ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಉಚ್ಚಿಲ, ಉಡುಪಿ - 574117, ಉಡುಪಿ .
Sri Mahalingeshwara Mahaganapathi Temple Uchila, Udupi - 574117, Udupi District [TM000246]
×
Temple History
ಇತಿಹಾಸ
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಉಚ್ಚಿಲ
ಪಡ್ಡಾಯಿ ಮುಕುಡ್ದು ಕಲ್ದಿನಾರ್, ಗುಡ್ಡೆಡಿತ್ತಿನಾರ್, ಒಡೆಯ ಉಲ್ಲಾಯ, ಈಶ್ವರ ದೇವೆರ್ ಹೀಗೆ ಕರೆಸಿಕೊಳ್ಳುವ ಬಹು ಸಂಸ್ಕೃತಿಗಳ ಸಮ್ಮಿಲನದ ಪ್ರತೀಕವಾಗಿ ಸಾಂಸ್ಕೃತಿಕ ಸುಗಮ ಸಮಾಗಮದ ದ್ಯೋತಕವಾಗಿ ನೆಲೆನಿಂತಿದ್ದು ಉಚ್ಚಿಲದಲ್ಲಿ ಶ್ರೀ ಮಹಾಲಿಂಗೇಶ್ವರನಾಗಿ ಮಹಾಗಣಪತಿ ಸನ್ನಿಧಾನವು ಜೊತೆಯಾಗಿರುವುದರಿಂದ ದೇವಾಯತನವು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ. ಇದು ಕರಾವಳಿ ಕಡಲ ಕಿನಾರೆಯ ಪ್ರಸಿದ್ಧ ದೇವಳಗಳಲ್ಲಿ ಒಂದು.
ಸ್ಥಳನಾಮ: ಉಚ್ಚಿಲ ಎಂಬುದು ಗ್ರಾಮದ ಹೆಸರಲ್ಲ, ಅದು ಒಂದು ನಿರ್ದಿಷ್ಟವಾದ ಸ್ಥಳನಾಮ ಎತ್ತರದ ಭೂಪ್ರದೇಶ, ಉನ್ನತ, ಶ್ರೇಷ್ಠ, ಗಂಭೀರವಾದ ‘ಇಲ’ ಎಂದರೆ ಸ್ಥಳವಾಗಿದ್ದು ಉಚ್ಚಿಲವಾಯಿತು. ಉಚ್ಛಶಿಲೆಯೇ ಉಚ್ಚಿಲವಾಯಿತು, ಉಚ್ಚ, ಊರ್ಧ್ವ ಎಂಬ ಸಂಸ್ಕೃತ ಶಬ್ಧಗಳ ಮಿಳಿತದಿಂದ ಉಚ್ಚಿಲ ಎಂಬುದು ಪೂರಕವಾದ ನಿರೂಪಣೆ, ಉಚ್ಚೆಯೊ (ಉತ್ಸವ) ನಡೆಯುವ ಸ್ಥಳವಾಗಿ ಉಚ್ಚಿಲ ಎಂಬುದು ಇನ್ನೊಂದು ಆಯಾಮದ ಚಿಂತನೆ...ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಉಚ್ಚಿಲ
ಪಡ್ಡಾಯಿ ಮುಕುಡ್ದು ಕಲ್ದಿನಾರ್, ಗುಡ್ಡೆಡಿತ್ತಿನಾರ್, ಒಡೆಯ ಉಲ್ಲಾಯ, ಈಶ್ವರ ದೇವೆರ್ ಹೀಗೆ ಕರೆಸಿಕೊಳ್ಳುವ ಬಹು ಸಂಸ್ಕೃತಿಗಳ ಸಮ್ಮಿಲನದ ಪ್ರತೀಕವಾಗಿ ಸಾಂಸ್ಕೃತಿಕ ಸುಗಮ ಸಮಾಗಮದ ದ್ಯೋತಕವಾಗಿ ನೆಲೆನಿಂತಿದ್ದು ಉಚ್ಚಿಲದಲ್ಲಿ ಶ್ರೀ ಮಹಾಲಿಂಗೇಶ್ವರನಾಗಿ ಮಹಾಗಣಪತಿ ಸನ್ನಿಧಾನವು ಜೊತೆಯಾಗಿರುವುದರಿಂದ ದೇವಾಯತನವು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ. ಇದು ಕರಾವಳಿ ಕಡಲ ಕಿನಾರೆಯ ಪ್ರಸಿದ್ಧ ದೇವಳಗಳಲ್ಲಿ ಒಂದು.
ಸ್ಥಳನಾಮ: ಉಚ್ಚಿಲ ಎಂಬುದು ಗ್ರಾಮದ ಹೆಸರಲ್ಲ, ಅದು ಒಂದು ನಿರ್ದಿಷ್ಟವಾದ ಸ್ಥಳನಾಮ ಎತ್ತರದ ಭೂಪ್ರದೇಶ, ಉನ್ನತ, ಶ್ರೇಷ್ಠ, ಗಂಭೀರವಾದ ‘ಇಲ’ ಎಂದರೆ ಸ್ಥಳವಾಗಿದ್ದು ಉಚ್ಚಿಲವಾಯಿತು. ಉಚ್ಛಶಿಲೆಯೇ ಉಚ್ಚಿಲವಾಯಿತು, ಉಚ್ಚ, ಊರ್ಧ್ವ ಎಂಬ ಸಂಸ್ಕೃತ ಶಬ್ಧಗಳ ಮಿಳಿತದಿಂದ ಉಚ್ಚಿಲ ಎಂಬುದು ಪೂರಕವಾದ ನಿರೂಪಣೆ, ಉಚ್ಚೆಯೊ (ಉತ್ಸವ) ನಡೆಯುವ ಸ್ಥಳವಾಗಿ ಉಚ್ಚಿಲ ಎಂಬುದು ಇನ್ನೊಂದು ಆಯಾಮದ ಚಿಂತನೆ ಒಟ್ಟಿನಲ್ಲಿ ಎತ್ತರದಿಂದ, ಶ್ರೇಷ್ಠತೆಯಿಂದ ‘ಉಚ್ಛ’ ಶಬ್ದವು ಮೂಲವಾಗಿ ಈ ನೆಲೆಯೇ ಉಚ್ಚಿಲವೆಂದು ನಿರ್ಧರಿಸಬಹುದು.
ಪುರಾಣ: ಕರಾಸುರನು ತಲೆಯಲ್ಲಿ ಮತ್ತು ಉಭಯ ಕೈಗಳಲ್ಲಿ ಹೊತ್ತು ತಂದು ಸ್ಥಾಪಿಸಿದ ಶಿವಲಿಂಗಗಳಲ್ಲಿ ಉಚ್ಚಿಲದ ಮಹಾಲಿಂಗೇಶ್ವರ ಲಿಂಗವು ಒಂದು ಎಂಬುದು ಒಂದು ಪುರಾಣದ ಕಥೆ ಪ್ರಚಲಿತವಿದೆ.
ಸ್ಕಂದ ಪುರಾಣದ ಸಹ್ಯಾದ್ರಿಕಾಂಡದಲ್ಲಿ ಬರುವ ಖರ ಮತ್ತು ರಟ್ಟನೆಂಬ ಸಹೋದರರಿಬ್ಬರು ಮಹಾ ಶಿವಭಕ್ತರಾಗಿದ್ದು ಕರಾವಳಿಯುದ್ದಕ್ಕೂ ಹಲವು ಶಿವಾಲಯಗಳನ್ನು ಸ್ಥಾಪಿಸಿದರು ಎಂಬ ಉಲ್ಲೇಖ ಈ ಎರಡು ಆಧಾರಗಳಿಂದ “ ಖರಪ್ರತಿಷ್ಠ” ಎಂಬ ಜನಜನಿತವಾದ ಒಡಂಬಡಿಕೆಗೆ ಪ್ರಾಶಸ್ತ್ಯ ಒದಗುತ್ತದೆ.
ಉತ್ಸವ:ಶ್ರೀ ದೇವಳದಲ್ಲಿ ವಾರ್ಷಿಕ ಉತ್ಸವವು ಶಿವರಾತ್ರಿಯ ದಿನ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ 4 ನೇ ದಿನ ರಥೋತ್ಸವ ನಡೆಯುತ್ತದೆ.
ಕಾರ್ತಿಕ ಮಾಸದಲ್ಲಿ ಪ್ರತೀ ಸೋಮವಾರ ಮತ್ತು ಕಡೆ ಅಮಾವಾಸ್ಯೆ ಯಂದು ವಿಶೇಷ ಬಲಿ ಉತ್ಸವ ನಡೆಯುತ್ತದೆ.
ಡಿಸೆಂಬರ್ 21 ರ ರಾತ್ರಿ ಹರಿ ಹರ ಭೇಟಿ (ಎರ್ಮಾಳು ಜನಾರ್ಧನ ದೇವರು ಉಚ್ಚಿಲ ದೇವಸ್ಥಾನಕ್ಕೆ ಭೇಟಿಯಾಗಿ ಏಕಕಾಲದಲ್ಲಿ ಹರಿ ಹರರಿಗೆ ಏಕಕಾಲದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಸ್ಥಳ ಪುರಾಣ
ಪಡ್ಡಾಯಿ ಮುಕುಡ್ದು ಕುಲ್ದಿನಾರ್, ಗುಡ್ಡೆಡಿತ್ತಿನಾರ್, ಒಡೆಯ, ಉಲ್ಲಾಯ, ಈಶ್ವರ ದೇವೆರ್ ಹೀಗೆ ಕರೆಯಿಸಿಕೊಳ್ಳುವ ಬಹು ಸಂಸ್ಕೃತಿಗಳ ಸಮ್ಮಿಲನದ ಪ್ರತೀಕವಾಗಿ ಸಾಂಸ್ಕೃತಿಕ ಸುಗಮ, ಸಮಾಗಮದ ದ್ಯೋತಕವಾಗಿ ನೆಲೆನಿಂತಿದ್ದು, ಉಚ್ಚಿಲದಲ್ಲಿ ಶ್ರೀ ಮಹಾಲಿಂಗೇಶ್ವರನಾಗಿ ಮಹಾಗಣಪತಿ ಸನ್ನಿದಾನವು ಜೊತೆಯಾಗಿರುವುದರಿಂದ ದೇವಾಯತನವು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ.ಪಡ್ಡಾಯಿ ಮುಕುಡ್ದು ಕುಲ್ದಿನಾರ್, ಗುಡ್ಡೆಡಿತ್ತಿನಾರ್, ಒಡೆಯ, ಉಲ್ಲಾಯ, ಈಶ್ವರ ದೇವೆರ್ ಹೀಗೆ ಕರೆಯಿಸಿಕೊಳ್ಳುವ ಬಹು ಸಂಸ್ಕೃತಿಗಳ ಸಮ್ಮಿಲನದ ಪ್ರತೀಕವಾಗಿ ಸಾಂಸ್ಕೃತಿಕ ಸುಗಮ, ಸಮಾಗಮದ ದ್ಯೋತಕವಾಗಿ ನೆಲೆನಿಂತಿದ್ದು, ಉಚ್ಚಿಲದಲ್ಲಿ ಶ್ರೀ ಮಹಾಲಿಂಗೇಶ್ವರನಾಗಿ ಮಹಾಗಣಪತಿ ಸನ್ನಿದಾನವು ಜೊತೆಯಾಗಿರುವುದರಿಂದ ದೇವಾಯತನವು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ.