ಕರ್ನಾಟಕ ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಪ್ರದೇಶ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವುಗಳಿಂದಲ್ಲೂ ಈ ಪ್ರದೇಶ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ, ಚಾರಿತ್ರಿಕ ದೃಷ್ಟಿಯಿಂದಲ್ಲೂ ಈ ನೆಲ ಅತ್ಯಂತ ಹಿರಿಮೆಯನ್ನು ಹೊಂದಿದೆ. ಕಾಲಕಾಲಕ್ಕೆ ಈ ನಾಡನ್ನಾಳಿದ ಅರಸರು/ರಾಜರುಗಳು, ರಾಣಿಯರು, ಸಾಮಂತರು, ಕಲೆ ಸಾಹಿತ್ಯ, ಮತ್ತು ಸಂಸ್ಕೃತಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತ ಬಂದಿದ್ದಾರೆ. ಅಂದು ಈ ನಾಡಿನಲ್ಲಿ ರಾಜ್ಯದ ರಕ್ಷಣೆಯ ಹಿತದೃಷ್ಟಿಯಿಂದ ಸಣ್ಣಪುಟ್ಟ ಆಡಳಿತ ಕೇಂದ್ರಗಳಿದ್ದವು. ಇವುಗಳನ್ನು ನೋಡಿಕೋಳ್ಳಲಿಕ್ಕೆ ವಿವಿಧ ವರ್ಗಗಳ ಆಡಳಿತಾಧಿಕಾರಿಗಳೂ ಇರುತ್ತಿದ್ದರು. ಇವರು ನಾಡನ್ನಾಳುವ ಪ್ರಭುಗಳಿಗೆ ಸಾಮಂತರಾಗಿರುತ್ತಿದ್ದರು. ಇವರನ್ನು ದಂಡನಾಯಕರು, ಮಹಾಮಂಡಳೇಶ್ವರರು ಎಂತೆಲ್ಲ ಕರೆಯಲಾಗುತ್ತದೆ.