ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿಕಾರಿಪುರ ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಾಲಯ ಪ್ರವರ್ಗ “ಎ” ಅಧಿಸೂಚಿತ ಮುಜರಾಯಿ ದೇವಾಲಯವಾಗಿರುತ್ತದೆ. ಈ ದೇವರ ಮತ್ತೊಂದು ಹೆಸರು ಭ್ರಾಂತೇಶ ಎಂಬುದು ಇನ್ನೊಂದು ವಿಶೇಷ. ಶ್ರೀ ರಾಮಧೂತ, ವಾನರಯೋಧ, ವಾಯುಪುತ್ರ, ಹನುಮಂತ, ಆಂಜನೇಯ ಎಂದೆಲ್ಲಾ ಕರೆಸಿಕೊಳ್ಳುವ ದೇವರು ಇಲ್ಲಿ ಭ್ರಾಂತೇಶ, ಹುಚ್ಚರಾಯಸ್ವಾಮಿ ಎಂದು ಕರೆಸಿಕೊಂಡಿದ್ದಾನೆ. ಈ ದೇವಾಲಯ ಹುಚ್ಚರಾಯಕೆರೆ ದಂಡೆ ಮೇಲೆ ಹಾಗೂ ಶಿಕಾರಿಪುರ ಪಟ್ಟಣದ ಗಡಿಭಾಗದಲ್ಲಿರುತ್ತದೆ. ಶ್ರೀ ಹುಚ್ಚರಾಯಸ್ವಾಮಿ ದೇವಾಲಯ ಸರಿ ಸುಮಾರು 17ನೇ ಶತಮಾನದ್ದು ಎಂದು ಊಹಿಸಲಾಗುವುದು ಈ ತಾಲ್ಲೂಕಿನ ಪ್ರಮುಖ ಐತಿಹಾಸಿಕ ಹಿನ್ನೆಯುಳ್ಳ ದೇವಸ್ಥಾನಗಳಲ್ಲಿ ಒಂದು. 1941ರ ಮೈಸೂರು ಪುರಾತ್ವ ಇಲಾಖೆ ವರದಿಯಂತೆ ಈ ದೇವಾಲಯವನ್ನು ನಿರ್ಮಿಸಿದವರು ವೀರಶೈವರಾದ ಹುಚ್ಚಪ್ಪಸ್ವಾಮಿ ಎನ್ನಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕವಳೆದುರ್ಗ ಮಠದಿಂದ ಬಂದು ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ನೆಲೆಸಿದ್ದ...
| 06:30 AM IST - 01:00 PM IST | |
| 04:30 PM IST - 08:00 PM IST | |
| 08:30 PM IST - 08:35 PM IST | |
| ಪ್ರತಿ ಶನಿವಾರ ಬೆಳಗ್ಗೆ 6.00 ರಿಂದ ರಾತ್ರಿ 9.00ರ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿರುತ್ತದೆ. ವಾರದ ಉಳಿದ ದಿನಗಳಲ್ಲಿ ಬೆಳಗ್ಗೆ 6.30 ರಿಂದ ಮದ್ಯಾಹ್ನ 1.00ರ ವರೆಗೆ ಹಾಗೂ ಸಂಜೆ 4.30 ರಿಂದ ರಾತ್ರಿ 8.00 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿರುತ್ತದೆ. | |