


ಇತಿಹಾಸ

ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕು ಹಂಪಿ ಈ ಕ್ಷೇತ್ರವು ಕರ್ನಾಟಕ ಇತಿಹಾಸದಲ್ಲಿ ಅತ್ಯಂತ ವೈಭವಯುತವಾಗಿ ಬೆಳೆದು ಹಕ್ಕ ಮತ್ತು ಬುಕ್ಕ ರಾಜರಿಂದ ವಿಜಯನಗರ ಸಾಮ್ರಾಜ್ಯ ನಿರ್ಮಿಸಿ ಮುತ್ತುರತ್ನಗಳನ್ನು ಕೊಳಗದಲ್ಲಿ ಅಳೆಯುತ್ತಿದ್ದ ಕ್ಷೇತ್ರವೇ ಹಂಪೆ ಇದನ್ನು ವಿಜಯನಗರ ಸಾಮ್ರಾಜ್ಯವೆಂದು ಕರೆಯಲ್ಪಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಇರುವ ಅತ್ಯಂತ ರಮಣೀಯವಾದ ದೇವಾಲಯವೆಂದರೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಎಲ್ಲಾ ರೀತಿಯ ಭಕ್ತರು ನಡೆದುಕೊಳ್ಳುವ ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಅತಿ ಪ್ರಸಿದ್ದವಾದ ಪುಣ್ಯ ಕ್ಷೇತ್ರವಾಗಿದೆ. ಪೌರಾಣಿಕ ಹಿನ್ನೆಲೆ ಇದೆ ಅದುವೇ “ದಕ್ಷಬ್ರಹ್ಮನ ಮಗಳು ದ್ರಾಕ್ಷಾಯಿಣಿ ದೇವಿಯು ದಕ್ಷ ಬ್ರಹ್ಮನು ಏರ್ಪಡಿಸಿದ ಯಜ್ಞಕುಂಡದಲ್ಲಿ ಧುಮುಕಿದ ಮೇಲೆ ಪರಮೇಶ್ವರನು ಹಿಮಾಲಯದಿಂದ ದಕ್ಷಿಣ ಮಾರ್ಗವಾಗಿ ಬಂದು ಶ್ರೀ ಹಂಪಿ ಕ್ಷೇತ್ರದ ಹೇಮಕೂಟ ಪರ್ವತದಲ್ಲಿ ತಪಸ್ಸಿಗೆ ಕುಳಿತನು. ಮನ್ಮಥನು ಪರಮೇಶ್ವರನ ತಪಸ್ಸನ್ನು...ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕು ಹಂಪಿ ಈ ಕ್ಷೇತ್ರವು ಕರ್ನಾಟಕ ಇತಿಹಾಸದಲ್ಲಿ ಅತ್ಯಂತ ವೈಭವಯುತವಾಗಿ ಬೆಳೆದು ಹಕ್ಕ ಮತ್ತು ಬುಕ್ಕ ರಾಜರಿಂದ ವಿಜಯನಗರ ಸಾಮ್ರಾಜ್ಯ ನಿರ್ಮಿಸಿ ಮುತ್ತುರತ್ನಗಳನ್ನು ಕೊಳಗದಲ್ಲಿ ಅಳೆಯುತ್ತಿದ್ದ ಕ್ಷೇತ್ರವೇ ಹಂಪೆ ಇದನ್ನು ವಿಜಯನಗರ ಸಾಮ್ರಾಜ್ಯವೆಂದು ಕರೆಯಲ್ಪಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಇರುವ ಅತ್ಯಂತ ರಮಣೀಯವಾದ ದೇವಾಲಯವೆಂದರೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಎಲ್ಲಾ ರೀತಿಯ ಭಕ್ತರು ನಡೆದುಕೊಳ್ಳುವ ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಅತಿ ಪ್ರಸಿದ್ದವಾದ ಪುಣ್ಯ ಕ್ಷೇತ್ರವಾಗಿದೆ. ಪೌರಾಣಿಕ ಹಿನ್ನೆಲೆ ಇದೆ ಅದುವೇ “ದಕ್ಷಬ್ರಹ್ಮನ ಮಗಳು ದ್ರಾಕ್ಷಾಯಿಣಿ ದೇವಿಯು ದಕ್ಷ ಬ್ರಹ್ಮನು ಏರ್ಪಡಿಸಿದ ಯಜ್ಞಕುಂಡದಲ್ಲಿ ಧುಮುಕಿದ ಮೇಲೆ ಪರಮೇಶ್ವರನು ಹಿಮಾಲಯದಿಂದ ದಕ್ಷಿಣ ಮಾರ್ಗವಾಗಿ ಬಂದು ಶ್ರೀ ಹಂಪಿ ಕ್ಷೇತ್ರದ ಹೇಮಕೂಟ ಪರ್ವತದಲ್ಲಿ ತಪಸ್ಸಿಗೆ ಕುಳಿತನು. ಮನ್ಮಥನು ಪರಮೇಶ್ವರನ ತಪಸ್ಸನ್ನು ಭಂಗಪಡಿಸಲು ಹೂವಿನ ಬಾಣಗಳನ್ನು ಪ್ರಯೋಗಿಸಿದಾಗ ಪರಮೇಶ್ವರನು ತನ್ನಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸಂಹಾರ ಮಾಡಿ ಪಾರ್ವತಿಯನ್ನು (ಪಂಪಾದೇವಿ) ವಿವಾಹವಾಗಿ ಶ್ರೀ ವಿರೂಪಾಕ್ಷಸ್ವಾಮಿಯಾಗಿ ವಿಶೇಷವಾದ ಅಕ್ಷ (ಕಣ್ಣು) ಮತ್ತು ರೂಪವನ್ನು ಹೊಂದಿದವನು ದೈವದತ್ತವಾಗಿ ನಿರ್ಮಿಸಿಕೊಂಡ 05 ಪರ್ವತಗಳಾದ ಅಂಜನಾ, ಮಾಲ್ಯವಂತ, ಮಾತಂಗ, ಋಷ್ಯಮುಖ ಹಾಗೂ ಹೇಮಕೂಟ ಪರ್ವತಗಳ ಮಧ್ಯೆ ತುಂಗಭದ್ರ ನದಿಯ ತಟದ ಈ ಪುಣ್ಯಭೂಮಿಯಲ್ಲಿ ಚಾಕ್ಷುಶಾಖ್ಯೆ ಮನ್ವಂತರದಲ್ಲಿ ಸ್ವಯಂಭೂ ಲಿಂಗ ರೂಪವಾಗಿ ನೆಲೆಸಿರುವವನೇ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ. ಹಂಪಿ ಕ್ಷೇತ್ರದಲ್ಲಿ ಇರುವ ಪಂಚಲಿಂಗಗಳಾದ ಪೂರ್ವ ದಿಕ್ಕಿಗೆ ಶ್ರೀ ಕಿನ್ನರೇಶ್ವರ, ದಕ್ಷಿಣ ದಿಕ್ಕಿಗೆ ಶ್ರೀ ಜಂಬುನಾಥೇಶ್ವರ, ಪಶ್ಚಿಮಕ್ಕೆ ಶ್ರಿ ಸೋಮೇಶ್ವರ ಹಾಗೂ ಉತ್ತರ ದಿಕ್ಕಿಗೆ ಶ್ರೀ ವಾಣಿಭದ್ರೇಶ್ವರ ಮಧ್ಯ ಭಾಗದಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಹೀಗೆ ಪಂಚ ಲಿಂಗಗಳನ್ನು ಹೊಂದಿ ಈ ಕ್ಷೇತ್ರವು ಅತ್ಯಂತ ಪ್ರಸಿದ್ದಿಯಾಗಿದೆ. ಈ ಮಹಾ ಕ್ಷೇತ್ರಕ್ಕೆ ದಕ್ಷಿಣ ಕಾಶಿ ಎಂದು ಸಹ ಕರೆಯುತ್ತಾರೆ. ತ್ರೇತಾ ಯುಗದಲ್ಲಿ ಶ್ರೀ ರಾಮಚಂದ್ರ ದೇವರು ನೆಲೆಸಿದ ಕ್ಷೇತ್ರವೇ ಕಿಷ್ಕಿಂದೆ ಕ್ಷೇತ್ರವೆಂದು ಪ್ರಸಿದ್ದಿ ಪಡೆದಿದೆ. ಈ ಹಂಪಿ ಕ್ಷೇತ್ರದಲ್ಲಿ ಶ್ರೀ ರಾಮಚಂದ್ರ ದೇವರು ಸುಗ್ರೀವನ ಸ್ನೇಹವನ್ನು ಪಡೆದು ಚಾತುರ್ಮಾಸವನ್ನು (ನಾಲ್ಕು ತಿಂಗಳು) ಕಳೆದರೆಂದು, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆದರೆಂದು ಪುರಾಣದಲ್ಲಿ ಗೋಚರವಾಗುತ್ತದೆ. ವೇದವ್ಯಾಸ ವಿರಚಿತ ಸಂಸ್ಕೃತ ಮಹಾಗ್ರಂಥ ಸ್ಕಂದ ಪುರಾಣದಲ್ಲಿ ಶ್ರಿ ವಿರೂಪಾಕ್ಷ ಹಾಗೂ ಪಂಪಾ ಕ್ಷೇತ್ರದ ಮಹಿಮೆಯ ವರ್ಣನೆಯನ್ನು ಮಾಡಿದ್ದಾರೆ. ಈ ಭಾಗವನ್ನು ಪಂಪಾಮಹಾತ್ಮೆ ಎನ್ನುವರು ಇದರ ಪ್ರಕಾರ ಪಂಪಾ ಕ್ಷೇತ್ರವು 300 ಯುಗಗಳಷ್ಟು ಪುರಾತನವಾದುದು ಎಂದು ಸ್ಪಷ್ಟವಾಗುತ್ತದೆ. ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನವನ್ನು ರಾಷ್ಟಕೂಟರು, ಬಾದಾಮಿ ಚಾಲುಕ್ಯರು ಹೊಯ್ಸಳರು, ವಿಜಯನಗರದ ಅರಸರು ಹಂತ ಹಂತವಾಗಿ ಅಭಿವೃದ್ದಿ ಪಡಿಸಿದ್ದಾರೆ. ವಿಜಯನಗರ ಅರಸರ ಕಾಲದಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನವು ಸರ್ವತೋಮುಖ ಅಭಿವೃದ್ದಿಯನ್ನು ಹೊಂದಿರುತ್ತದೆ. ವಿಸ್ತಾರವಾದ ಉತ್ತರ ದಿಕ್ಕಿಗೆ ತುಂಗಭದ್ರ ನದಿ ಹರಿಯುತ್ತದೆ ಉಳಿದ ಮೂರು ದಿಕ್ಕಿಗೆ ಕಠಿಣವಾದ ಬಂಡೆಕಲ್ಲುಗಳ ಬೆಟ್ಟದ ಸಾಲುಗಳ ಒಂದು ಕೋಟೆಯಂತಿರುವ ಪ್ರಕೃತಿದತ್ತವಾದ ಅದ್ಭುತವಾದ ಅಯಕಟ್ಟಿನ ಸ್ಥಳವಿರುತ್ತದೆ ಹಾಗೂ ಒಂದು ಮೊಲ ತನ್ನ ರಕ್ಷಣೆಗಾಗಿ ನಾಯಿಯನ್ನು ಓಡಿಸಿಕೊಂಡು ಹೋದುದನ್ನು ನೋಡಿ ಹಂಪಿಯಲ್ಲಿ ಹಿಂದೂ ಧರ್ಮದ ರಕ್ಷಣೆಗಾಗಿ ಶ್ರೀವಿದ್ಯಾರಣ್ಯರ ಆಶೀರ್ವಾದದಿಂದ ಹರಿಹರ ಮತ್ತು ಬುಕ್ಕರು ಕ್ರಿ.ಶ. 1336ರಲ್ಲಿ ಹಂಪಿ ಕ್ಷೇತ್ರದಲ್ಲಿ ಹಿಂದೂ ಧರ್ಮದ ರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯವನ್ನು ಪ್ರತಿಷ್ಠಾಪಿಸಿರುವುದಾಗಿ ಇತಿಹಾಸಕಾರರ ಅಭಿಪ್ರಾಯವಾಗಿರುತ್ತದೆ. ಹೀಗೆ ಪುರಾತನ ಕಾಲದಲ್ಲಿ ಪುಣ್ಯ ಕ್ಷೇತ್ರ ಶಕ್ತಿಶಾಲಿ ಸಾಮ್ರಾಜ್ಯದ ರಾಜಧಾನಿ ಆಯಿತು. ಈ ಕ್ಷೇತ್ರವು ದೇವತಾಂಶ ಸಂಭೂತವೂ ಹಾಗೂ ರಮಣೀಯ ಕ್ಷೇತ್ರವು ಆಗಿರುತ್ತದೆ ಎಂದರೆ ತಪ್ಪಾಗಲಾರದು. ಇಂಥಹ ಕ್ಷೇತ್ರವೇ ಶ್ರೀ ಹಂಪಿ ಮಹಾಕ್ಷೇತ್ರ ಈ ಕ್ಷೇತ್ರದ ಬಗ್ಗೆ ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದಿನಂಪ್ರತಿ ಶೈವಾಗಮ ಪದ್ದತಿಯಲ್ಲಿ ಸಂಪ್ರದಾಯಬದ್ದ ಆಚರಣೆಗಳು, ಪೂಜಾ ವಿಧಿ ವಿದಾನಗಳು, ತ್ರಿಕಾಲ ಪೂಜೆ, ತ್ರಿಕಾಲ ನೈವೇದ್ಯ ಜರುಗುತ್ತದೆ. ಶ್ರೀ ಭುವನೇಶ್ವರಿ ದೇವಿ, ಶ್ರೀ ಪಾರ್ವತಿ ದೇವಿ, ಶ್ರೀ ಭುವನೇಶ್ವರಿ ಸಮೇತ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯವರು ಹಂಪಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಧಾರ್ಮಿಕ ಕ್ಷೇತ್ರವಾಗಿದೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕು ಹಂಪಿ ಕ್ಷೇತ್ರ. ಇತ್ತಿಚಿನ ದಿನಗಳಲ್ಲಿ ಪ್ರವಾಸಿ ತಾಣವಾಗಿಯು ಪ್ರಸಿದ್ದಿ ಪಡೆದಿದೆ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ ಶಿಲ್ಪಕಲೆಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಶ್ರೀ ವ್ಯಾಸರಾಜರು ವಿಜಯನಗರ ಸಾಮ್ರಾಜ್ಯಕ್ಕೆ ಬಂದು ಹಲವಾರು ದಿವಸಗಳಾಗಿತ್ತು. ವ್ಯಾಸತೀರ್ಥರು ವಿದ್ಯಾನಗರಿಗೆ ಬಂದಾಗಲೆಲ್ಲ ಪ್ರತಿ ದಿನ ಚಕ್ರತೀರ್ಥಕ್ಕೆ ಬಂದು ಅಲ್ಲಿ ತುಂಗಭದ್ರ ನದಿಯಲ್ಲಿ ಅವಗಾಹನ ಸ್ನಾನ ಮಾಡಿ ಎತ್ತರದ ಬಂಡೆಯೊಂದರಲ್ಲಿ ಕುಳಿತು ಸ್ನಾನಾಹ್ನೀಕಾದಿಗಳನ್ನು ನೆರೆವೆರಿಸಿ ಬರುತ್ತಿದ್ದರು. ಒಂದು ರಾತ್ರಿ ಅವರೊಂದು ವಿಚಿತ್ರ ಕನಸು ಕಂಡರು. ಕನಸಿನಲ್ಲಿ ಮುಖ್ಯ ಪ್ರಾಣ ದೇವರು (ವಾಯು ದೇವರು) ದರ್ಶನವಿತ್ತು ಆ ತರುವಾಯ ತಮ್ಮ ಹನುಮ-ಭೀಮ-ಮಾದ್ವಾವತಾರ ರೂಪಗಳಿಂದ ಆಶಿರ್ವದಿಸಿ “ವತ್ಸ ನಾವು ನಿವುಗೆ ಒಲಿದಿದ್ದೇವೆ ನಾವು ಈ ಪವಿತ್ರ ನೆಲದಲ್ಲಿ ಹಿಂದೆ ನಮ್ಮ ಮೊದಲ ಅವತಾರ ತಾಳಿ ಜನಿಸಿದ್ದೇವು. ಇದು ನಮ್ಮ ಜನ್ಮ ಭೂಮಿ ನಿನಗೆ ನಾವು ಹನುಮ ರೂಪದಿಂದ ಒಲಿದು ಬರುತ್ತೇವೆ ಚಕ್ರತೀರ್ಥ ಪವಿತ್ರ ತಟದಲ್ಲಿ ನಮ್ಮನ್ನು ಪ್ರತಿಷ್ಠಾಪಿಸು ನಾವು ನಿನ್ನ ಕಾರ್ಯವೆಲ್ಲಕ್ಕೂ ಬೆಂಬಲಿಗರಾಗಿದ್ದು ಜಯ ನೀಡುತ್ತೇವೆ. ಮತ್ತು ಕನ್ನಡ ಸಾಮ್ರಾಜ್ಯದ ಸರ್ವತೋಮುಖ ಅಭೀವೃದ್ದಿಯಾಗುವಂತೆ ಮಾಡಿ ಅನುಗ್ರಹಿಸುತ್ತೇವೆ” ಎಂದು ಅಭಯವಿತ್ತು ಅದೃಶ್ಯರಾದರು. ಎಚ್ಚರಗೊಂಡ ಶ್ರೀಗಳವರು ಸ್ವಪ್ನಾರ್ಥವನ್ನು ನೆನೆದು ಹಿಗ್ಗಿದರು ಶ್ರೀ ಮುಖ್ಯಪ್ರಾಣನ ಅನುಗ್ರಹವಾಯಿತೆಂದು ಸಂತೋಷಿಸಿದರು ಯಾವಾಗ ಎಲ್ಲಿ ಹೇಗೆ ಒಲಿದು ಬರುವರೋ ಎಂದು ಯೋಚಿಸುತ್ತಾ ಪ್ರತಿನಿತ್ಯದ ಪದ್ದತಿಯಂತೆ ಮಿತ ಪರಿವಾರದೊಡನೆ ಚಕ್ರತೀರ್ಥಕ್ಕೆ ಸ್ನಾನ ಮಾಡಲು ಮೇನೆಯಲ್ಲಿ ಕುಳಿತು ಬಂದರು ಚಕ್ರತೀರ್ಥವು ಪರಮ ಪಾವನ ತಿರ್ಥವು ಅಲ್ಲಿ ವರಾಹನಂದಿನಿಯಾದ ತುಂಗಭದ್ರೆಯ ಮಂಗಲಕರ ಮಂಜುಳರವದಿಂದ ನಲಿಯುತ್ತ ಭರದಿಂದ ಹರಿಯುತ್ತಿದ್ದಳು ಭಗವಾನ್ ದಿನಮಣಿಯು ಪೂರ್ವ ದಿಗಂತದಿಂದ ಮೇಲೆದ್ದು ಬಂದು ಅಮೃತಮಯ ಅರುಣಕಿರಣಗಳಿಂದ ಸರ್ವಸುಜನರನ್ನು ಅನಂದಗೊಳಿಸುತ್ತಿದ್ದಾನೆ. ಗುರುವರರು ಸಂಕಲ್ವ ಪೂರ್ವಕ ಚಕ್ರತೀರ್ಥದಲ್ಲಿ ಅವಗಾಹನ ಸ್ನಾನ ಮಾಡಿ ದಂಡೋಕದಿಂದ ಸುಜ್ಜನರನ್ನು ಪವಿತ್ರಗೊಳಸಿ ಮೇಲೆದ್ದು ಬಂದು ಒಂದು ವಿಶಾಲವಾದ ಬಂಡೆಯ ಮೇಲೆ ಕಾಪಾಯಾಂಬರ ಧರಿಸಿ ಕುಳಿತು ನಾಮಧಾರಣ ಮಾಡಿಕೊಂಡು ಪ್ರಾತರಾಹ್ನಿಪ ಜಪತಪಾದಿಗಳನ್ನು ಪೂರೈಸಿ ಶ್ರೀ ಹರಿವಾಯುಗಳ ಧ್ಯಾನದಲ್ಲಿ ಮಗ್ನರಾದರು. ಆಗ ಶ್ರೀಗಳವರ ಹೃದಯ ಮಂದಿರದಲ್ಲಿ ದಿವ್ಯ ಪ್ರಕಾಶವು ಬೆಳಗಿದಂತಾಗಿ ಆ ಬೆಳಕಿನ ಕಾಂತಿವಲಯದಲ್ಲಿ ಕರದಲ್ಲಿ ಗದೆ ಕಮಂಡಲಗಳನ್ನು ಹಿಡಿದು ಪಾದಗಳಲ್ಲಿ ಮಣಿ ಪಾದುಕೆಗಳನ್ನು ಮೆಟ್ಟಿರುವ ಮುಖ್ಯ ಪ್ರಾಣದೇವರು ಮಂದಹಾಸ ಬೀರುತ್ತಾ ನಿಂತಂತೆ ಭಾಸವಾಯಿತು ಆ ಮಂಗಳಕರ ಸ್ವರೂಪವನ್ನು ದರ್ಶಿಸುತ್ತಿದಂತೆ ಪ್ರಾಣದೇವರು ಕಣ್ಮರೆಯಾದರು ಶ್ರೀಯವರು ಕಣ್ತೆರೆದರು ಅವರ ಮುಂಭಾಗದಲ್ಲಿದ್ದ ಕರಿಯಬಂಡೆಯ ಮೇಲೆ ಅವರ ದೃಷ್ಠಿ ಹರಿಯಿತು ಕೂಡಲೇ ಅದು ಮಾಯವಾಗಿ ಅಲ್ಲೋಂದು ಕಪಿಯು ಕುಳಿತಿರುವುದನ್ನು ನೋಡಿದರು ತಮ್ಮ ಹೃದಯಗುಹೆಯಲ್ಲಿ ದರ್ಶನವಿತ್ತು ಅನುಗ್ರಹಿಸಿದ ಪ್ರಾಣದೇವರ ಆಕಾರತಾಳಿ ನಿಂತಂತಾಗಿ ಮತ್ತೆ ಬರೆ ಬಂಡೆಗಲ್ಲಾಗಿ ಗೋಚರಿಸಿತು. ವ್ಯಾಸತೀರ್ಥರ ಮುಖದಲ್ಲಿ ಮಂದಹಾಸ ಮಿನುಗಿತು. ಹೃದಯಭಕ್ತಿ ಭರದಿಂದ ಉಬ್ಬಿತು ಕಣ್ಣಾಲಿಗಳು ತೇವಗೊಂಡವು “ದೇವ ಅನುಗೃಹಿತನಾದೆ” ಎಂದು ಗದ್ಗದ ಕಂಠದಿಂದ ಸುರಿದರು ಹತ್ತಿರ ಆಹ್ನೀಕ ಪಾತ್ರೆಯಲ್ಲಿದ್ದ ಅಂಗಾರದಿಂದ ತಮಗೆ ದರ್ಶನವಿತ್ತ ಶ್ರೀಪ್ರಾಣದೇವರನ್ನು ಆ ಬಂಡೆಯ ಮೇಲೆ ಚಿತ್ರಿಸಿದರು. ಚಿತ್ರ ಸುಂದರವಾಗಿ ಮೂಡಿಬಂದಿತ್ತು ಆದರೇನಾಶ್ಚರ್ಯ ಅವರು ಬರೆದ ಮಾರುತಿ ಚಿತ್ರ ಕಣ್ಮರೆಯಾಗಿ ಮತ್ತೆ ಆ ಬಂಡೆ ಬರಿಗಲ್ಲಾಗಿ ನಿಂತಿತು. ಶ್ರೀ ವ್ಯಾಸರಾಜರು ಮತ್ತೆ ಅದೇ ಚಿತ್ರವನ್ನು ಬರೆದರು ಪುನಃ ಅದು ಅದೃಸ್ಯವಾಯಿತು ಶ್ರೀಯವರು “ಜೀವೋತ್ತಮ” ವಾಯುನಂದನ ದಾಸನೊಡನೆ ವಿನೋದ ಮಾಡುತ್ತಿರುವೆಯಾ? ಪ್ರಸನ್ನನಾಗು ಸ್ವಾಮಿ ಎಂದು ಪ್ರಾರ್ಥಿಸಿ ಮತ್ತೆ ಚಿತ್ರವನ್ನು ಬರೆದರು ಹೀಗೆ ಹನ್ನೆರಡು ಸಲ ಪುನಃ ಪುನಃ ಪ್ರಾಣ ದೇವರ ಚಿತ್ರವನ್ನು ಬರೆಯುವುದು ಬರೆದೊಡನೆ ಅದು ಅದೃಶ್ಯವಾಗುವುದು ಹೀಗೆ ಜರುಗಿತು. ವ್ಯಾಸರಾಜರು ಇದೇಕೆ ಹೀಗಾಗುತ್ತಿದೆ ಎಂದು ಚಿಂತಿಸುತ್ತಿರಲು ಮನದಲ್ಲಿ ಎನೋ ಸ್ಪುರಿಸಿದಂತಾಗಿ ನಸುನಗುತ್ತಾ ಆ ಬಂಡೆಯ ಮೇಲೆ ಮೊದಲೊಂದು ಪ್ರಾಣದೇವರ ಯಂತ್ರವನ್ನು ಬರೆದು ಅದರ ಸುತ್ತಲೂ ಹಿಂದೆ ತಾವು ಬರೆದ ಹನ್ನೆರಡು ಕಪಿ ವೀರರ ಹನುಮಂತನ ಚಿತ್ರಗಳನ್ನು ಬರೆದರು ಒಂದರ ಬಾಲ ಮತ್ತೊಂದಕ್ಕೆ ಗಂಟು ಹಾಕಿದಂತೆ ಹನ್ನೆರಡು ಪ್ರಾಣದೇವರ ಚಿತ್ರಗಳನ್ನು ಯಂತ್ರದ ಕಾವಲಾಗಿ ಬರೆದರು ಅನಂತರ ಬೀಜಾಕ್ಷರಗಳನ್ನು ಬರೆದು ಯಂತ್ರದ ಮಧ್ಯಭಾಗದಲ್ಲಿ ಶ್ರೀ ಪ್ರಾಣದೇವರ ದಿವ್ಯ ಸ್ವರೂಪವನ್ನು ಚಿತ್ರಿಸಿ ದಿಗ್ಭಂಧನ ಮಾಡಿ “ ಪ್ರಭು ವಾಯುನಂದನ ಹನುಮ-ಭೀಮ-ಮಾಧ್ವಾಬಿಧ ಶ್ರೀ ಭಾರತೀರಮಣ ಮುಖ್ಯ ಪ್ರಾಣದೇವ ಕನಸಿನಲ್ಲಿ ಒಲಿದು ಬರುವುದಾಗಿ ಅಭಯವಿತ್ತು ದಾಸನೊಡನೆ ಏಕಿಂತು ಸರಸವಾಡುತ್ತಿರುವೆ? ಭಕ್ತವತ್ಸಲನಾದ ನಿನಗಿದು ಶೋಭಿಸುವುದೇ? ದೇವ, ಈಗ ನಿನ್ನನ್ನು ಈ ಯಂತ್ರದಲ್ಲಿ ದಿಗ್ಭಂಧನ ಮಾಡಿ ಚಿತ್ರಿಸಿದ್ದೇನೆ ಪ್ರಸನ್ನನಾಗಿ ಸ್ಥಿರವಾಗಿ ನಿಂತು ಕನ್ನಡನಾಡಿನ ಉನ್ನತಿ ಭಕ್ತ ಜನರ ಮನೋಭೀಷ್ಠೆಗಳನ್ನು ಪೂರ್ಣ ಮಾಡುತ್ತ ಅನುಗ್ರಹಿಸು ಎಂದು ಪ್ರಾರ್ಥಿಸಿ, ತುಳಸೀ ಪುಷ್ಷಗಳನ್ನು ಅರ್ಪಿಸಿದರು. ಆಗ ಯಂತ್ರಬದ್ದನಾದ ಪ್ರಾಣದೇವರು ತನ್ನ ಅಂತರಂಗದ ಭಕ್ತರಾದ ವ್ಯಾಸಮುನಿಗಳಲ್ಲಿ ಪ್ರಸನ್ನನಾಗಿ ನಗುನಗುತ್ತಾ ದರ್ಶನವಿತ್ತು ಅಭಯ ಪ್ರಧಾನ ಮಾಡಿ ಅಂತರ್ಧಾನನಾದನು ಗುರುಗಳು ಅಂಗಾರದಲ್ಲಿ ಬರೆದ ಚಿತ್ರ ಬಂಡೆಗಲ್ಲಿನಲ್ಲಿ ಉಬ್ಬಿ ಸಾಕಾರಮೂರ್ತಿಯಾಗಿ ಕಂಗೊಳಿಸಿತು. ಯಂತ್ರೋದ್ದಾರಕ ಪ್ರಾಣದೇವರನ್ನು ಭಕ್ತಿಯಿಂದ ಸ್ತುತಿಸಿ ನಮಸ್ಕರಿಸಿದರು. ಈ ಅದ್ಭುತವನ್ನು ಕಣ್ಣಾರೆಕಂಡ ಮಠದ ಪರಿವಾರ ಚಕ್ರತೀರ್ಥಕ್ಕೆ ಸ್ನಾನ ಮಾಡಲು ಆಗಮಿಸಿದ್ದ ಧಾರ್ಮಿಕರು ವ್ಯಾಸರಾಜರ ಆಗಾದ ಮಹಿಮೆಯನ್ನು ಕೊಂಡಾಡಹತ್ತಿದರು. ಅಂದು ಸಂಜೆ ಶ್ರೀಯವರು ನರಸನಾಯಕನನ್ನು ಕರೆಯಿಸಿಕೊಂಡು ಚಕ್ರತೀರ್ಥಕ್ಕೆ ಬಂದು “ಕ್ಷಮಾಧಿಪತಿಗಳೇ ನಾವು ತಿರುಪತಿ ಶ್ರೀ ರಂಗಗಳಲ್ಲಿ ಕೆಲ ಪ್ರಾಣದೇವರನ್ನು ಪ್ರತಿಷ್ಠಿಸಿರುವುದನ್ನು ನೀವು ಬಲ್ಲಿರಿ , ಕನ್ನಡ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ದಿ, ಶತ್ರುಪರಾಜಯ ಪ್ರಜೆಗಳ ಕ್ಷೇಮಗಳಿಗಾಗಿ ನಾಡಿನ ಎಲ್ಲಾ ಭಾಗಗಳಲ್ಲಿ ನಾಡಿನ ಎಲ್ಲೆಯ ಗುರುತಾಗಿ ನಾವು 732 ಪ್ರಾಣದೇವರನ್ನು ಪ್ರತಿಷ್ಠಿಸಲು ಮನಸಾ ಸಂಕಲ್ಪಿಸಿದೆವು. ಸಂಕಲ್ಪವನ್ನು ಯಶಸ್ವಿಗೊಳಿಸಲೋ ಎಂಬಂತೆ ಶ್ರೀ ಪ್ರಾಣದೇವರು ನಮಗೊಲಿದು ಇಲ್ಲಿ ಮೈದೋರಿದ್ದಾರೆ. ಈ ದೇವರನ್ನು “ಯಂತ್ರೋದ್ದಾರಕ ಪ್ರಾಣದೇವರು” ಎಂಬ ಹೆಸರಿನಿಂದ ಇದೇ ಸ್ಥಳದಲ್ಲಿ ಶನಿವಾರದಂದು ಪ್ರತಿಷ್ಠಾಪಿಸಲು ಇಚ್ಚಿಸಿದ್ದೇನೆ. ಇದರಂತೆ ಸಾಮ್ರಾಜ್ಯದಲ್ಲೆಲ್ಲಾ ಪ್ರಾಣದೇವರನ್ನು ಪ್ರತಿಷ್ಠಾಪಿಸಲು ಆಶಿಸಿದ್ದೇವೆ. ನೀವು ಇದಕ್ಕೆ ಅನುಕೂಲ ಮಾಡಿಕೊಡಬೇಕು ನೀವು ಕ್ಷಮಾಧಿಪತಿಗಳಾದ ತರುಣದಲ್ಲೆ ಶ್ರೀ ಪ್ರಾಣದೇವರು ಇಲ್ಲಿ ಅಭಿವ್ಯಕ್ತರಾಗಿರುವುದು ಸಾಮ್ರಾಜ್ಯದ ಮತ್ತು ನಿಮ್ಮ ಅಭ್ಯದುಯಕ್ಕೆ ಶುಭ ಸೂಚನೆಯಾಗಿದೆ. ಈ ದೇವರ ಪ್ರತಿಷ್ಠೆಗೆ ಸಕಲ ಅನುಕೂಲಗಳನ್ನೇರ್ಪಡಿಸಿ ಕೊಟ್ಟು ಶ್ರೀ ಪ್ರಾಣದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ಹೇಳಲು ಆನಂದ ತುಂದಿಲರಾದ ನರಸನಾಯಕರು “ಗುರುದೇವರ ಅಪ್ಪಣೆಯಂತಾಗಲಿ” ಎಂದು ವಿಜ್ಞಾಪಿಸಿ ಭಕ್ತಿಪರವಶನಾಗಿ ಗುರುಗಳಿಗೆ ನಮಿಸಿ ಅರಮನೆಗೆ ತೆರಳಿದರು. ಶ್ರೀಯವರು ಮಠಕ್ಕೆ ಚಿತ್ತೈಸಿದರು. ಚಕ್ತತಿರ್ಥದ ದಡದಲ್ಲಿ ಅಸಾಧ್ಯ ಜನಸಂದಣಿ ಸಹಸ್ರಾರು ಜನರು ಶ್ರೀ ವ್ಯಾಸರಾಜರು ಭಕ್ತಿಪೂರ್ವಕವಾಗಿ ನೆರೆವೆರಿಸಿದ ಶ್ರೀ ಯಂತ್ರೋದ್ದಾರಕ ಪ್ರಾಣದೇವರ ಪ್ರತಿಷ್ಠಾಪನಾ ಮಹೋತ್ಸವವನ್ನು ವೀಕ್ಷಿಸಿ ಆನಂದ ಪರವಶರಾಗಿದ್ದಾರೆ. ವೈದಿಕ ವಿಧಿ ಪೂರ್ವಕವಾಗಿ ಪ್ರತಿಷ್ಠೆಯನ್ನು ನೆರೆವೇರಿಸಿದ್ದು ಶ್ರೀ ವ್ಯಾಸರಾಜರು ಪಂಚಾಮೃತಾದಿಗಳನ್ನು ನೆರವೇರಿಸಿ ದೇವರಿಗೆ ಫಲಸಮರ್ಪಣೆ ಮಾಡಿ ಮಹಾಮಂಗಳಾರತಿಯನ್ನು ನೆರವೇರಿಸಿ ಪ್ರಾರ್ಥಿಸುತಿರುವಾಗ ಜನಸ್ತೋಮ “ಜಯಜಯ ಯಂತ್ರೋದ್ದಾರಕ ಪ್ರಾಣದೇವ” ಎಂದು ಘೋಷಿಸಿದರು.
ಸ್ಥಳ ಪುರಾಣ

ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕು ಹಂಪಿ ಈ ಕ್ಷೇತ್ರವು ಕರ್ನಾಟಕ ಇತಿಹಾಸದಲ್ಲಿ ಅತ್ಯಂತ ವೈಭವಯುತವಾಗಿ ಬೆಳೆದು ಹಕ್ಕ ಮತ್ತು ಬುಕ್ಕ ರಾಜರಿಂದ ವಿಜಯನಗರ ಸಾಮ್ರಾಜ್ಯ ನಿರ್ಮಿಸಿ ಮುತ್ತುರತ್ನಗಳನ್ನು ಕೊಳಗದಲ್ಲಿ ಅಳೆಯುತ್ತಿದ್ದ ಕ್ಷೇತ್ರವೇ ಹಂಪೆ ಇದನ್ನು ವಿಜಯನಗರ ಸಾಮ್ರಾಜ್ಯವೆಂದು ಕರೆಯಲ್ಪಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಇರುವ ಅತ್ಯಂತ ರಮಣೀಯವಾದ ದೇವಾಲಯವೆಂದರೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಎಲ್ಲಾ ರೀತಿಯ ಭಕ್ತರು ನಡೆದುಕೊಳ್ಳುವ ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಅತಿ ಪ್ರಸಿದ್ದವಾದ ಪುಣ್ಯ ಕ್ಷೇತ್ರವಾಗಿದೆ. ಪೌರಾಣಿಕ ಹಿನ್ನೆಲೆ ಇದೆ ಅದುವೇ “ದಕ್ಷಬ್ರಹ್ಮನ ಮಗಳು ದ್ರಾಕ್ಷಾಯಿಣಿ ದೇವಿಯು ದಕ್ಷ ಬ್ರಹ್ಮನು ಏರ್ಪಡಿಸಿದ ಯಜ್ಞಕುಂಡದಲ್ಲಿ ಧುಮುಕಿದ ಮೇಲೆ ಪರಮೇಶ್ವರನು ಹಿಮಾಲಯದಿಂದ ದಕ್ಷಿಣ ಮಾರ್ಗವಾಗಿ ಬಂದು ಶ್ರೀ ಹಂಪಿ ಕ್ಷೇತ್ರದ ಹೇಮಕೂಟ ಪರ್ವತದಲ್ಲಿ ತಪಸ್ಸಿಗೆ ಕುಳಿತನು. ಮನ್ಮಥನು ಪರಮೇಶ್ವರನ ತಪಸ್ಸನ್ನು...ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕು ಹಂಪಿ ಈ ಕ್ಷೇತ್ರವು ಕರ್ನಾಟಕ ಇತಿಹಾಸದಲ್ಲಿ ಅತ್ಯಂತ ವೈಭವಯುತವಾಗಿ ಬೆಳೆದು ಹಕ್ಕ ಮತ್ತು ಬುಕ್ಕ ರಾಜರಿಂದ ವಿಜಯನಗರ ಸಾಮ್ರಾಜ್ಯ ನಿರ್ಮಿಸಿ ಮುತ್ತುರತ್ನಗಳನ್ನು ಕೊಳಗದಲ್ಲಿ ಅಳೆಯುತ್ತಿದ್ದ ಕ್ಷೇತ್ರವೇ ಹಂಪೆ ಇದನ್ನು ವಿಜಯನಗರ ಸಾಮ್ರಾಜ್ಯವೆಂದು ಕರೆಯಲ್ಪಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಇರುವ ಅತ್ಯಂತ ರಮಣೀಯವಾದ ದೇವಾಲಯವೆಂದರೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಎಲ್ಲಾ ರೀತಿಯ ಭಕ್ತರು ನಡೆದುಕೊಳ್ಳುವ ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಅತಿ ಪ್ರಸಿದ್ದವಾದ ಪುಣ್ಯ ಕ್ಷೇತ್ರವಾಗಿದೆ. ಪೌರಾಣಿಕ ಹಿನ್ನೆಲೆ ಇದೆ ಅದುವೇ “ದಕ್ಷಬ್ರಹ್ಮನ ಮಗಳು ದ್ರಾಕ್ಷಾಯಿಣಿ ದೇವಿಯು ದಕ್ಷ ಬ್ರಹ್ಮನು ಏರ್ಪಡಿಸಿದ ಯಜ್ಞಕುಂಡದಲ್ಲಿ ಧುಮುಕಿದ ಮೇಲೆ ಪರಮೇಶ್ವರನು ಹಿಮಾಲಯದಿಂದ ದಕ್ಷಿಣ ಮಾರ್ಗವಾಗಿ ಬಂದು ಶ್ರೀ ಹಂಪಿ ಕ್ಷೇತ್ರದ ಹೇಮಕೂಟ ಪರ್ವತದಲ್ಲಿ ತಪಸ್ಸಿಗೆ ಕುಳಿತನು. ಮನ್ಮಥನು ಪರಮೇಶ್ವರನ ತಪಸ್ಸನ್ನು ಭಂಗಪಡಿಸಲು ಹೂವಿನ ಬಾಣಗಳನ್ನು ಪ್ರಯೋಗಿಸಿದಾಗ ಪರಮೇಶ್ವರನು ತನ್ನಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸಂಹಾರ ಮಾಡಿ ಪಾರ್ವತಿಯನ್ನು (ಪಂಪಾದೇವಿ) ವಿವಾಹವಾಗಿ ಶ್ರೀ ವಿರೂಪಾಕ್ಷಸ್ವಾಮಿಯಾಗಿ ವಿಶೇಷವಾದ ಅಕ್ಷ (ಕಣ್ಣು) ಮತ್ತು ರೂಪವನ್ನು ಹೊಂದಿದವನು ದೈವದತ್ತವಾಗಿ ನಿರ್ಮಿಸಿಕೊಂಡ 05 ಪರ್ವತಗಳಾದ ಅಂಜನಾ, ಮಾಲ್ಯವಂತ, ಮಾತಂಗ, ಋಷ್ಯಮುಖ ಹಾಗೂ ಹೇಮಕೂಟ ಪರ್ವತಗಳ ಮಧ್ಯೆ ತುಂಗಭದ್ರ ನದಿಯ ತಟದ ಈ ಪುಣ್ಯಭೂಮಿಯಲ್ಲಿ ಚಾಕ್ಷುಶಾಖ್ಯೆ ಮನ್ವಂತರದಲ್ಲಿ ಸ್ವಯಂಭೂ ಲಿಂಗ ರೂಪವಾಗಿ ನೆಲೆಸಿರುವವನೇ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ. ಹಂಪಿ ಕ್ಷೇತ್ರದಲ್ಲಿ ಇರುವ ಪಂಚಲಿಂಗಗಳಾದ ಪೂರ್ವ ದಿಕ್ಕಿಗೆ ಶ್ರೀ ಕಿನ್ನರೇಶ್ವರ, ದಕ್ಷಿಣ ದಿಕ್ಕಿಗೆ ಶ್ರೀ ಜಂಬುನಾಥೇಶ್ವರ, ಪಶ್ಚಿಮಕ್ಕೆ ಶ್ರಿ ಸೋಮೇಶ್ವರ ಹಾಗೂ ಉತ್ತರ ದಿಕ್ಕಿಗೆ ಶ್ರೀ ವಾಣಿಭದ್ರೇಶ್ವರ ಮಧ್ಯ ಭಾಗದಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಹೀಗೆ ಪಂಚ ಲಿಂಗಗಳನ್ನು ಹೊಂದಿ ಈ ಕ್ಷೇತ್ರವು ಅತ್ಯಂತ ಪ್ರಸಿದ್ದಿಯಾಗಿದೆ. ಈ ಮಹಾ ಕ್ಷೇತ್ರಕ್ಕೆ ದಕ್ಷಿಣ ಕಾಶಿ ಎಂದು ಸಹ ಕರೆಯುತ್ತಾರೆ. ತ್ರೇತಾ ಯುಗದಲ್ಲಿ ಶ್ರೀ ರಾಮಚಂದ್ರ ದೇವರು ನೆಲೆಸಿದ ಕ್ಷೇತ್ರವೇ ಕಿಷ್ಕಿಂದೆ ಕ್ಷೇತ್ರವೆಂದು ಪ್ರಸಿದ್ದಿ ಪಡೆದಿದೆ. ಈ ಹಂಪಿ ಕ್ಷೇತ್ರದಲ್ಲಿ ಶ್ರೀ ರಾಮಚಂದ್ರ ದೇವರು ಸುಗ್ರೀವನ ಸ್ನೇಹವನ್ನು ಪಡೆದು ಚಾತುರ್ಮಾಸವನ್ನು (ನಾಲ್ಕು ತಿಂಗಳು) ಕಳೆದರೆಂದು, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆದರೆಂದು ಪುರಾಣದಲ್ಲಿ ಗೋಚರವಾಗುತ್ತದೆ. ವೇದವ್ಯಾಸ ವಿರಚಿತ ಸಂಸ್ಕೃತ ಮಹಾಗ್ರಂಥ ಸ್ಕಂದ ಪುರಾಣದಲ್ಲಿ ಶ್ರಿ ವಿರೂಪಾಕ್ಷ ಹಾಗೂ ಪಂಪಾ ಕ್ಷೇತ್ರದ ಮಹಿಮೆಯ ವರ್ಣನೆಯನ್ನು ಮಾಡಿದ್ದಾರೆ. ಈ ಭಾಗವನ್ನು ಪಂಪಾಮಹಾತ್ಮೆ ಎನ್ನುವರು ಇದರ ಪ್ರಕಾರ ಪಂಪಾ ಕ್ಷೇತ್ರವು 300 ಯುಗಗಳಷ್ಟು ಪುರಾತನವಾದುದು ಎಂದು ಸ್ಪಷ್ಟವಾಗುತ್ತದೆ. ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನವನ್ನು ರಾಷ್ಟಕೂಟರು, ಬಾದಾಮಿ ಚಾಲುಕ್ಯರು ಹೊಯ್ಸಳರು, ವಿಜಯನಗರದ ಅರಸರು ಹಂತ ಹಂತವಾಗಿ ಅಭಿವೃದ್ದಿ ಪಡಿಸಿದ್ದಾರೆ. ವಿಜಯನಗರ ಅರಸರ ಕಾಲದಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನವು ಸರ್ವತೋಮುಖ ಅಭಿವೃದ್ದಿಯನ್ನು ಹೊಂದಿರುತ್ತದೆ. ವಿಸ್ತಾರವಾದ ಉತ್ತರ ದಿಕ್ಕಿಗೆ ತುಂಗಭದ್ರ ನದಿ ಹರಿಯುತ್ತದೆ ಉಳಿದ ಮೂರು ದಿಕ್ಕಿಗೆ ಕಠಿಣವಾದ ಬಂಡೆಕಲ್ಲುಗಳ ಬೆಟ್ಟದ ಸಾಲುಗಳ ಒಂದು ಕೋಟೆಯಂತಿರುವ ಪ್ರಕೃತಿದತ್ತವಾದ ಅದ್ಭುತವಾದ ಅಯಕಟ್ಟಿನ ಸ್ಥಳವಿರುತ್ತದೆ ಹಾಗೂ ಒಂದು ಮೊಲ ತನ್ನ ರಕ್ಷಣೆಗಾಗಿ ನಾಯಿಯನ್ನು ಓಡಿಸಿಕೊಂಡು ಹೋದುದನ್ನು ನೋಡಿ ಹಂಪಿಯಲ್ಲಿ ಹಿಂದೂ ಧರ್ಮದ ರಕ್ಷಣೆಗಾಗಿ ಶ್ರೀವಿದ್ಯಾರಣ್ಯರ ಆಶೀರ್ವಾದದಿಂದ ಹರಿಹರ ಮತ್ತು ಬುಕ್ಕರು ಕ್ರಿ.ಶ. 1336ರಲ್ಲಿ ಹಂಪಿ ಕ್ಷೇತ್ರದಲ್ಲಿ ಹಿಂದೂ ಧರ್ಮದ ರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯವನ್ನು ಪ್ರತಿಷ್ಠಾಪಿಸಿರುವುದಾಗಿ ಇತಿಹಾಸಕಾರರ ಅಭಿಪ್ರಾಯವಾಗಿರುತ್ತದೆ. ಹೀಗೆ ಪುರಾತನ ಕಾಲದಲ್ಲಿ ಪುಣ್ಯ ಕ್ಷೇತ್ರ ಶಕ್ತಿಶಾಲಿ ಸಾಮ್ರಾಜ್ಯದ ರಾಜಧಾನಿ ಆಯಿತು. ಈ ಕ್ಷೇತ್ರವು ದೇವತಾಂಶ ಸಂಭೂತವೂ ಹಾಗೂ ರಮಣೀಯ ಕ್ಷೇತ್ರವು ಆಗಿರುತ್ತದೆ ಎಂದರೆ ತಪ್ಪಾಗಲಾರದು. ಇಂಥಹ ಕ್ಷೇತ್ರವೇ ಶ್ರೀ ಹಂಪಿ ಮಹಾಕ್ಷೇತ್ರ ಈ ಕ್ಷೇತ್ರದ ಬಗ್ಗೆ ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದಿನಂಪ್ರತಿ ಶೈವಾಗಮ ಪದ್ದತಿಯಲ್ಲಿ ಸಂಪ್ರದಾಯಬದ್ದ ಆಚರಣೆಗಳು, ಪೂಜಾ ವಿಧಿ ವಿದಾನಗಳು, ತ್ರಿಕಾಲ ಪೂಜೆ, ತ್ರಿಕಾಲ ನೈವೇದ್ಯ ಜರುಗುತ್ತದೆ. ಶ್ರೀ ಭುವನೇಶ್ವರಿ ದೇವಿ, ಶ್ರೀ ಪಾರ್ವತಿ ದೇವಿ, ಶ್ರೀ ಭುವನೇಶ್ವರಿ ಸಮೇತ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯವರು ಹಂಪಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಧಾರ್ಮಿಕ ಕ್ಷೇತ್ರವಾಗಿದೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕು ಹಂಪಿ ಕ್ಷೇತ್ರ. ಇತ್ತಿಚಿನ ದಿನಗಳಲ್ಲಿ ಪ್ರವಾಸಿ ತಾಣವಾಗಿಯು ಪ್ರಸಿದ್ದಿ ಪಡೆದಿದೆ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ ಶಿಲ್ಪಕಲೆಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಶ್ರೀ ವ್ಯಾಸರಾಜರು ವಿಜಯನಗರ ಸಾಮ್ರಾಜ್ಯಕ್ಕೆ ಬಂದು ಹಲವಾರು ದಿವಸಗಳಾಗಿತ್ತು. ವ್ಯಾಸತೀರ್ಥರು ವಿದ್ಯಾನಗರಿಗೆ ಬಂದಾಗಲೆಲ್ಲ ಪ್ರತಿ ದಿನ ಚಕ್ರತೀರ್ಥಕ್ಕೆ ಬಂದು ಅಲ್ಲಿ ತುಂಗಭದ್ರ ನದಿಯಲ್ಲಿ ಅವಗಾಹನ ಸ್ನಾನ ಮಾಡಿ ಎತ್ತರದ ಬಂಡೆಯೊಂದರಲ್ಲಿ ಕುಳಿತು ಸ್ನಾನಾಹ್ನೀಕಾದಿಗಳನ್ನು ನೆರೆವೆರಿಸಿ ಬರುತ್ತಿದ್ದರು. ಒಂದು ರಾತ್ರಿ ಅವರೊಂದು ವಿಚಿತ್ರ ಕನಸು ಕಂಡರು. ಕನಸಿನಲ್ಲಿ ಮುಖ್ಯ ಪ್ರಾಣ ದೇವರು (ವಾಯು ದೇವರು) ದರ್ಶನವಿತ್ತು ಆ ತರುವಾಯ ತಮ್ಮ ಹನುಮ-ಭೀಮ-ಮಾದ್ವಾವತಾರ ರೂಪಗಳಿಂದ ಆಶಿರ್ವದಿಸಿ “ವತ್ಸ ನಾವು ನಿವುಗೆ ಒಲಿದಿದ್ದೇವೆ ನಾವು ಈ ಪವಿತ್ರ ನೆಲದಲ್ಲಿ ಹಿಂದೆ ನಮ್ಮ ಮೊದಲ ಅವತಾರ ತಾಳಿ ಜನಿಸಿದ್ದೇವು. ಇದು ನಮ್ಮ ಜನ್ಮ ಭೂಮಿ ನಿನಗೆ ನಾವು ಹನುಮ ರೂಪದಿಂದ ಒಲಿದು ಬರುತ್ತೇವೆ ಚಕ್ರತೀರ್ಥ ಪವಿತ್ರ ತಟದಲ್ಲಿ ನಮ್ಮನ್ನು ಪ್ರತಿಷ್ಠಾಪಿಸು ನಾವು ನಿನ್ನ ಕಾರ್ಯವೆಲ್ಲಕ್ಕೂ ಬೆಂಬಲಿಗರಾಗಿದ್ದು ಜಯ ನೀಡುತ್ತೇವೆ. ಮತ್ತು ಕನ್ನಡ ಸಾಮ್ರಾಜ್ಯದ ಸರ್ವತೋಮುಖ ಅಭೀವೃದ್ದಿಯಾಗುವಂತೆ ಮಾಡಿ ಅನುಗ್ರಹಿಸುತ್ತೇವೆ” ಎಂದು ಅಭಯವಿತ್ತು ಅದೃಶ್ಯರಾದರು. ಎಚ್ಚರಗೊಂಡ ಶ್ರೀಗಳವರು ಸ್ವಪ್ನಾರ್ಥವನ್ನು ನೆನೆದು ಹಿಗ್ಗಿದರು ಶ್ರೀ ಮುಖ್ಯಪ್ರಾಣನ ಅನುಗ್ರಹವಾಯಿತೆಂದು ಸಂತೋಷಿಸಿದರು ಯಾವಾಗ ಎಲ್ಲಿ ಹೇಗೆ ಒಲಿದು ಬರುವರೋ ಎಂದು ಯೋಚಿಸುತ್ತಾ ಪ್ರತಿನಿತ್ಯದ ಪದ್ದತಿಯಂತೆ ಮಿತ ಪರಿವಾರದೊಡನೆ ಚಕ್ರತೀರ್ಥಕ್ಕೆ ಸ್ನಾನ ಮಾಡಲು ಮೇನೆಯಲ್ಲಿ ಕುಳಿತು ಬಂದರು ಚಕ್ರತೀರ್ಥವು ಪರಮ ಪಾವನ ತಿರ್ಥವು ಅಲ್ಲಿ ವರಾಹನಂದಿನಿಯಾದ ತುಂಗಭದ್ರೆಯ ಮಂಗಲಕರ ಮಂಜುಳರವದಿಂದ ನಲಿಯುತ್ತ ಭರದಿಂದ ಹರಿಯುತ್ತಿದ್ದಳು ಭಗವಾನ್ ದಿನಮಣಿಯು ಪೂರ್ವ ದಿಗಂತದಿಂದ ಮೇಲೆದ್ದು ಬಂದು ಅಮೃತಮಯ ಅರುಣಕಿರಣಗಳಿಂದ ಸರ್ವಸುಜನರನ್ನು ಅನಂದಗೊಳಿಸುತ್ತಿದ್ದಾನೆ. ಗುರುವರರು ಸಂಕಲ್ವ ಪೂರ್ವಕ ಚಕ್ರತೀರ್ಥದಲ್ಲಿ ಅವಗಾಹನ ಸ್ನಾನ ಮಾಡಿ ದಂಡೋಕದಿಂದ ಸುಜ್ಜನರನ್ನು ಪವಿತ್ರಗೊಳಸಿ ಮೇಲೆದ್ದು ಬಂದು ಒಂದು ವಿಶಾಲವಾದ ಬಂಡೆಯ ಮೇಲೆ ಕಾಪಾಯಾಂಬರ ಧರಿಸಿ ಕುಳಿತು ನಾಮಧಾರಣ ಮಾಡಿಕೊಂಡು ಪ್ರಾತರಾಹ್ನಿಪ ಜಪತಪಾದಿಗಳನ್ನು ಪೂರೈಸಿ ಶ್ರೀ ಹರಿವಾಯುಗಳ ಧ್ಯಾನದಲ್ಲಿ ಮಗ್ನರಾದರು. ಆಗ ಶ್ರೀಗಳವರ ಹೃದಯ ಮಂದಿರದಲ್ಲಿ ದಿವ್ಯ ಪ್ರಕಾಶವು ಬೆಳಗಿದಂತಾಗಿ ಆ ಬೆಳಕಿನ ಕಾಂತಿವಲಯದಲ್ಲಿ ಕರದಲ್ಲಿ ಗದೆ ಕಮಂಡಲಗಳನ್ನು ಹಿಡಿದು ಪಾದಗಳಲ್ಲಿ ಮಣಿ ಪಾದುಕೆಗಳನ್ನು ಮೆಟ್ಟಿರುವ ಮುಖ್ಯ ಪ್ರಾಣದೇವರು ಮಂದಹಾಸ ಬೀರುತ್ತಾ ನಿಂತಂತೆ ಭಾಸವಾಯಿತು ಆ ಮಂಗಳಕರ ಸ್ವರೂಪವನ್ನು ದರ್ಶಿಸುತ್ತಿದಂತೆ ಪ್ರಾಣದೇವರು ಕಣ್ಮರೆಯಾದರು ಶ್ರೀಯವರು ಕಣ್ತೆರೆದರು ಅವರ ಮುಂಭಾಗದಲ್ಲಿದ್ದ ಕರಿಯಬಂಡೆಯ ಮೇಲೆ ಅವರ ದೃಷ್ಠಿ ಹರಿಯಿತು ಕೂಡಲೇ ಅದು ಮಾಯವಾಗಿ ಅಲ್ಲೋಂದು ಕಪಿಯು ಕುಳಿತಿರುವುದನ್ನು ನೋಡಿದರು ತಮ್ಮ ಹೃದಯಗುಹೆಯಲ್ಲಿ ದರ್ಶನವಿತ್ತು ಅನುಗ್ರಹಿಸಿದ ಪ್ರಾಣದೇವರ ಆಕಾರತಾಳಿ ನಿಂತಂತಾಗಿ ಮತ್ತೆ ಬರೆ ಬಂಡೆಗಲ್ಲಾಗಿ ಗೋಚರಿಸಿತು. ವ್ಯಾಸತೀರ್ಥರ ಮುಖದಲ್ಲಿ ಮಂದಹಾಸ ಮಿನುಗಿತು. ಹೃದಯಭಕ್ತಿ ಭರದಿಂದ ಉಬ್ಬಿತು ಕಣ್ಣಾಲಿಗಳು ತೇವಗೊಂಡವು “ದೇವ ಅನುಗೃಹಿತನಾದೆ” ಎಂದು ಗದ್ಗದ ಕಂಠದಿಂದ ಸುರಿದರು ಹತ್ತಿರ ಆಹ್ನೀಕ ಪಾತ್ರೆಯಲ್ಲಿದ್ದ ಅಂಗಾರದಿಂದ ತಮಗೆ ದರ್ಶನವಿತ್ತ ಶ್ರೀಪ್ರಾಣದೇವರನ್ನು ಆ ಬಂಡೆಯ ಮೇಲೆ ಚಿತ್ರಿಸಿದರು. ಚಿತ್ರ ಸುಂದರವಾಗಿ ಮೂಡಿಬಂದಿತ್ತು ಆದರೇನಾಶ್ಚರ್ಯ ಅವರು ಬರೆದ ಮಾರುತಿ ಚಿತ್ರ ಕಣ್ಮರೆಯಾಗಿ ಮತ್ತೆ ಆ ಬಂಡೆ ಬರಿಗಲ್ಲಾಗಿ ನಿಂತಿತು. ಶ್ರೀ ವ್ಯಾಸರಾಜರು ಮತ್ತೆ ಅದೇ ಚಿತ್ರವನ್ನು ಬರೆದರು ಪುನಃ ಅದು ಅದೃಸ್ಯವಾಯಿತು ಶ್ರೀಯವರು “ಜೀವೋತ್ತಮ” ವಾಯುನಂದನ ದಾಸನೊಡನೆ ವಿನೋದ ಮಾಡುತ್ತಿರುವೆಯಾ? ಪ್ರಸನ್ನನಾಗು ಸ್ವಾಮಿ ಎಂದು ಪ್ರಾರ್ಥಿಸಿ ಮತ್ತೆ ಚಿತ್ರವನ್ನು ಬರೆದರು ಹೀಗೆ ಹನ್ನೆರಡು ಸಲ ಪುನಃ ಪುನಃ ಪ್ರಾಣ ದೇವರ ಚಿತ್ರವನ್ನು ಬರೆಯುವುದು ಬರೆದೊಡನೆ ಅದು ಅದೃಶ್ಯವಾಗುವುದು ಹೀಗೆ ಜರುಗಿತು. ವ್ಯಾಸರಾಜರು ಇದೇಕೆ ಹೀಗಾಗುತ್ತಿದೆ ಎಂದು ಚಿಂತಿಸುತ್ತಿರಲು ಮನದಲ್ಲಿ ಎನೋ ಸ್ಪುರಿಸಿದಂತಾಗಿ ನಸುನಗುತ್ತಾ ಆ ಬಂಡೆಯ ಮೇಲೆ ಮೊದಲೊಂದು ಪ್ರಾಣದೇವರ ಯಂತ್ರವನ್ನು ಬರೆದು ಅದರ ಸುತ್ತಲೂ ಹಿಂದೆ ತಾವು ಬರೆದ ಹನ್ನೆರಡು ಕಪಿ ವೀರರ ಹನುಮಂತನ ಚಿತ್ರಗಳನ್ನು ಬರೆದರು ಒಂದರ ಬಾಲ ಮತ್ತೊಂದಕ್ಕೆ ಗಂಟು ಹಾಕಿದಂತೆ ಹನ್ನೆರಡು ಪ್ರಾಣದೇವರ ಚಿತ್ರಗಳನ್ನು ಯಂತ್ರದ ಕಾವಲಾಗಿ ಬರೆದರು ಅನಂತರ ಬೀಜಾಕ್ಷರಗಳನ್ನು ಬರೆದು ಯಂತ್ರದ ಮಧ್ಯಭಾಗದಲ್ಲಿ ಶ್ರೀ ಪ್ರಾಣದೇವರ ದಿವ್ಯ ಸ್ವರೂಪವನ್ನು ಚಿತ್ರಿಸಿ ದಿಗ್ಭಂಧನ ಮಾಡಿ “ ಪ್ರಭು ವಾಯುನಂದನ ಹನುಮ-ಭೀಮ-ಮಾಧ್ವಾಬಿಧ ಶ್ರೀ ಭಾರತೀರಮಣ ಮುಖ್ಯ ಪ್ರಾಣದೇವ ಕನಸಿನಲ್ಲಿ ಒಲಿದು ಬರುವುದಾಗಿ ಅಭಯವಿತ್ತು ದಾಸನೊಡನೆ ಏಕಿಂತು ಸರಸವಾಡುತ್ತಿರುವೆ? ಭಕ್ತವತ್ಸಲನಾದ ನಿನಗಿದು ಶೋಭಿಸುವುದೇ? ದೇವ, ಈಗ ನಿನ್ನನ್ನು ಈ ಯಂತ್ರದಲ್ಲಿ ದಿಗ್ಭಂಧನ ಮಾಡಿ ಚಿತ್ರಿಸಿದ್ದೇನೆ ಪ್ರಸನ್ನನಾಗಿ ಸ್ಥಿರವಾಗಿ ನಿಂತು ಕನ್ನಡನಾಡಿನ ಉನ್ನತಿ ಭಕ್ತ ಜನರ ಮನೋಭೀಷ್ಠೆಗಳನ್ನು ಪೂರ್ಣ ಮಾಡುತ್ತ ಅನುಗ್ರಹಿಸು ಎಂದು ಪ್ರಾರ್ಥಿಸಿ, ತುಳಸೀ ಪುಷ್ಷಗಳನ್ನು ಅರ್ಪಿಸಿದರು. ಆಗ ಯಂತ್ರಬದ್ದನಾದ ಪ್ರಾಣದೇವರು ತನ್ನ ಅಂತರಂಗದ ಭಕ್ತರಾದ ವ್ಯಾಸಮುನಿಗಳಲ್ಲಿ ಪ್ರಸನ್ನನಾಗಿ ನಗುನಗುತ್ತಾ ದರ್ಶನವಿತ್ತು ಅಭಯ ಪ್ರಧಾನ ಮಾಡಿ ಅಂತರ್ಧಾನನಾದನು ಗುರುಗಳು ಅಂಗಾರದಲ್ಲಿ ಬರೆದ ಚಿತ್ರ ಬಂಡೆಗಲ್ಲಿನಲ್ಲಿ ಉಬ್ಬಿ ಸಾಕಾರಮೂರ್ತಿಯಾಗಿ ಕಂಗೊಳಿಸಿತು. ಯಂತ್ರೋದ್ದಾರಕ ಪ್ರಾಣದೇವರನ್ನು ಭಕ್ತಿಯಿಂದ ಸ್ತುತಿಸಿ ನಮಸ್ಕರಿಸಿದರು. ಈ ಅದ್ಭುತವನ್ನು ಕಣ್ಣಾರೆಕಂಡ ಮಠದ ಪರಿವಾರ ಚಕ್ರತೀರ್ಥಕ್ಕೆ ಸ್ನಾನ ಮಾಡಲು ಆಗಮಿಸಿದ್ದ ಧಾರ್ಮಿಕರು ವ್ಯಾಸರಾಜರ ಆಗಾದ ಮಹಿಮೆಯನ್ನು ಕೊಂಡಾಡಹತ್ತಿದರು. ಅಂದು ಸಂಜೆ ಶ್ರೀಯವರು ನರಸನಾಯಕನನ್ನು ಕರೆಯಿಸಿಕೊಂಡು ಚಕ್ರತೀರ್ಥಕ್ಕೆ ಬಂದು “ಕ್ಷಮಾಧಿಪತಿಗಳೇ ನಾವು ತಿರುಪತಿ ಶ್ರೀ ರಂಗಗಳಲ್ಲಿ ಕೆಲ ಪ್ರಾಣದೇವರನ್ನು ಪ್ರತಿಷ್ಠಿಸಿರುವುದನ್ನು ನೀವು ಬಲ್ಲಿರಿ , ಕನ್ನಡ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ದಿ, ಶತ್ರುಪರಾಜಯ ಪ್ರಜೆಗಳ ಕ್ಷೇಮಗಳಿಗಾಗಿ ನಾಡಿನ ಎಲ್ಲಾ ಭಾಗಗಳಲ್ಲಿ ನಾಡಿನ ಎಲ್ಲೆಯ ಗುರುತಾಗಿ ನಾವು 732 ಪ್ರಾಣದೇವರನ್ನು ಪ್ರತಿಷ್ಠಿಸಲು ಮನಸಾ ಸಂಕಲ್ಪಿಸಿದೆವು. ಸಂಕಲ್ಪವನ್ನು ಯಶಸ್ವಿಗೊಳಿಸಲೋ ಎಂಬಂತೆ ಶ್ರೀ ಪ್ರಾಣದೇವರು ನಮಗೊಲಿದು ಇಲ್ಲಿ ಮೈದೋರಿದ್ದಾರೆ. ಈ ದೇವರನ್ನು “ಯಂತ್ರೋದ್ದಾರಕ ಪ್ರಾಣದೇವರು” ಎಂಬ ಹೆಸರಿನಿಂದ ಇದೇ ಸ್ಥಳದಲ್ಲಿ ಶನಿವಾರದಂದು ಪ್ರತಿಷ್ಠಾಪಿಸಲು ಇಚ್ಚಿಸಿದ್ದೇನೆ. ಇದರಂತೆ ಸಾಮ್ರಾಜ್ಯದಲ್ಲೆಲ್ಲಾ ಪ್ರಾಣದೇವರನ್ನು ಪ್ರತಿಷ್ಠಾಪಿಸಲು ಆಶಿಸಿದ್ದೇವೆ. ನೀವು ಇದಕ್ಕೆ ಅನುಕೂಲ ಮಾಡಿಕೊಡಬೇಕು ನೀವು ಕ್ಷಮಾಧಿಪತಿಗಳಾದ ತರುಣದಲ್ಲೆ ಶ್ರೀ ಪ್ರಾಣದೇವರು ಇಲ್ಲಿ ಅಭಿವ್ಯಕ್ತರಾಗಿರುವುದು ಸಾಮ್ರಾಜ್ಯದ ಮತ್ತು ನಿಮ್ಮ ಅಭ್ಯದುಯಕ್ಕೆ ಶುಭ ಸೂಚನೆಯಾಗಿದೆ. ಈ ದೇವರ ಪ್ರತಿಷ್ಠೆಗೆ ಸಕಲ ಅನುಕೂಲಗಳನ್ನೇರ್ಪಡಿಸಿ ಕೊಟ್ಟು ಶ್ರೀ ಪ್ರಾಣದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ಹೇಳಲು ಆನಂದ ತುಂದಿಲರಾದ ನರಸನಾಯಕರು “ಗುರುದೇವರ ಅಪ್ಪಣೆಯಂತಾಗಲಿ” ಎಂದು ವಿಜ್ಞಾಪಿಸಿ ಭಕ್ತಿಪರವಶನಾಗಿ ಗುರುಗಳಿಗೆ ನಮಿಸಿ ಅರಮನೆಗೆ ತೆರಳಿದರು. ಶ್ರೀಯವರು ಮಠಕ್ಕೆ ಚಿತ್ತೈಸಿದರು. ಚಕ್ತತಿರ್ಥದ ದಡದಲ್ಲಿ ಅಸಾಧ್ಯ ಜನಸಂದಣಿ ಸಹಸ್ರಾರು ಜನರು ಶ್ರೀ ವ್ಯಾಸರಾಜರು ಭಕ್ತಿಪೂರ್ವಕವಾಗಿ ನೆರೆವೆರಿಸಿದ ಶ್ರೀ ಯಂತ್ರೋದ್ದಾರಕ ಪ್ರಾಣದೇವರ ಪ್ರತಿಷ್ಠಾಪನಾ ಮಹೋತ್ಸವವನ್ನು ವೀಕ್ಷಿಸಿ ಆನಂದ ಪರವಶರಾಗಿದ್ದಾರೆ. ವೈದಿಕ ವಿಧಿ ಪೂರ್ವಕವಾಗಿ ಪ್ರತಿಷ್ಠೆಯನ್ನು ನೆರೆವೇರಿಸಿದ್ದು ಶ್ರೀ ವ್ಯಾಸರಾಜರು ಪಂಚಾಮೃತಾದಿಗಳನ್ನು ನೆರವೇರಿಸಿ ದೇವರಿಗೆ ಫಲಸಮರ್ಪಣೆ ಮಾಡಿ ಮಹಾಮಂಗಳಾರತಿಯನ್ನು ನೆರವೇರಿಸಿ ಪ್ರಾರ್ಥಿಸುತಿರುವಾಗ ಜನಸ್ತೋಮ “ಜಯಜಯ ಯಂತ್ರೋದ್ದಾರಕ ಪ್ರಾಣದೇವ” ಎಂದು ಘೋಷಿಸಿದರು.
