ಶ್ರೀ ನಾಗಾವಿ ಯಲ್ಲಮ್ಮ ದೇವಿ ದೇವಾಲಯ, ಚಿತ್ತಾಪೂರ, ಕಲಬುರಗಿ - 585211, ಕಲಬುರಗಿ .
Sri Nagavi Yallamma Devi Temple, Chittapur, Kalaburagi - 585211, Kalaburagi District [TM000153]
×
Temple History
ಸ್ಥಳ ಪುರಾಣ
ಕರ್ನಾಟಕ ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಪ್ರದೇಶ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವುಗಳಿಂದಲ್ಲೂ ಈ ಪ್ರದೇಶ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ, ಚಾರಿತ್ರಿಕ ದೃಷ್ಟಿಯಿಂದಲ್ಲೂ ಈ ನೆಲ ಅತ್ಯಂತ ಹಿರಿಮೆಯನ್ನು ಹೊಂದಿದೆ. ಕಾಲಕಾಲಕ್ಕೆ ಈ ನಾಡನ್ನಾಳಿದ ಅರಸರು/ರಾಜರುಗಳು, ರಾಣಿಯರು, ಸಾಮಂತರು, ಕಲೆ ಸಾಹಿತ್ಯ, ಮತ್ತು ಸಂಸ್ಕೃತಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತ ಬಂದಿದ್ದಾರೆ. ಅಂದು ಈ ನಾಡಿನಲ್ಲಿ ರಾಜ್ಯದ ರಕ್ಷಣೆಯ ಹಿತದೃಷ್ಟಿಯಿಂದ ಸಣ್ಣಪುಟ್ಟ ಆಡಳಿತ ಕೇಂದ್ರಗಳಿದ್ದವು. ಇವುಗಳನ್ನು ನೋಡಿಕೋಳ್ಳಲಿಕ್ಕೆ ವಿವಿಧ ವರ್ಗಗಳ ಆಡಳಿತಾಧಿಕಾರಿಗಳೂ ಇರುತ್ತಿದ್ದರು. ಇವರು ನಾಡನ್ನಾಳುವ ಪ್ರಭುಗಳಿಗೆ ಸಾಮಂತರಾಗಿರುತ್ತಿದ್ದರು. ಇವರನ್ನು ದಂಡನಾಯಕರು, ಮಹಾಮಂಡಳೇಶ್ವರರು ಎಂತೆಲ್ಲ ಕರೆಯಲಾಗುತ್ತದೆ.
ನಾಗಾವಿ ಕರ್ನಾಟಕ ಪ್ರಾಚೀನ ಅಗ್ರಹಾರಗಳಲ್ಲೊಂದು, ಇದು ಗುಲಬರ್ಗಾ ಜಿಲ್ಲೆಯ ತಾಲ್ಲೂಕ್ ಕೇಂದ್ರ ಚಿತ್ತಾಪೂರದ ಪೂರ್ವ ದಿಕ್ಕಿನಲ್ಲಿದೆ. ಚಿತ್ತಾಪೂರ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ ಅಂತರದಲ್ಲಿದೆ....ಕರ್ನಾಟಕ ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಪ್ರದೇಶ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವುಗಳಿಂದಲ್ಲೂ ಈ ಪ್ರದೇಶ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ, ಚಾರಿತ್ರಿಕ ದೃಷ್ಟಿಯಿಂದಲ್ಲೂ ಈ ನೆಲ ಅತ್ಯಂತ ಹಿರಿಮೆಯನ್ನು ಹೊಂದಿದೆ. ಕಾಲಕಾಲಕ್ಕೆ ಈ ನಾಡನ್ನಾಳಿದ ಅರಸರು/ರಾಜರುಗಳು, ರಾಣಿಯರು, ಸಾಮಂತರು, ಕಲೆ ಸಾಹಿತ್ಯ, ಮತ್ತು ಸಂಸ್ಕೃತಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತ ಬಂದಿದ್ದಾರೆ. ಅಂದು ಈ ನಾಡಿನಲ್ಲಿ ರಾಜ್ಯದ ರಕ್ಷಣೆಯ ಹಿತದೃಷ್ಟಿಯಿಂದ ಸಣ್ಣಪುಟ್ಟ ಆಡಳಿತ ಕೇಂದ್ರಗಳಿದ್ದವು. ಇವುಗಳನ್ನು ನೋಡಿಕೋಳ್ಳಲಿಕ್ಕೆ ವಿವಿಧ ವರ್ಗಗಳ ಆಡಳಿತಾಧಿಕಾರಿಗಳೂ ಇರುತ್ತಿದ್ದರು. ಇವರು ನಾಡನ್ನಾಳುವ ಪ್ರಭುಗಳಿಗೆ ಸಾಮಂತರಾಗಿರುತ್ತಿದ್ದರು. ಇವರನ್ನು ದಂಡನಾಯಕರು, ಮಹಾಮಂಡಳೇಶ್ವರರು ಎಂತೆಲ್ಲ ಕರೆಯಲಾಗುತ್ತದೆ.
ನಾಗಾವಿ ಕರ್ನಾಟಕ ಪ್ರಾಚೀನ ಅಗ್ರಹಾರಗಳಲ್ಲೊಂದು, ಇದು ಗುಲಬರ್ಗಾ ಜಿಲ್ಲೆಯ ತಾಲ್ಲೂಕ್ ಕೇಂದ್ರ ಚಿತ್ತಾಪೂರದ ಪೂರ್ವ ದಿಕ್ಕಿನಲ್ಲಿದೆ. ಚಿತ್ತಾಪೂರ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ ಅಂತರದಲ್ಲಿದೆ. ಚಿತ್ತಾಪೂರದಿಂದ ಸಾತನೂರು ಮಾರ್ಗವಾಗಿ ಯಾದಗಿರಿಗೆ ಹೋಗುವ ಸಾಕಷ್ಟು ಬಸ್ಗಳು ಈ ಮಾರ್ಗದಲ್ಲಿಯೇ ಸಂಚಾರಿಸುತ್ತವೆ. ಅಲ್ಲದೇ ಬಸ್ಸು ಹಾಗೂ ರೈಲು ನಿಲ್ದಾಣದಿಂದ ಅಟೋರಿಕ್ಷಾಗಳ ವ್ಯವಸ್ಥೆಯೂ ಇದೆ.
ನಾಗಾವಿಯು ಸುಪ್ರಸಿದ್ದ ಅಗ್ರಹಾರ, ವಿದ್ಯಾಕೇಂದ್ರ, ಪುಣ್ಯಕ್ಷೇತ್ರ, ಕಲೆಯಬೀಡು ಅತ್ಯಂತ ನಾಗರಿಕತೆಯು ಹಾಗೂ ಸಾಂಸ್ಕೃತಿಕ ತಳಹದಿಯ ಮೇಲೆ ನಿರ್ಮಾಣಗೊಂಡ ಪ್ರದೇಶವಾಗಿದೆ. ಈ ಅಗ್ರಹಾರಕ್ಕೆ ಐತಿಹಾಸಿಕ ಹಿನ್ನಲೆಯಿದೆ. ಧಾರ್ಮಿಕ ಪರಂಪರೆಯಿದೆ. ಸಾವಿರಾರು ವರ್ಷಗಳು ಗತಿಸಿಹೋದರು ಇಂದಿಗೂ ಕಲಾರಾಧಕರನ್ನು ಇತಿಹಾಸಕಾರರನ್ನು, ಸಂಶೋಧಕರನ್ನು ಕೈಬೀಸಿ ಕರೆಯುವಂತಿದೆ. ವಿಶೇಷವಾಗಿ ಸಂಶೋಧಕರಿಗೆ ಇಲ್ಲಿ ಹೇರಳವಾದ ಆಕರ ದೊರೆಯಬಲ್ಲದು. ಇಂದು ನಾಗಾವಿ ಪ್ರದೇಶವನ್ನು ಎಲ್ಲಮ್ಮ ದೇವಿಯ ಪುಣ್ಯಕ್ಷೇತ್ರವೆಂದು ಹೆಚ್ಚಾಗಿ ಗುರುತಿಸಲಾಗುತ್ತದೆ. ಆದರೆ ಹಿಂದೊಮ್ಮೆ ಈ ಪ್ರದೇಶ ಪ್ರಸಿದ್ದ ವಿದ್ಯಾಕೇಂದ್ರವಾಗಿ ತನ್ನ ಘನತೆ ಗೌರವಗಳಿಂದ ಲೋಕ ವಿಖ್ಯಾತಿ/ಪ್ರಸಿದ್ಧಿಯನ್ನು ಹೊಂದಿತ್ತು ಎಂಬ ವಿಷಯ ಬಹಳ ಜನರಿಗೆ ಗೊತ್ತಿಲ್ಲ.
ನಾಗಾವಿ ಹೆಸರಿನ ಹಿನ್ನಲೆ:
ನಾಗಾವಿಯನ್ನು ‘ನಾಗಾವಾಪಿ’ ‘ನಾಗವಾವಿ’ ಎಂಬ ವಿಭಿನ್ನ ಹೆಸರುಗಳಿಂದ ಕರೆಯುವುದುಂಟು ನಾಗವಾಪಿ ಎನ್ನುವ ಪದ ‘ನಾಗ’ ಮತ್ತು ‘ವಾಪಿ’ ಎಂಬ ಎರಡು ಪದಗಳಿಂದ ಕೂಡಿದೆ ನಾಗಾವಿಯ ಶಾಸನಗಳಲ್ಲಿ ಅಗ್ರಹಾರ ನಾಗವಾವಿ’ ‘ಮಹಾ ಅಗ್ರಹಾರ ನಾಗಾವಾವಿ’ ಸರ್ವನಮಸ್ಯದ ಅಗ್ರಹಾರ ನಾಗವಾವಿ’ ಎಂದೆಲ್ಲ ಉಲ್ಲೇಖಿಸಲಾಗಿದೆ. ಈ ನಾಗವಾಪಿ, ನಾಗವಾವಿ ಹಾಗೂ ನಾಗಾವಿ ಎಂಬ ಹೆಸರುಗಳು ಹೇಗೆ ಬಂದಿರಬಹುದೆಂದು ಪೌರಾಣಿಕ ಹಿನ್ನಲೆಗಳಿಂದಲ್ಲೂ ಮತ್ತು ಸ್ಥಳ ಪುರಾಣಗಳಿಂದಲ್ಲೂ ತಿಳಿದುಕೊಳ್ಳ ಬಹುದಾಗಿದೆ. ಶಾತವಾನರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರ್ಯರು ಈ ಪ್ರದೇಶದಲ್ಲಿ ಆಳ್ವಿಕೆಯನ್ನು ನಡೆಸಿದ್ದಾರೆ. ಮುಂದೆಮ್ಮೊ ಈ ಪ್ರದೇಶ ಮಹಮ್ಮದಿಯರ (ಬಹುಮನಿ, ಹೈದರಾಬಾದ ನಿಜಾಮ) ಆಳ್ವಿಕೆಗೆ ಒಳಪಟ್ಟಿತ್ತಲ್ಲದೆ ಕಂಪನಿ ಸರಾಕಾರಗಳೂ ಇಲ್ಲಿ ತಮ್ಮ ಪ್ರಭುತ್ವದ ಪ್ರಾಬಲ್ಯವನ್ನು ಬೀರಿದೆ. ರಾಷ್ಟ್ರಕೂಟರು ಈ ಭಾಗದ ಮಳಖೇಡನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಸಮೀಪದ ಸೇಡಂನಲ್ಲಿ ರಾಣಿವಾಸ, ನೀಲಹಳ್ಳಿಯಲ್ಲಿ ಖಜಾನೆ ಇದ್ದರೆ ದಂಡೋತಿಯಲ್ಲಿ ಸೈನ್ಯದ ವಾಸಸ್ಥಳವಿತ್ತು. ಈ ಅವದಿಯಲ್ಲಿಯೇ ನಾಗಾವಿಯು ಸುಪ್ರಸಿದ್ದ ಅಗ್ರಹಾರವಾಗಿತ್ತು ಎಂಬುದು ವಿದ್ವಾಂಸರ ಅಭಿಮತವಾಗಿದೆ.
ನಾಗಾವಿ ಅಗ್ರಹಾರ ಹಿನ್ನಲೆ:
ಪ್ರಾಚೀನ ಕಾಲದಲ್ಲಿ ಸಾಮ್ರಾಟರು, ಮಹಾಮಂಡಳೇಶ್ವರರು, ದಂಡನಾಯಕರು, ಜ್ಞಾನ ಯಜ್ಞ ಅವ್ಯಾಹತವಾಗಿ ನಡೆಯಲೆಂದು ವಿದ್ವಾಂಸ ಬ್ರಾಹ್ಮಣರ ವಸತಿಯನ್ನು ಒಂದೆಡೇ ಮಾಡಿಸುತ್ತಿದ್ದರು ಈ ಬ್ರಾಹ್ಮಣೋತ್ತಮರು ಒಂದೆಡೇ ಇರುವ ಪ್ರದೇಶಕ್ಕೆ ಅಗ್ರಹಾರವೆಂದು ಕರೆಯಲಾಗುತ್ತದೆ. ಈ ಅಗ್ರಹಾರದಲ್ಲಿ ವಾಸಿಸುವ ಬ್ರಾಹ್ಮಣರನ್ನು ಮಹಾಜನರೆಂದು ಕರೆಯಲಾಗುತ್ತಿತ್ತು. ನಾಗಾವಿಯಲ್ಲಿ ನಾಲ್ಕೂನೂರು ಮಹಾ ಜನರಿದ್ದರೆಂದು ಶಾಸನಗಳಿಂದ ತಿಳಿದು ಬರುತ್ತದೆ. ಈ ಸಂಖ್ಯೆಯನ್ನು ನೋಡಿದರೆ ನಾಗಾವಿಯು ಅತ್ಯಂತ ದೊಡ್ಡದಾದ ಅಗ್ರಹಾರವೆಂದು ಹೇಳಬಹುದು. ಏಕೆಂದರೆ ಮಹಾಜನರೇ ನೋಡಿಕೊಳ್ಳುತ್ತಿದ್ದರು. ಈ ವಿದ್ವಾಂಸ ಬ್ರಾಹ್ಮಣರು ವೇದ, ಶಾಸ್ತ್ರ, ಜೋತಿಷ್ಯ, ಗಣಿತ ಮತ್ತು ಯೋಗಶಾಸ್ತ್ರಗಳಂತಹ ಮಹತ್ವದ ವಿಷಯಗಳನ್ನು ಬಲ್ಲವರಾಗಿರುತ್ತಿದ್ದರು. ಈ ವಿದ್ವಾಂಸ ಬ್ರಾಹ್ಮಣರಿಗೆ ವಿಶಿಷ್ಠ ಭೂಭಾಗಗಳನ್ನು ನೀಡಲಾಗುತ್ತಿತ್ತು. ಈ ರೀತಿಯ ಸುವ್ಯವಸ್ಥಿತವಾದ ವಸತಿ ಅಗ್ರಹಾರವೆಂದು ಕರೆಯುತ್ತಿದ್ದರು. ಈ ಅಗ್ರಹಾರದ ಅಧಿಕಾರಿ ಆ ನಾಡಿನ ದಂಡನಾಯಕನೇ ಆಗಿರುತ್ತಿದ್ದರು. ನಾಗಾವಿಯ ಶಾಸನವೊಂದರಲ್ಲಿ “ಚತುರ್ವೇದ ಪಾರವಾರ ಪಾರಗರಪ್ಪ ನಾಲ್ಕುನೂರು ವಿಪ್ರೋತ್ತಮರಿಂದ ಅಭಿನವ ಬ್ರಹ್ಮ ಲೋಕವೆಂಬಂತೆ ವಸುಮತ್ತಿ ತಳಕೆ ತಲೆಯಂಬಂತೆ ಕುಂತಳ ಮಹಿತಳಕ್ಕೆ ತಿಳಕವೆಂಬಂತೆ ಮಹಾಅಗ್ರಹಾರ ನಾಗವಾವಿ” ಎಂದು ವರ್ಣಿಸಲಾಗಿದೆ. ಇಲ್ಲಿ ವಿರಾಜಮಾನವಾಗಿ ರಾರಾಜಿಸುತ್ತಿತ್ತೆಂದು ಶಾಸನಕವಿ ಬಹು ಸೊಗಸಾಗಿ ವರ್ಣೀಸಿದ್ದಾನೆ.
ವೇಳಾಂಬ ದೇವಾಲಯ:-
ಇಂದು ನಾವುಗಳು ಕರೆಯುವ ನಾಗವೇಲಾಂಬ ದೇವಾಲಯವೇ ಪುರಾಣ ಪ್ರಸಿದ್ದವಾದ ವೇಳಾಂಬ ದೇವಾಲಯವಾಗಿದೆ. ಇವಳು ಶಕ್ತಿ ದೇವತೆ, ಈ ದೇವಿಯನ್ನು ಕುರಿತು ಪೌರಾಣಿಕ ಕತೆಯೊಂದಿದೆ. ನಮ್ಮ ದೇಶದಲ್ಲಿ ಶಕ್ತಿಪೂಜೆ ಪುರಾತನ ಕಾಲದಿಂದಲ್ಲೂ ನಡೆದುಬಂದಿದೆ. ನಾಡನ್ನಾಳುವ ಚಕ್ರವರ್ತಿಗಳು ತಮ್ಮ ಕುಲದೇವತೆಯನ್ನು ಪ್ರಸನ್ನಗೊಳಿಸಿ ಶಕ್ತಿ ಆರಾಧಕರೆನಿಸಿಕೊಂಡಿದ್ದಾರೆ. ಮಾನ್ಯಖೇಡದ ರಾಷ್ಟ್ರಕೂಟರು ವೇಳಾಂಬ ದೇವಿಯನ್ನು ತಮ್ಮ ಕುಲದೇವತೆಯನ್ನಾಗಿ ಮಾಡಿಕೊಂಡಿದ್ದರೆಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಪ್ರಾರಂಭದಲ್ಲಿ ಈ ದೇವಾಲಯವು ಕೇವಲ ಗರ್ಭಗೃಹವೊಂದನ್ನು ಮಾತ್ರ ಹೊಂದಿದ್ದು ನಂತರದಲ್ಲಿ ವಿಸ್ತರಣೆಗೊಂಡಿತೆಂದು ಹೇಳಲಾಗುತ್ತದೆ. ಈ ದೇವಾಲಯವು ಪಶ್ಚಿಮಾಭಿಮುಖವಾಗಿದ್ದು, ಗರ್ಭಗೃಹ ತೆರೆದ ಅಂತರಾಳ, ನವರಂಗ ಹಾಗೂ ಅರ್ಧಮಂಟಪಗಳನ್ನು ಹೊಂದಿದೆ. ಮುಂದೆ ವಿಸ್ತರಣೆಯ ಸಂದರ್ಭದಲ್ಲಿ ನವರಂಗದ ಮುಂಭಾಗದಲ್ಲಿ ಹಜಾರವನ್ನು ಸೇರಿಸಲಾಗಿದೆ. ಗರ್ಭಗೃಹದಲ್ಲಿ ದೇವಿಯ ಶಿಲ್ಪಿ ಮತ್ತು ಪಾದುಕೆಗಳಲ್ಲದೆ ಎರಡು ನೀರಿನ ಬುಗ್ಗೆಗಳಿವೆ ಈ ಗರ್ಭಗೃಹದೆದುರು ಮಾತಂಗಿ ಗ್ರಾಮದೇವತಾ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಗಿದ್ದು. ಎದುರಿಗೆ ನಾಗರಕಟ್ಟೆಯೊಂದಿಗೆ, ನಾಗರಕಟ್ಟೆಯ ಮುಂಭಾಗದಲ್ಲಿರುವ ವಿಶಾಲವಾದ ಕಟ್ಟೆಯ ಮೇಲೆ ಮೂರು ದೀಪಸ್ತಂಭಗಳಿವೆ. ನವರಾತ್ರಿಯ ವೇಳೆಯಲ್ಲಿ ಒಂಭತ್ತು ದಿನಗಳಕಾಲ ಇಲ್ಲಿ ದೀಪೋತ್ಸವದೊಂದಿಗೆ ನವರಾತ್ರಿ ಉತ್ಸವ ಅತೀ ವಿಜೃಂಭಣೆಯಿಂದ ಜರುಗುತ್ತದೆ. ದೇವಾಲಯದ ಆವರಣದೊಳಗೆ ಸುತ್ತಲೂ ಮಂಟಪಗಳಿವೆ.