Screen Reader Access     A-AA+
ಶ್ರೀ ವಿಶ್ವೇಶ್ವರ ದೇವಸ್ಥಾನ ಎಲ್ಲೂರು, ಎಲ್ಲೂರು, ಉಡುಪಿ - 574113, ಉಡುಪಿ .
Sri Vishweshwara Temple, Yellur, Udupi - 574113, Udupi District [TM000055]
×
Temple History

ಇತಿಹಾಸ

ಒಂದು ಕ್ಷೇತ್ರದ ಮಹಿಮೆಯನ್ನು ತಿಳಿಯದೆ ಇದ್ದರೆ, ಆ ಕ್ಷೇತ್ರದಲ್ಲಿ ಭಕ್ತಿಯು ಉದಯಿಸಲಾರದು ಅದುದರಿಂದ ಉಡುಪಿ ಗೆ ಸುಮಾರು 15 ಮೈಲು ದೂರ ಆಗ್ನೇಯದಲ್ಲಿ ಶಿವ ಕ್ಷೇತ್ರಗಳಲ್ಲಿ ಪ್ರಸಿದ್ಧವಾದ ಕಾಶೀ ಕ್ಷೇತ್ರ ಪ್ರತಿನಿಧಿಯಾದ ಎಲ್ಲೂರು ಕ್ಷೇತ್ರದ ಕಥಾ ಜ್ಞಾನವು ಅವಶ್ಯವೆಂದು ಮನಗೊಂಡು ಭಕ್ತ ಜನರ ಪ್ರಯೋಜನಾರ್ಥವಾಗಿ ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡ ದಿಂದ ಇದನ್ನು ಸಂಗ್ರಹಿಸಿ ಕನ್ನಡ ತಾತ್ಪರ್ಯ ಸಹಿತವಾಗಿ ಈ ಗ್ರಂಥವು ಪ್ರಕಟಿಸಲ್ಪಟ್ಟಿದೆ. ಈ ಕ್ಷೇತ್ರದ ಶ್ರೀ ವಿಶ್ವನಾಥನನ್ನು ಶ್ರೀ ಮಧ್ವಾಧಿರಾಜ ತೀರ್ಥ ಪೂಜ್ಯ ಚರಣರು ತಮ್ಮ ತೀರ್ಥ ಪ್ರಬಂದದಲ್ಲಿ “ಕುಂದಪ್ರಸೂನಕೃತ ಸೇವನತೃಪ್ತ ಚಿತ್ತ” ಎಂಬುದಾಗಿ ಸಂಕ್ಷೇಪದಿಂದ ಕಥೆಯನ್ನು ಸೂಚಿಸಿ ವರ್ಣಿಸಿದ್ದಾರೆ. ಈ ಕ್ಷೇತ್ರವು ಸ್ವಯಂ ವ್ಯಕ್ತವಾಗಿದೆ. ಈ ಪುರಾಣ ಕಥಾಸಾರವೇನೆಂದರೆ:- ಕುಂದ ಕುಲೋತ್ಪನ್ನನಾದ ಭೂರಿಕೀರ್ತಿ ಎಂಬ ಶೂದ್ರ ರಾಜನು ತನ್ನ ಗ್ರಾಮ ಸಮೀಪಕ್ಕೆ ಬಂದ...