಗಭಗ್ರಹವನ್ನು ಹೊಂದಿದೆ. ಉಪಸ್ಥಾನದೇವತೆ ಗಣೇಶನ ಪ್ರಾಚೀನ ಬಿಂಬವು ನಷ್ಠವಾಗಿ ಹೊಸ ಬಿಂಬವನ್ನು ಸ್ಥಾಪಿಸಲಾಗಿದೆ.