ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕು ಹಂಪಿ ಈ ಕ್ಷೇತ್ರವು ಕರ್ನಾಟಕ ಇತಿಹಾಸದಲ್ಲಿ ಅತ್ಯಂತ ವೈಭವಯುತವಾಗಿ ಬೆಳೆದು ಹಕ್ಕ ಮತ್ತು ಬುಕ್ಕ ರಾಜರಿಂದ ವಿಜಯನಗರ ಸಾಮ್ರಾಜ್ಯ ನಿರ್ಮಿಸಿ ಮುತ್ತುರತ್ನಗಳನ್ನು ಕೊಳಗದಲ್ಲಿ ಅಳೆಯುತ್ತಿದ್ದ ಕ್ಷೇತ್ರವೇ ಹಂಪೆ ಇದನ್ನು ವಿಜಯನಗರ ಸಾಮ್ರಾಜ್ಯವೆಂದು ಕರೆಯಲ್ಪಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಇರುವ ಅತ್ಯಂತ ರಮಣೀಯವಾದ ದೇವಾಲಯವೆಂದರೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಎಲ್ಲಾ ರೀತಿಯ ಭಕ್ತರು ನಡೆದುಕೊಳ್ಳುವ ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಅತಿ ಪ್ರಸಿದ್ದವಾದ ಪುಣ್ಯ ಕ್ಷೇತ್ರವಾಗಿದೆ. ಪೌರಾಣಿಕ ಹಿನ್ನೆಲೆ ಇದೆ ಅದುವೇ “ದಕ್ಷಬ್ರಹ್ಮನ ಮಗಳು ದ್ರಾಕ್ಷಾಯಿಣಿ ದೇವಿಯು ದಕ್ಷ ಬ್ರಹ್ಮನು ಏರ್ಪಡಿಸಿದ ಯಜ್ಞಕುಂಡದಲ್ಲಿ ಧುಮುಕಿದ ಮೇಲೆ ಪರಮೇಶ್ವರನು ಹಿಮಾಲಯದಿಂದ ದಕ್ಷಿಣ ಮಾರ್ಗವಾಗಿ ಬಂದು ಶ್ರೀ ಹಂಪಿ ಕ್ಷೇತ್ರದ ಹೇಮಕೂಟ ಪರ್ವತದಲ್ಲಿ ತಪಸ್ಸಿಗೆ ಕುಳಿತನು. ಮನ್ಮಥನು ಪರಮೇಶ್ವರನ ತಪಸ್ಸನ್ನು...