ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಿಂದ ಎರಡು ಕಿ.ಮಿ.ದೂರದಲ್ಲಿ ಮಾರೇಹಳ್ಳಿ ಎಂಬ ಸ್ಥಳವಿದೆ. ಇಲ್ಲಿ ಪುರಾಣ ಪ್ರಸಿದ್ದವಾಗಿರುವ ಶ್ರೀ ಲಕ್ಷೀನರಸಿಂಹಸ್ವಾಮಿ ದೇವಸ್ಥಾನ ಇರುತ್ತದೆ. ಪುರಾಣ ಕಾಲದಲ್ಲಿ ಸುಯಜ್ಷೆ ಹಾಗೂ ಲಂಬಕರ್ಣ ಮುಂತಾದ ಋಷಿಗಳು ತಪಸ್ಸು ಮಾಡಿ ಶ್ರೀ ಲಕ್ಷೀನರಸಿಂಹ ಸ್ವಾಮಿಯನ್ನು ಪ್ರತ್ಯೇಕ ಮಾಡಿಕೊಂಡು ಈ ಋಷಿಗಳ ಪ್ರಾರ್ಥನೆಯಂತೆ ಸ್ವಾಮಿಯು ಈ ಸ್ಥಳದಲ್ಲಿ ಸುಮಾರ 10ನೇ ಶತಮಾನದಲ್ಲಿ ನೆಲೆಗೊಂಡಿದೆ ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಾಲಯವನ್ನು ಮೊದಲನೇ ರಾಜರಾಜ ಚೋಳ ಜೀರ್ಣೋದ್ದಾರ ಮಾಡಿದನೆಂದು ಪ್ರತೀತಿ ಇದೆ. ಈ ದೇವಾಲಯದ ಸುತ್ತ ಅಗ್ರಹಾರವಿತ್ತೆಂದು ಹಾಗೂ ಮುನಿಯ ಶಾಪದಿಂದ ಅಗ್ರಹಾರ ನಾಶವಾಯಿತೆಂದು ದಂತ ಕಥೆಯಿದೆ. ಮಾರೇಹಳ್ಳಿ ಶ್ರೀ ಲಕ್ಷೀನರಸಿಂಹ ಸ್ವಾಮಿ ಈ ದೇವಾಲಯವು ಅತ್ಯಂತ ಪ್ರಸಿದ್ದವಾಗಿದ್ದು ಪ್ರಪಂಚದ ನಾನಾ ಕಡೆಗಳಿಂದ ಭಕ್ತಾಧಿಗಳು ಆಗಮಿಸಿ ಈ ದೇವರ ಸೇವೆಯನ್ನು ಮಾಡುತ್ತಾರೆ. ಈ...