ಶ್ರೀ ಬನಶಂಕರಿ ದೇವಸ್ಥಾನ, ಎಸ್. ಕರಿಯಪ್ಪ ರಸ್ತೆ, ಬೆಂಗಳೂರು ದಕ್ಷಿಣ - 560071, ಬೆಂಗಳೂರು .
Sri Banashankari Temple, S Kariyappa Road, Bengaluru South - 560071, Bengaluru Urban District [TM000025]
×
Temple History
ಸ್ಥಳ ಪುರಾಣ
ಶ್ರೀ ಬನಶಂಕರಿ ದೇವಾಲಯವು ಬೆಂಗಳೂರು ನಗರ ಎಸ್. ಕರಿಯಪ್ಪ ರಸ್ತೆಯಲ್ಲಿದ್ದು ರಾಜ್ಯದ ಪ್ರಸಿದ್ದವಾದ ದೇವಾಲಯಗಳಲ್ಲಿ ಒಂದಾಗಿರುತ್ತದೆ. ಈ ದೇವಾಲಯವು 20ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು, ಇದನ್ನು ನಿರ್ಮಿಸಿ 106 ವರ್ಷಗಳಾಗಿದೆ. ದೇವಾಲಯದ ಮೂಲ ಮೂರ್ತಿಯು ಶ್ರೀ ಬನಶಂಕರಿ ದೇವಿಯಾಗಿದ್ದು ಇದು ಮಾನುಷ್ಯ ಪ್ರತಿಷ್ಟೆಯಾಗಿರುತ್ತದೆ. ದೇವಾಲಯದ ಸಮೂಹಕ್ಕೆ ಸೇರಿದ ಶ್ರೀವರಪ್ರಸಾದ ಆಂಜನೇಯಸ್ವಾಮಿ ದೇವಾಲಯದ ಆಂಜನೇಯಸ್ವಾಮಿಯ ಮೂರ್ತಿಯು ಬಂಡೆ ಕಲ್ಲಿನ ಮೇಲೆ ಉದ್ಭವವಾಗಿರುತ್ತದೆ.
ಶ್ರೀ ಬನಶಂಕರಿ ದೇವಾಲಯವು ಬೆಂಗಳೂರು ನಗರದ ಮಧ್ಯ ಭಾಗದಲ್ಲಿದ್ದು, ಶ್ರೀ ಬನಶಂಕರಿ ದೇವಿಯ ಹೆಸರಿನಿಂದಲೇ (ಬನಶಂಕರಿ) ಈ ಸ್ಥಳವು ಕರೆಯಲ್ಪಡುತ್ತದೆ. ಈ ದೇವಾಲಯವನ್ನು 1984ರಲ್ಲಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ದೇವಾಲಯವನ್ನು ಅಭಿವೃದ್ಧಿ ಉದ್ದೇಶದಿಂದ 2010ರಲ್ಲಿ ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ಸರ್ಕಾರವು ಜೀರ್ಣೋದ್ದಾರಗೊಳಿಸಿರುತ್ತದೆ. ದೇವಾಲಯದ ಸಮೀಪ ಯಾವುದೇ ರೀತಿಯ ಶಾಸನಗಳು...ಶ್ರೀ ಬನಶಂಕರಿ ದೇವಾಲಯವು ಬೆಂಗಳೂರು ನಗರ ಎಸ್. ಕರಿಯಪ್ಪ ರಸ್ತೆಯಲ್ಲಿದ್ದು ರಾಜ್ಯದ ಪ್ರಸಿದ್ದವಾದ ದೇವಾಲಯಗಳಲ್ಲಿ ಒಂದಾಗಿರುತ್ತದೆ. ಈ ದೇವಾಲಯವು 20ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು, ಇದನ್ನು ನಿರ್ಮಿಸಿ 106 ವರ್ಷಗಳಾಗಿದೆ. ದೇವಾಲಯದ ಮೂಲ ಮೂರ್ತಿಯು ಶ್ರೀ ಬನಶಂಕರಿ ದೇವಿಯಾಗಿದ್ದು ಇದು ಮಾನುಷ್ಯ ಪ್ರತಿಷ್ಟೆಯಾಗಿರುತ್ತದೆ. ದೇವಾಲಯದ ಸಮೂಹಕ್ಕೆ ಸೇರಿದ ಶ್ರೀವರಪ್ರಸಾದ ಆಂಜನೇಯಸ್ವಾಮಿ ದೇವಾಲಯದ ಆಂಜನೇಯಸ್ವಾಮಿಯ ಮೂರ್ತಿಯು ಬಂಡೆ ಕಲ್ಲಿನ ಮೇಲೆ ಉದ್ಭವವಾಗಿರುತ್ತದೆ.
ಶ್ರೀ ಬನಶಂಕರಿ ದೇವಾಲಯವು ಬೆಂಗಳೂರು ನಗರದ ಮಧ್ಯ ಭಾಗದಲ್ಲಿದ್ದು, ಶ್ರೀ ಬನಶಂಕರಿ ದೇವಿಯ ಹೆಸರಿನಿಂದಲೇ (ಬನಶಂಕರಿ) ಈ ಸ್ಥಳವು ಕರೆಯಲ್ಪಡುತ್ತದೆ. ಈ ದೇವಾಲಯವನ್ನು 1984ರಲ್ಲಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ದೇವಾಲಯವನ್ನು ಅಭಿವೃದ್ಧಿ ಉದ್ದೇಶದಿಂದ 2010ರಲ್ಲಿ ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ಸರ್ಕಾರವು ಜೀರ್ಣೋದ್ದಾರಗೊಳಿಸಿರುತ್ತದೆ. ದೇವಾಲಯದ ಸಮೀಪ ಯಾವುದೇ ರೀತಿಯ ಶಾಸನಗಳು ಇರುವ ಬಗ್ಗೆ ಪುರಾವೆಗಳು ದೊರೆತಿರುವುದಿಲ್ಲ. ಆದರೆ ಈ ದೇವಾಲಯದಲ್ಲಿನ ಗೋಡೆಗಳು ಹಾಗೂ ಕಂಭಗಳಲ್ಲಿ ಕೆತ್ತನೆಗಳಿದ್ದು, ಈ ಕೆತ್ತನೆಗಳು ಶಿವನ ಪರಿವಾರಕ್ಕೆ ಸಂಬಂಧವನ್ನು ಕಲ್ಪಿಸುತ್ತದೆ. ದೇವಾಲಯದ ಆವರಣದಲ್ಲಿ ಬಾವಿ ಇದ್ದು, ನೂರಾರು ವರ್ಷಗಳಿಂದಲೂ ಬಾವಿ ಬತ್ತಿರುವುದು (ಒಣಗಿರುವುದು) ಕಂಡುಬಂದಿರುವುದಿಲ್ಲ ಹಾಗೂ ಈ ಬಾವಿಯ ನೀರಿನಿಂದಲೇ ದೇವಿಗೆ ಅಭಿಷೇಕವನ್ನು ನೆರವೇರಿಸಲಾಗುತ್ತದೆ.
ಶ್ರೀ ಬನಶಂಕರಿ ದೇವಿಯ ಮೂಲಸ್ಥಾನವು ಬಾದಾಮಿಯ ಬನಶಂಕರಿಯಾಗಿದ್ದು, ಬೆಂಗಳೂರು ಬನಶಂಕರಿ ದೇವಾಲಯವನ್ನು ನಿರ್ಮಿಸಿದ ಗಾಣಿಗ ಶೆಟ್ಟರ ವಂಶಸ್ಥರಾದ ಶ್ರೀ ಬಸಪ್ಪ ಶೆಟ್ಟಿರವರ ಕುಲದೇವತೆ ಆಗಿರುತ್ತಾಳೆ. ಪ್ರತಿವರ್ಷವು ಕುಲದೇವರ ದರ್ಶನ ಪಡೆಯುತ್ತಿದ್ದ ಬಸಪ್ಪ ಶೆಟ್ಟರಿಗೆ ಒಂದು ವರ್ಷ ಅನಾರೋಗ್ಯದ ಕಾರಣದಿಂದ ಕುಲದೇವರ ದರ್ಶನಕ್ಕೆ ಹೋಗಲಾಗದೇ ಇದ್ದುದರಿಂದ ದೇವಿಯನ್ನು ಪ್ರಾರ್ಥಿಸಿಕೊಂಡಾಗ ಬಾದಾಮಿಯ ಶ್ರೀ ಬನಶಂಕರಿ ದೇವಿಯು ಬಸಪ್ಪ ಶೆಟ್ಟರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಬಾದಾಮಿ ಕ್ಷೇತ್ರಕ್ಕೆ ಬಂದು ತನ್ನ ಮೂರ್ತಿಯನ್ನು ಪಡೆದುಕೊಂಡು ಹೋಗಲು ತಿಳಿಸುತ್ತಾಳೆ. ಅದರಂತೆ ಬಸಪ್ಪ ಶೆಟ್ಟರು ಬಾದಾಮಿ ಕ್ಷೇತ್ರಕ್ಕೆ ತೆರಳಿ ಅಲ್ಲಿನ ಅರ್ಚಕರು ನೀಡಿದ ಬನಶಂಕರಿ ದೇವಿಯ ಮೂರ್ತಿಯನ್ನು ತಂದು ಪ್ರಸ್ತುತ ದೇವಾಲಯ ಇರುವ ಸ್ಥಳದಲ್ಲಿ ಪೂಜಿಸಿರುತ್ತಾರೆ. ನಂತರ ಅದೇ ಸ್ಥಳದಲ್ಲಿ ಶ್ರೀ ಬಸಪ್ಪ ಶೆಟ್ಟರು, ಇವರ ಮಕ್ಕಳಾದ ಶ್ರೀ ಸೋಮಣ್ಣಶೆಟ್ಟಿ ಮತ್ತು ಇತರರು ದಿನಾಂಕ:21-05-1915 ರಲ್ಲಿ ಈ ದೇವಾಲಯವನ್ನು ನಿರ್ಮಿಸಿ ಶಕ್ತಿ ಸ್ವರೂಪಿಣಿ ಮತ್ತು ಸಿಂಹವಾಹಿನಿಯಾದ ಶ್ರೀ ಬನಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿರುತ್ತಾರೆ.
ಈ ದೇವಾಲಯವು ರಾಹುಕಾಲದ ಪೂಜೆಯಿಂದ ಪ್ರಸಿದ್ಧಿಯಾಗಿದ್ದು, ಭಾನುವಾರ, ಮಂಗಳವಾರ ಮತ್ತು ಶುಕ್ರವಾರ ದಿನಗಳಂದು ದೇವಿಗೆ ನಿಂಬೆಹಣ್ಣಿನ ಸಿಪ್ಪೆಯಲ್ಲಿ ದೀಪ ಬೆಳಗುವುದರಿಂದ ಭಕ್ತಾದಿಗಳಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಅವರವರ ಮನೋಕಾಮನೆಗಳು, ಇಷ್ಟಾರ್ಥ ಸಿದ್ಧಿ ಪೂರೈಸುತ್ತದೆ. ಅಲ್ಲದೇ ಯಾವುದೇ ರೀತಿಯ ಜಾತಕ ದೋಷಗಳು ಇದ್ದಲ್ಲಿ, ಅದು ದೇವಿಯ ಅನುಗ್ರಹದಿಂದ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ಬನದ ಹುಣ್ಣಿಮೆಯಂದು ಜಾತ್ರಾ ಮಹೋತ್ಸವವು ನಡೆಯುತ್ತದೆ. ಹಾಗೂ ಪ್ರತಿ ವರ್ಷ ಭಾದ್ರಪದ ಶುದ್ಧ ಹುಣ್ಣಿಮೆಯ ದಿನದಂದು ದೇವಿಯ ಜನ್ಮೋತ್ಸವವು ನಡೆಯುತ್ತದೆ. ನವರಾತ್ರಿಯ ಸಮಯದಲ್ಲಿ ದೇವಿಗೆ ವಿಶೇಷ ಪೂಜಾದಿಗಳು, ಅಲಂಕಾರಗಳು, ಹೋಮ-ಹವನಾದಿಗಳು ನೆರವೇರಿಸಲಾಗುತ್ತದೆ.