ಶ್ರೀ ಆಂಜನೇಯಸ್ವಾಮಿ ದೇವಾಲಯ, ಬಾಣಸವಾಡಿ, ಬೆಂಗಳೂರು - 560043, ಬೆಂಗಳೂರು .
Sri Anjaneya swamy temple, Banasawadi, Bengaluru - 560043, Bengaluru Urban District [TM000085]
×
Temple History
ಸ್ಥಳ ಪುರಾಣ
ಬೆಂಗಳೂರು ಪೂರ್ವ ತಾಲ್ಲೂಕು, ದೊಡ್ಡಬಾಣಸವಾಡಿ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ಮಹಾನಗರದ ದಂಡಿನ ಭಾಗದಿಂದ ಐದು ಮೈಲಿನ ಅಂತರದಲ್ಲಿದೆ. ಇದೊಂದು ಪುರಾತನ ದೇವಾಲಯವೆನಿಸಿದೆ. 1962 ರಲ್ಲಿ ದೇವಾಲಯದ ವಿಮಾನ ಗೋಪುರ, ಗರ್ಭಗೃಹ ಹಾಗೂ ಮುಖ ಮಂಟಪಗಳ ಜೀರ್ಣೋದ್ಧಾರ ಕಾರ್ಯವನ್ನು ಮಾಡಲಾಗಿದೆ. ಸದರಿ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಶ್ರೀಯುತ ಮಣಿ ಅಯ್ಯರ್ ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿದ್ದು, ಇವರು ಹಾಗೂ ಗ್ರಾಮಸ್ಥರು ಮತ್ತು ಅರ್ಚಕರು ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುತ್ತಾರೆಂದು ಹಿರಿಯ ಅರ್ಚಕರು ಹಾಗೂ ಹಿರಿಯ ಗ್ರಾಮಸ್ಥರಿಂದ ಮಾಹಿತಿ ದೊರಕಿರುತ್ತದೆ. ಮೂಲ ವಿಗ್ರಹವು ವೀರಾಂಜನೇಯ ಭಂಗಿಯಲ್ಲಿದೆ. ಸ್ವಾಮಿಯು ಪೂರ್ವಾಭಿಮುಖವಾಗಿ ನಿಂತಿದ್ದಾರೆ. ವಿಗ್ರಹವು ಸಾಲಿಗ್ರಾಮ ಶಿಲೆಯಿಂದ ಕೂಡಿದ್ದು, ಶಿಲೆಯಲ್ಲಿ ಶಂಖ, ಚಕ್ರ, ಸೂರ್ಯಚಂದ್ರ, ಕಮಲ, ಕೈಯಲ್ಲಿ ಮಾವಿನ ಹಣ್ಣು ಹೊಂದಿದ್ದು, ಇದು ಏಕಶಿಲೆಯಾಗಿರುತ್ತದೆ. ಸ್ವಾಮಿಗೆ ವಿಶೇಷ ವಡೆಹಾರ...ಬೆಂಗಳೂರು ಪೂರ್ವ ತಾಲ್ಲೂಕು, ದೊಡ್ಡಬಾಣಸವಾಡಿ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ಮಹಾನಗರದ ದಂಡಿನ ಭಾಗದಿಂದ ಐದು ಮೈಲಿನ ಅಂತರದಲ್ಲಿದೆ. ಇದೊಂದು ಪುರಾತನ ದೇವಾಲಯವೆನಿಸಿದೆ. 1962 ರಲ್ಲಿ ದೇವಾಲಯದ ವಿಮಾನ ಗೋಪುರ, ಗರ್ಭಗೃಹ ಹಾಗೂ ಮುಖ ಮಂಟಪಗಳ ಜೀರ್ಣೋದ್ಧಾರ ಕಾರ್ಯವನ್ನು ಮಾಡಲಾಗಿದೆ. ಸದರಿ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಶ್ರೀಯುತ ಮಣಿ ಅಯ್ಯರ್ ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿದ್ದು, ಇವರು ಹಾಗೂ ಗ್ರಾಮಸ್ಥರು ಮತ್ತು ಅರ್ಚಕರು ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುತ್ತಾರೆಂದು ಹಿರಿಯ ಅರ್ಚಕರು ಹಾಗೂ ಹಿರಿಯ ಗ್ರಾಮಸ್ಥರಿಂದ ಮಾಹಿತಿ ದೊರಕಿರುತ್ತದೆ. ಮೂಲ ವಿಗ್ರಹವು ವೀರಾಂಜನೇಯ ಭಂಗಿಯಲ್ಲಿದೆ. ಸ್ವಾಮಿಯು ಪೂರ್ವಾಭಿಮುಖವಾಗಿ ನಿಂತಿದ್ದಾರೆ. ವಿಗ್ರಹವು ಸಾಲಿಗ್ರಾಮ ಶಿಲೆಯಿಂದ ಕೂಡಿದ್ದು, ಶಿಲೆಯಲ್ಲಿ ಶಂಖ, ಚಕ್ರ, ಸೂರ್ಯಚಂದ್ರ, ಕಮಲ, ಕೈಯಲ್ಲಿ ಮಾವಿನ ಹಣ್ಣು ಹೊಂದಿದ್ದು, ಇದು ಏಕಶಿಲೆಯಾಗಿರುತ್ತದೆ. ಸ್ವಾಮಿಗೆ ವಿಶೇಷ ವಡೆಹಾರ ಹಾಗೂ ಬೆಣ್ಣೆ ಅಲಂಕಾರ ಮತ್ತು ನಿತ್ಯ ಅಭಿಷೇಕ ನಡೆಯುತ್ತದೆ ಹಾಗೂ ಪ್ರತಿ ಶನಿವಾರ ಹೂವಿನ ಅಲಂಕಾರದಿಂದ ಶೃಂಗರಿಸಲಾಗುತ್ತದೆ. ದೇವರ ಉತ್ಸವ ವಿಗ್ರಹವಾದರೂ ವೀರಾಂಜನೇಯ ರೂಪದಲ್ಲಿಯೇ ಇದೆ.
ದೇವಾಲಯದ ಆವರಣದಲ್ಲಿ ಶ್ರೀ ರಾಮಚಂದ್ರ ಪ್ರಭು ಹಾಗೂ ಬಸವೇಶ್ವರ ಸನ್ನಿಧಿಯೂ ಇವೆ. ಪಾಂಚರಾತಾಗ್ರಮ ಪದ್ಧತಿಯಂತೆ ಸೇವಾದಿಗಳು ನಡೆಯುತ್ತವೆ. ಪ್ರತಿ ವರ್ಷ ಚೈತ್ರ ಮಾಸದ ಶ್ರವಣ ನಕ್ಷತ್ರದಂದು ವೈಭವದಿಂದ ರಥೋತ್ಸವವು ಜರುಗುತ್ತದೆ. ಹನುಮ ಜಯಂತಿ ಹಾಗೂ ವೈಕುಂಠ ಏಕಾದಶಿ ದಿನಗಳಲ್ಲಿ ವಿಶೇಷ ಪೂಜಾದಿಗಳು ನಡೆಯುತ್ತವೆ. ಪ್ರತಿ ಶನಿವಾರವೂ ಮಹಾನಗರದ ಭಕ್ತರು ತಪ್ಪದೇ ಈ ದೇವರ ದರ್ಶನ ಮಾಡಿಕೊಂಡು ಬರುವ ಸಂಪ್ರದಾಯವಿದೆ. ಈತನ ಭಕ್ತ ಸಮೂಹವು ಅಪಾರವಾಗಿದೆ ಇದು ಈ ದೇವಾಲಯದ ವಿಶೇಷತೆಯಾಗಿದೆ.